ಭಗವಂತನಲ್ಲಿ ಭಕ್ತಿ, ಕರ್ತವ್ಯದಲ್ಲಿ ನಿಷ್ಠೆ: ಪೇಜಾವರ ಶ್ರೀ
Team Udayavani, Sep 13, 2017, 7:35 AM IST
ಉಡುಪಿ: ಶ್ರೀಕೃಷ್ಣ ಜಯಂತಿ ಆಚರಿಸುವಾಗ ಪೂಜೆ, ಅರ್ಚನೆ, ಉತ್ಸವ ಎಲ್ಲದರ ಜತೆಗೆ ಶ್ರೀಕೃಷ್ಣ ಯಾವ ಉದ್ದೇಶ ಕ್ಕಾಗಿ ಅವತರಿಸಿದ್ದಾನೆ ಅನ್ನುವುದರ ಬಗೆಗೂ ಅರಿತುಕೊಳ್ಳುವುದು ಮುಖ್ಯ. ಆಗ ಶ್ರೀ ಕೃಷ್ಣಾಷ್ಟಮಿಗೆ ಸಾರ್ಥಕತೆ ಬರುತ್ತದೆ. ಪರಮಾತ್ಮನಲ್ಲಿ ಭಕ್ತಿ ಹಾಗೂ ನಾವು ಮಾಡುವ ಕರ್ತವ್ಯದಲ್ಲಿ ನಿಷ್ಠೆ (Duty and Devotion) ಹೊಂದುವುದು. ಇದು ಜಗದ್ಗುರುವಾಗಿ ಅವತರಿಸಿದ ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಮಾನವ ಕುಲಕ್ಕೆ ನೀಡಿದ ಸಂದೇಶ.
ನಾವು ಮಾಡುವ ಕರ್ತವ್ಯದಲ್ಲಿ ಭಗವಂತನನ್ನು ಕಾಣಬೇಕು. ಕರ್ತವ್ಯ ಅಂದರೆ ಪೂಜೆ, ಪುನಸ್ಕಾರ ಮಾತ್ರವಲ್ಲ. ನಮ್ಮ ವೃತ್ತಿಯೇ ಕರ್ತವ್ಯ. ರೈತರು, ಶಿಕ್ಷಕರು, ಕುಂಬಾರರು ಹೀಗೆ ಹೊಟ್ಟೆ ಪಾಡಿಗೆ ಮಾಡುವ ಯಾವ ಕೆಲಸವಾದರೂ ಮೋಸ, ವಂಚನೆ ರಹಿತವಾಗಿ ಮಾಡಿದರೆ ಭಗವಂತ ಪೂಜೆ ಸಲ್ಲಿಸಿದಂತೆ. ಅತಿಯಾದ ಸ್ವಾರ್ಥ ಒಳ್ಳೆಯದಲ್ಲ ಎಂದು ಶ್ರೀ ಕೃಷ್ಣ ಹೇಳುತ್ತಾನೆ. ಭ್ರಷ್ಟಚಾರದ ಮೂಲವೇ ದುರಾಸೆೆ. ಎಷ್ಟು ಅಗತ್ಯವೋ ಅಷ್ಟು ಮಾತ್ರ ಅಪೇಕ್ಷೆ ಪಡಿ. ಅತಿ ಆಸೆ ಬೇಡ. ಕೆಟ್ಟ ಯೋಚನೆ ಮಾಡ ಬೇಡಿ. ಸ್ವಾರ್ಥ ಬಿಟ್ಟು , ಸರಳ ಜೀವನ ನಡೆಸಿ, ಆಗ ಭ್ರಷ್ಟಾಚಾರಕ್ಕೆ ಅವಕಾಶವೇ ಇರುವು ದಿಲ್ಲ. ಇದರಿಂದ ಜೀವನದಿಂದ ದುವ್ಯìಸನ ವನ್ನೂ ದೂರವಿಡಬಹುದು. ದುವ್ಯìಸನ ಮುಕ್ತ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಕೊಟ್ಟ ಸಂದೇಶ ಪೂರಕ. ಪರಮಾತ್ಮನಲ್ಲಿ ಭಕ್ತಿ ನಿಸ್ವಾರ್ಥ ಕರ್ತವ್ಯ ಇವೆರಡು ಇದ್ದರೆ ಅನ್ಯಾಯ ನಡೆಯಲು ಸಾಧ್ಯವೇ ಇಲ್ಲ, ಉತ್ತಮ ಸಮಾಜ ನಿರ್ಮಾಣವೇ ಶ್ರೀ ಕೃಷ್ಣನ ಸಂದೇಶ.
– ಶ್ರೀ ವಿಶ್ವೇಶತೀರ್ಥ ಶ್ರೀಪಾದರು
ಪರ್ಯಾಯ ಶ್ರೀ ಪೇಜಾವರ ಮಠ, ಶ್ರೀ ಕೃಷ್ಣಮಠ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್