ಖಾಯಂ ಸಿಬಂದಿ ನೇಮಕಕ್ಕೆ ಜಿಲ್ಲಾಸ್ಪತ್ರೆಯಿಂದ ಪ್ರಸ್ತಾವನೆ
Team Udayavani, Sep 9, 2019, 5:46 AM IST
ಉಡುಪಿ: ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಆದೇಶವಾಗಿ ಸುಮಾರು 18 ವರ್ಷ ಕಳೆದರೂ ಅಗತ್ಯವಿರುವ ಸಿಬಂದಿ ಭರ್ತಿಯಾಗದ ಹಿನ್ನೆಲೆ ಜಿಲ್ಲಾಸ್ಪತ್ರೆಯಿಂದ ಹೆಚ್ಚುವರಿ ಸಿಬಂದಿ ನೇಮಕಾತಿ ಪ್ರಸ್ತಾವನೆ ಸಲ್ಲಿಕೆಗೆ ಸಿದ್ಧತೆ ನಡೆಯುತ್ತಿದೆ.
ಹೆಸರು ಮಾತ್ರ ಬದಲಿ
1997ರ ಆಗಸ್ಟ್ ತಿಂಗಳಲ್ಲಿ ನೂತನವಾಗಿ ರಚನೆಯಾದ 7 ಜಿಲ್ಲೆಗಳಲ್ಲಿ ಒಂದಾದ ಜಿಲ್ಲೆಗೆ ವಿವಿಧ ಇಲಾಖೆಗಳಿಗೆ ಜಿಲ್ಲಾ ಮಟ್ಟದ ಸ್ಥಾನ ನೀಡಿ, ಅಗತ್ಯವಿರುವ ಸಿಬಂದಿಯನ್ನು ನೇಮಕ ಮಾಡಿದೆ. ಆದರೆ ಸರಕಾರ ಜಿಲ್ಲಾಸ್ಪತ್ರೆಯಾಗಿ ಬದಲಾದ ಈ ತಾಲೂಕು ಕೇಂದ್ರದ ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯ ಹಾಗೂ ಸಿಬಂದಿ ನೇಮಕ ಮಾಡಲು ಮನಸ್ಸು ಮಾಡಿಲ್ಲ.
ಜಿಲ್ಲಾಸ್ಪತ್ರೆಗೆ ತಾಲೂಕು ವ್ಯವಸ್ಥೆ !
2001ರ ಸರಕಾರಿ ಆದೇಶದ ಪ್ರಕಾರ ಜಿಲ್ಲಾಸ್ಪತ್ರೆಯಲ್ಲಿ 250 ಹಾಸಿಗೆ ಹಾಗೂ 195 ಮಂದಿ ಸಿಬಂದಿ ಇರಬೇಕು. ಆದರೆ ಪ್ರಸ್ತುತ ಜಿಲ್ಲಾಸ್ಪತ್ರೆ ಎನ್ನಿಸಿಕೊಂಡಿರುವ ಆಸ್ಪತ್ರೆಯಲ್ಲಿ ತಾಲೂಕು ಆಸ್ಪತ್ರೆಯಾಗಿರುವಾಗ ಮಂಜೂರಾದ 128 ಹುದ್ದೆಗಳಲ್ಲಿ ಕೇವಲ 76 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 50 ಹುದ್ದೆಗಳು ಖಾಲಿಯಿವೆ.
ಪ್ರಸ್ತಾವನೆಯಲ್ಲಿ ಏನಿದೆ?
ಜಿಲ್ಲಾಸ್ಪತ್ರೆಗೆ ಸರಕಾರಿ ಸೌಲಭ್ಯಗಳ ಜತೆಗೆ ಸರಕಾರೇತರ ಸಂಸ್ಥೆಗಳಿಂದ ಸುಟ್ಟ ಗಾಯಗಳ ವಿಭಾಗ, ಲಯನ್ಸ್ ಕೃತಕ ಅವಯವಗಳ ವಿಭಾಗ, ರಕ್ತಕಣಗಳ ವಿಭಜಕ ಕೇಂದ್ರ, ಸಿಬಿಎನ್ಎಎಟು ಯಂತ್ರ, ಎಆರ್ಟಿ ಸೆಂಟರ್ ತೆರೆಯಲಾಗಿದೆ. ಇದಕ್ಕೆ ಅವಶ್ಯವಿರುವ ತಜ್ಞರು, ಶುಶ್ರೂಷಕಿಯರು, ಕಿ.ಪ್ರಾ. ಶಾಲಾ ತಂತ್ರಜ್ಞರು ಕೊರತೆಯಿರುವ ಹುದ್ದೆ ಭರ್ತಿ ಮಾಡುವಂತೆ ಹಾಗೂ ಹೊಸ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ನೀಡುವ ಕುರಿತು ಸಹ ಪ್ರಸ್ತಾವನೆಯಲ್ಲಿ ಉಲ್ಲೇಖೀಸಲಾಗಿದೆ.
ಯಾವ ಹುದ್ದೆ -ಎಷ್ಟು ಸಿಬಂದಿ?
ಮಂಜೂರಾದ ತಜ್ಞ ವೈದ್ಯರ ಹುದ್ದೆಯೊಂದಿಗೆ ಹೆಚ್ಚುವರಿಯಾಗಿ 4, ಶಸ್ತ್ರ ಚಿಕಿತ್ಸಕರ 2, ಅರವಳಿಕೆ ತಜ್ಞ 1, ಎಲುಬು ಕೀಲು ತಜ್ಞ 2, ಚರ್ಮ ರೋಗ, ಇಎನ್ಟಿ, ಮಾನಸಿಕ ರೋಗ ತಜ್ಞ, ರೇಡಿಯಾಲಜಿ ತಲಾ 2, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ 6, ಶುಶ್ರೂಷಕಿಯರು 25, ಕಿರಿಯ ಪ್ರಯೋಗಶಾಲಾ ತಂತ್ರಜ್ಞರು 20 ಸೇರಿದಂತೆ ಒಟ್ಟು 68 ಸಿಬಂದಿ ನೇಮಕಾತಿ ಜಿಲ್ಲಾಸ್ಪತ್ರೆಯಿಂದ ಪ್ರಸ್ತಾವನೆ ಸಿದ್ಧವಾಗಿದೆ.
– ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…