ಮುಂದುವರಿದ ಹಸಿಕಸ ವಿಲೇವಾರಿ ಸಮಸ್ಯೆ
Team Udayavani, Sep 28, 2018, 6:00 AM IST
ಕೋಟ: ಸಾಲಿಗ್ರಾಮ ಹಳೆಕೋಟೆ ಮೈದಾನದಲ್ಲಿ ಕಳೆದ ಎರಡೂವರೆ ವರ್ಷದಿಂದ ತ್ಯಾಜ್ಯ ಸಂಗ್ರಹಣೆ ನಡೆಸುತ್ತಿದ್ದು ಅದನ್ನು ತೆರವುಗೊಳಿಸುವಂತೆ ಸ್ಥಳೀಯರು ಸೆ. 24 ರಂದು ಪ್ರತಿಭಟನೆ ನಡೆಸಿದ್ದರು. ಇದೀಗ ಪ್ರತಿಭಟನೆಗೆ ಮಣಿದ ಪ.ಪಂ. ಇಲ್ಲಿ ಸಂಗ್ರಹಿದ ಕಸವನ್ನು ಟಿಪ್ಪರ್ ಮೂಲಕ ಕಂದಾವರದ ಡಂಪಿಂಗ್ಯಾರ್ಡ್ಗೆ ಸಾಗಿಸಿ ಮೈದಾನವನ್ನು ಸ್ವಚ್ಚಗೊಳಿಸಿದೆ.
ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾಟದ ಮೂಲಕ ಗಮನಸೆಳೆದಿದ್ದ ಈ ಕ್ರೀಡಾಂಗಣ ತ್ಯಾಜ್ಯ ಶೇಖರಣೆಯ ತೊಟ್ಟಿಯಾಗಿ ಮಾರ್ಪಟ್ಟಿತ್ತು. ತ್ಯಾಜ್ಯ ಶೇಖರಣೆ ಘಟಕದ ಪಕ್ಕದಲ್ಲಿ 16 ಲ.ರೂ. ವೆಚ್ಚದಲ್ಲಿ ನವೀಕರಿಸಿದ ಕುಡಿಯುವ ನೀರಿನ ಬಾವಿ ನೀರು ಸಂಪೂರ್ಣ ಕಲುಷಿತಗೊಂಡಿತ್ತು. ಹೀಗಾಗಿ ತ್ಯಾಜ್ಯ ಸಂಗ್ರಹ ಕೈಬಿಡಬೇಕು ಎಂದು ಒತ್ತಾಯಿಸಿದ್ದರು.
ಸುತ್ತ ಬೇಲಿ
ಹೊರಗಿನಿಂದ ಖಾಸಗಿಯವರು ತ್ಯಾಜ್ಯವನ್ನು ತಂದು ಡಂಪ್ ಮಾಡದಂತೆ ತಡೆಯುವ ಸಲುವಾಗಿ ಇದೀಗ ಕ್ರೀಡಾಂಗಣದೊಳಗೆ ಯಾವುದೇ ವಾಹನ ಗಳು ಬರದಂತೆ ಬೇಲಿ ಅಳವಡಿಸಲಾಗಿದೆ ಹಾಗೂ ಮುಖ್ಯ ಗೇಟ್ಗೆ ಬೀಗ ಹಾಕಲಾಗಿದೆ.
ಹಸಿಕಸ ವಿಲೇವಾರಿಗೆ ಸಮಸ್ಯೆ
ಡಂಪಿಂಗ್ಯಾರ್ಡ್ ಸಮಸ್ಯೆಯಿಂದ ವಾರದಲ್ಲಿ ಒಂದು ದಿನ ಮಾತ್ರ ಒಣಕಸವನ್ನು ಪ.ಪಂ. ಸ್ವೀಕರಿಸುತ್ತಿದೆ. ಹೀಗಾಗಿ ಹೊಟೇಲ್ಗಳು, ಕೈಗಾರಿಕೆ, ತರಕಾರಿ ಅಂಗಡಿ, ವಾಣಿಜ್ಯ ಸಂಕೀರ್ಣದ ಹಸಿ ಕಸ ವಿಲೇವಾರಿಗೆ ಸಮಸ್ಯೆಯಾಗುತ್ತಿದ್ದು. ಮುಖ್ಯ ರಸ್ತೆಗಳ ಅಕ್ಕ-ಪಕ್ಕದಲ್ಲಿ ಹಾಗೂ ಬೆಟ್ಲಕ್ಕಿ ಹಡೋಲು ಮುಂತಾದ ಕಡೆ ಸಾರ್ವಜನಿಕ ಸ್ಥಳದಲ್ಲಿ ಈ ಕಸವನ್ನು ಅಕ್ರಮವಾಗಿ ಎಸೆಯುವ ಆತಂಕ ಎದುರಾಗಿದೆ.ಒಟ್ಟಾರೆ ಶಾಶ್ವತ ಡಂಪಿಂಗ್ಯಾರ್ಡ್ ನಿರ್ಮಾಣಗೊಳ್ಳುವ ವರೆಗೆ ಈ ಸಮಸ್ಯೆ ಮುಂದುವರಿಯಲಿದೆ.
ಕಾಂಪೋಸ್ಟ್ ತರಬೇತಿ
ಐಇಸಿ ಕಾರ್ಯಕ್ರಮದಂತೆ ಪೈಪ್ ಕಾಂಪೋಸ್ಟ್, ಪಿಟ್ ಕಾಂಪೋಸ್ಟ್, ಬಯೋ ಬಿನ್ಸ್ ಅಥವಾ ಇನ್ನಿತರ ವಿಧಾನ ಗಳಿಂದ ತಮ್ಮ ಸ್ವಂತ ಸ್ಥಳದಲ್ಲಿಯೇ ಹಸಿಕಸವನ್ನು ವಿಲೀನಗೊಳಿಸುವ ಕುರಿತು ಹೊಟೇಲ್, ಕೈಗಾರಿಕೆ, ತರಕಾರಿ ಅಂಗಡಿ, ವಾಣಿಜ್ಯ ಸಂಕೀರ್ಣದ ಮಾಲಕರಿಗೆ ತರಬೇತಿ ನೀಡುವ ಸಲುವಾಗಿ ಅ.3ರಂದು ಪ.ಪಂ. ವತಿಯಿಂದ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?