ಹಿರಿಯರು ಮಕ್ಕಳಿಗೆ ಪ್ರೀತಿ ನೀಡಿ: ರಮಾನಂದ ಹೆಗ್ಡೆ
ನಲಿಕಲಿ-2019 ಬೇಸಗೆ ಶಿಬಿರ
Team Udayavani, Apr 27, 2019, 12:56 PM IST
ಹೆಬ್ರಿ, ಎ. 26: ಮನೆಯಲ್ಲಿ ಮಕ್ಕಳನ್ನು ಪ್ರೀತಿಯಿಂದ ಕಾಣುವುದರ ಜತೆಗೆ ಅವರನ್ನು ಮುದ್ದು ಮಾಡಿದಾಗ ಅವರು ಹಿರಿಯರ ಮೇಲೆ ಗೌರವಾದರಗಳನ್ನು ಬೆಳೆಸಿಕೊಳ್ಳುತ್ತಾರೆ ಎಂದು ಬೇಳಂಜೆ ರಮಾನಂದ ಹೆಗ್ಡೆ ಹೇಳಿದರು.
ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಆಶ್ರಯಲ್ಲಿ ಹೆಬ್ರಿ ಸೂಪರ್ ಮಾರ್ಕೆಟ್ನ ಸಹಯೋಗದೊಂದಿಗೆ ಹೆಬ್ರಿ ದುರ್ಗಾ ಆರ್ಕೆಡ್ನ ಶಾರದ ನಂದಪ್ಪ ಶೆಟ್ಟಿ ಸಭಾಭವನದಲ್ಲಿ ಒಂದು ತಿಂಗಳುಗಳ ಕಾಲ ನಡೆಯುತ್ತಿರುವ ನಲಿಕಲಿ-2019 ಬೇಸಗೆ ಶಿಬಿರದ ಅಜ್ಜ ಅಜ್ಜಿಯಂದಿರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಕಟುಂಬ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪ್ರೀತಿ ಕಡಿಮೆಯಾಗಿದೆ. ಹೆಚ್ಚಿನ ಮನೆಯಲ್ಲಿ ತಂದೆತಾಯಿಯರಿಗೆ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿ ಸಲು ಸಮಯವಿಲ್ಲ ಇದರಿಂದಾಗಿ ಮಕ್ಕಳು ಪ್ರೀತಿ ಸಿಗುವ ಕಡೆ ಅಥವಾ ಟಿವಿ ಮೊಬೈಲ್ ದಾಸರಾಗುತ್ತಾರೆ. ದರಿಂದಾಗಿ ಅವರು ಸಂಬಂಧಗಳ ಮಹತ್ವ ಅರಿಯಲು ಸಾಧ್ಯವಾಗುತ್ತಿಲ್ಲ ಎಂದರು.
ನಿವೃತ್ತ ಶಿಕ್ಷಕಿ ಅಹಲ್ಯಾ, ಪತ್ರಕರ್ತ ಬಾಲಚಂದ್ರ ಮುದ್ರಾಡಿ ಮಾತ ನಾಡಿದರು. ಸೂಪರ್ ಮಾರ್ಕೆಟ್ನ ಆಡಳಿತ ನಿರ್ದೇಶಕ ಚಾರ ವಾದಿರಾಜ್ ಶೆಟ್ಟಿ, ಸವಿತಾ ಆರ್.ಹೆಗ್ಡೆ , ವನಜಾ,ರಮಾ ಜೋಯಿಸ್, ಸುಮಿತ್ರಾ, ಜಯಶ್ರಿ, ಕೀರ್ತಿ, ಸುಶೀಲಾ, ರತ್ನಾ, ಪ್ರದೀಪ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶು ಪಾಲೆ ವೀಣಾ ಯು. ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನಿತ್ಯಾನಂದ ಶೆಟ್ಟಿ ನಿರೂಪಿಸಿ, ಪ್ರಜ್ಞಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ