ಶೇ.75 ಇಂಧನ ಉಳಿತಾಯ; ಹೊಗೆ ಕಡಿಮೆ, ಆರೋಗ್ಯಕ್ಕೆ ಉತ್ತಮ

ಮಿತ ಇಂಧನ ಬಳಕೆಗೆ ಸಹಕಾರಿ ಒಲೆ

Team Udayavani, Sep 30, 2021, 6:45 AM IST

ಶೇ.75 ಇಂಧನ ಉಳಿತಾಯ; ಹೊಗೆ ಕಡಿಮೆ, ಆರೋಗ್ಯಕ್ಕೆ ಉತ್ತಮ

ಕುಂದಾಪುರ: ಕೋಟೇಶ್ವರದ ಕೃಷ್ಣಯ್ಯ ಆಚಾರ್ಯ ಕೂರಾಡಿ ಅವರು ಕಲಿತದ್ದು ಎಸೆಸೆಲ್ಸಿ. ಮುಂದಿನ ಕಲಿಕೆಗೆ ಕೈಯಲ್ಲಿ ಹಣ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಶೈಕ್ಷಣಿಕ ಜೀವನ ಮೊಟಕುಗೊಳಿಸಿದ ಕೃಷ್ಣಯ್ಯ ಆಚಾರ್ಯ ಅವರು ಇಂದು ಎಂಜಿನಿಯರಿಂಗ್‌ ಕಲಿತವರು ಕೂಡ ಶಹಬಾಸ್‌ ಎನ್ನುವಂಥ ಸಂಶೋಧನೆ ಮಾಡಿದ್ದಾರೆ. ಈಚಿನ ಇವರ ಸಂಶೋಧನೆ ಎಂದರೆ ಮಿತ ಇಂಧನ ಬಳಕೆಯ ಒಲೆ.

ಏನಿದು ಒಲೆ?
ದರಳೆ (ಒಣ ಎಲೆ), ಕಸ, ಕಡ್ಡಿ, ಮರದ ತುಂಡು, ಗೆರಟೆ, ತೆಂಗಿನಕಾಯಿ ಸಿಪ್ಪೆ, ಅಡಿಕೆ ಸಿಪ್ಪೆ, ಪೇಪರ್‌ ಹೀಗೆ ಏನೇ ಕಸ ಹಾಕಿದರೂ ಸಾಕು ಎಂಬಷ್ಟು ಮಿತವಾಗಿ ಇಂಧನ ಬಳಕೆಯಾಗುವ ಒಲೆ ಇದು. ಇದರಲ್ಲಿ ಅನ್ನ, ಸಾರು ಬೇಯುವಾಗ ಜತೆಯಾಗಿ ಬಿಸಿನೀರು ಕಾಯಿಸುವ ವ್ಯವಸ್ಥೆಯಿದೆ. ಹೊಗೆ ಕಡಿಮೆ. ಇದ ರಿಂದಾಗಿ ಆರೋಗ್ಯಕ್ಕೂ ಕ್ಷೇಮ, ಜೇಬಿಗೂ ಹಿತಕರ. ಹಾಕಿದ ಇಂಧನ ಒಲೆಯ ಬುಡಕ್ಕೆ ಮುಂದೂಡಲು ಸೂð ಮಾದರಿಯನ್ನು ಬಳಸಿದ್ದಾರೆ. ಅಂತೆಯೇ ಬಿಸಿನೀರಿಗಾಗಿ ನೀರು ಹೊರಹೋಗುವ, ಒಳ ಬರುವ ಎರಡು ಪ್ರತ್ಯೇಕ ಪ್ರವೇಶಿಕೆಗಳನ್ನು ನೀಡಿದ್ದಾರೆ. ತಣ್ಣೀರು ಬರಲು ಟ್ಯಾಂಕ್‌ನಿಂದ ನೇರ ಸಂಪರ್ಕ ನೀಡಿ ಬಿಸಿ ನೀರು ಇನ್ನೊಂದು ಕೊಳವೆ ಮೂಲಕ ಹೋಗುವ ವ್ಯವಸ್ಥೆಯಿದೆ. ಟ್ಯಾಂಕ್‌ ಇಲ್ಲದಿದ್ದ ಮನೆ ಗಳಿಗೆ ನೀರು ತುಂಬಿಸುವ ಪ್ರತ್ಯೇಕ ವ್ಯವಸ್ಥೆಯೂ ಇದೆ.

ಆವಿಷ್ಕಾರ
ಕೋಟೇಶ್ವರದ ಸರ್ವಿಸ್‌ ರಸ್ತೆ ಬದಿ ಸಣ್ಣ ವೆಲ್ಡಿಂಗ್‌ ಶಾಪ್‌ ಹೊಂದಿರುವ ಆಚಾರ್ಯರು ತಮ್ಮ ವೆಲ್ಡಿಂಗ್‌ ವೃತ್ತಿಗಿಂತ ಹೆಚ್ಚು ಸಮಯ ಇಂತಹ ಸಂಶೋಧನೆಗೆ ಮೀಸಲಿಡುತ್ತಾರೆ.

ಇದನ್ನೂ ಓದಿ:ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಗರಂ ಆದ ಹಾಲಾಡಿ ಶ್ರೀನಿವಾಸ ಶೆಟ್ಟಿ

ರೈಲು ತ್ಯಾಜ್ಯ ವಿಲೇಗೆ ಆವಿಷ್ಕಾರ
ಬೆಂಗಳೂರಿಗ ಹೋಗಿದ್ದಾಗ ರೈಲಿನಲ್ಲಿ ಪ್ರಯಾಣಿಕರು ಮಾಡಿದ ತ್ಯಾಜ್ಯ ಹಳಿ ಮೇಲೆ ಬೀಳುವುದು ಕಂಡರು. ನಿಲ್ದಾಣಗಳಲ್ಲಿ ದುರ್ವಾಸನೆಗೆ ಕಾರಣವಾಗುವ, ಮೆಕಾನಿಕ್‌ಗಳ್ಳೋ ಯಾರಾದರೂ ರೈಲಿನ ಅಡಿಭಾಗಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಅಶುಚಿ ವಾತಾವರಣ ಇರುವುದನ್ನು ಮನಗಂಡರು. ಅದಕ್ಕಾಗಿ ಒಂದು ಉಪಕರಣ ಕಂಡುಹಿಡಿದರು. ಪ್ರತಿ 80 ಕಿ.ಮೀ.ಗೊಂದು ಶೌಚಗುಂಡಿ ಮಾದರಿಯಲ್ಲಿ ರೈಲು ಹಳಿ ಪಕ್ಕದಲ್ಲಿ ನಿರ್ಮಾಣ. ಅದಕ್ಕೆ ರಿಲೀಸರ್‌ ಮೂಲಕ ತ್ಯಾಜ್ಯ ಸುರಿಯುವ ಸ್ವಯಂಚಾಲಿತ ವ್ಯವಸ್ಥೆ ಮಾಡಿದ್ದರು. ಇದನ್ನು ರೈಲ್ವೆ ಇಲಾಖೆ ಮೆಚ್ಚುಗೆ ಸೂಚಿಸಿತ್ತು.

ಕಡಿಮೆ ಇಂಧನ
ಈಗಾಗಲೇ ಸತತ ತಯಾರಿ ಮೂಲಕ ಈಗ ಐದನೇ ಒಲೆ ತಯಾರಿಸಿದ್ದಾರೆ. ಪ್ರತಿ ಸಲ ಗ್ರಾಹಕರಿಂದ ಬಂದ ಮಾಹಿತಿ ಮೇರೆಗೆ ಬದಲಾವಣೆ ಮಾಡಿಕೊಂಡಿದ್ದಾರೆ. ಹೊಗೆ ಎತ್ತರಕ್ಕೆ ಹೋಗಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗ್ರಾಹಕರು ಹೇಳುವಂತೆ ಶೇ.25ರಷ್ಟು ಇಂಧನ ಸಾಕಾಗುತ್ತದೆ. ಅಂದರೆ ಶೇ.75 ಇಂಧನ ಉಳಿತಾಯವಾಗುತ್ತದೆ. ಹೋಟೆಲ್‌, ಮನೆ, ಕಾರ್ಖಾನೆಗಳಲ್ಲಿ ಬಳಕೆಗೆ ಬೇಡಿಕೆಯಿದೆ.

ಹೊಸತರ ಕಡೆಗೆ ತುಡಿತ
4 ತಿಂಗಳ ಸತತ ಪರಿಶ್ರಮದಿಂದ ಮಿತ ಇಂಧನದ ಈ ಒಲೆ ಸಿದ್ಧವಾಗಿದೆ. ಪ್ರಾಯೋಗಿಕವಾಗಿ ಅನೇಕ ಒಲೆಗಳನ್ನು ಮಾಡಿದ್ದು ಬಳಿಕ ಮಾರ್ಪಾಡುಗಳನ್ನೂ ಮಾಡಿದ್ದೇನೆ. ಇಂಧನ ಬೆಲೆ ಏರಿದೆ ಎಂದು ಬೊಬ್ಬೆ ಹಾಕುವುದಕ್ಕಿಂತ ಅದಕ್ಕೆ ಪರಿಹಾರ ಹೇಗೆ ಎಂದು ಯೋಚಿಸುವುದು ಹೆಚ್ಚು ಪ್ರಸ್ತುತ ಎನಿಸಿತು.-ಕೃಷ್ಣಯ್ಯ ಆಚಾರ್ಯ ಕೂರಾಡಿ, ಕೋಟೇಶ್ವರ

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.