ನೋಟಿನ ಮಾದರಿಗಳಿಂದ ವಿನಾಯಕ ಮೂರ್ತಿ ರಚನೆ
Team Udayavani, Aug 31, 2019, 5:30 AM IST
ಉಡುಪಿ: ಗಣೇಶೋತ್ಸವದ ಪ್ರಯುಕ್ತ ಸಮಾಜಕ್ಕೆ ಹೊಸದನ್ನು ಕೊಡಬೇಕೆನ್ನುವ ನೆಲೆಯಲ್ಲಿ ಮಣಿಪಾಲ ಸ್ಯಾಂಡ್ ಹಾರ್ಟ್ ಕಲಾವಿದರಾದ ಶ್ರೀನಾಥ ಮಣಿಪಾಲ, ವೆಂಕಿ ಪಲಿಮಾರು, ರವಿ ಹಿರೆಬೆಟ್ಟು ಅವರು 21 ರಾಷ್ಟ್ರಗಳ ಕೃತಕ ನೋಟುಗಳನ್ನು ಬಳಸಿಕೊಂಡು ಸಾಯಿರಾಧಾ ಮೋಟಾರ್ನ ಸಹಯೋಗದಲ್ಲಿ ಸುಮಾರು 12 ಅಡಿ ಎತ್ತರದ ಅತ್ಯಾಕರ್ಷಕ ಗಣೇಶನ ಮೂರ್ತಿ ನಿರ್ಮಿಸಿ ಜನರನ್ನು ಸೆಳೆಯುತ್ತಿದ್ದಾರೆ.
ಕೃತಕ ನೋಟು ಬಳಕೆ
ಕಲಾಕೃತಿಯಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಚೀನಾ, ಅಫ್ಘಾನಿಸ್ಥಾನ್, ಬೂತಾನ್, ಬಹರೇನ್, ಯುಎಇ, ಅಮೆರಿಕ, ಇಸ್ರೇಲ್ ಸೇರಿದಂತೆ ವಿವಿಧ ರಾಷ್ಟ್ರಗಳ ನೋಟುಗಳ ಸುಮಾರು 1,000 ಕೃತಕ ನೋಟುಗಳನ್ನು ಪೇಪರ್ನಿಂದ ನಿರ್ಮಿಸಲಾದ ಮೂರ್ತಿಗೆ ಸುಂದರವಾಗಿ ಪೋಣಿಸಲಾಗಿದೆ. ಭಾರತದ 2,000 ರೂ., 500 ರೂ., 100 ರೂ., 50 ರೂ., 10 ರೂ., ಕೃತಕ ನೋಟುಗಳನ್ನು ಹೆಚ್ಚಾಗಿ ಬಳಸಲಾಗಿದೆ.
ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶಈ ಕಲಾಕೃತಿಯು ನಗರದ ವಿದ್ಯಾಸಮುದ್ರ ಮಾರ್ಗದಲ್ಲಿರುವ ಸಾಯಿರಾಧಾ ಮೋಟಾರ್ ನಲ್ಲಿ ಆ. 31ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. ಗಣೇಶ ಚತುರ್ಥಿಯ ಅಂಗವಾಗಿ ಈ ವಿಶೇಷ ಗಣಪತಿ ಮೂರ್ತಿಯ ಸಾರ್ವಜನಿಕ ವೀಕ್ಷಣೆಗೆ ಮುಂದಿನ 10 ದಿನಗಳ ಕಾಲ ಅವಕಾಶ ಕಲ್ಪಿಸಲಾಗಿದೆ.
ಇಲ್ಲಿಯವರೆಗೆ ಪೇಪರ್ ಕಪ್, ಹ್ಯಾಂಡ್ಮೇಡ್ ಪೇಪರ್, ಗುಡಿ ಕೈಗಾರಿಕೆಯ ವಸ್ತುಗಳು, ಬಿಸ್ಕೇಟ್, ಧಾನ್ಯಗಳನ್ನು ಬಳಸಿ ಗಣೇಶನ ಕಲಾಕೃತಿ ರಚಿಸಲಾಗಿದ್ದು, ಇದೇ ಮೊದಲ ಬಾರಿ ಬಗೆಬಗೆಯ ಕೃತಕ ನೋಟುಗಳನ್ನು ಬಳಸಿಕೊಂಡು ಗಣೇಶನ ವಿಗ್ರಹ ರಚಿಸಲಾಗಿದೆ ಎಂದು ಮಣಿಪಾಲ ಸ್ಯಾಂಡ್ ಹಾರ್ಟ್ ಕಲಾವಿದ ಶ್ರೀನಾಥ ಮಣಿಪಾಲ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ