ಚಂದದ ರಸ್ತೆಯಿದೆ, ಚರಂಡಿಯೇ ಇಲ್ಲ!
Team Udayavani, Jun 10, 2018, 6:15 AM IST
ಕುಂದಾಪುರ: ಮುಖ್ಯ ರಸ್ತೆಯ ಸೂರ್ನಳ್ಳಿ ರಸ್ತೆ ಮೂಲಕ ಸಾಗಿದಂತೆ ಉತ್ತಮವಾದ ರಸ್ತೆಯೇನೋ ಸಿಗುತ್ತದೆ. ವಾಹನ ಸಂಚಾರವೂ ಇರುತ್ತದೆ. ಜನವಸತಿ ಇರುವ ಪ್ರದೇಶದಲ್ಲಿ ಮಳೆ ಬಂದರೆ ಕಷ್ಟ.
ಉತ್ತಮ ರಸ್ತೆಯಿದ್ದರೂ, ವಾಹನಗಳು ಬಂದರೆ ಪಾದಚಾರಿಗಳು ಒದ್ದೆಯಾಗು ವುದು ಖಚಿತ. ಇಲ್ಲಿ ನೀರು ಕಾಂಕ್ರೀಟ್ ರಸ್ತೆಯಲ್ಲೇ ಹೋಗಬೇಕಿದೆ.
ಹೇಗಿದೆ ವಾರ್ಡ್?
ವಾರ್ಡ್ನ ರಸ್ತೆಗಳಲ್ಲಿ ಹೋಗು ತ್ತಿದ್ದಂತೆ ಕಾಣುತ್ತಿದ್ದುದು ಮಾತ್ರ ಚರಂಡಿಯಿಲ್ಲದ ರಸ್ತೆ. ವಾರ್ಡ್ ಎಷ್ಟೇ ಅಭಿವೃದ್ಧಿ ಯಾಗಿದ್ದರೂ, ಜನರಿಗೆ ಎಷ್ಟೇ ಉತ್ತಮ ಸೌಲಭ್ಯಗಳು, ಸೌಕರ್ಯಗಳು ದೊರೆತಿದ್ದರೂ ನೀರೆಲ್ಲ ರಸ್ತೆಯಲ್ಲಿಯೇ ಹರಿಯುವುದು ಕಾಣುತ್ತದೆ. ಇದು ಇಡೀ ವಾರ್ಡಿನ ಹೆಸರಿಗೆ ಒಂದು ಕಪ್ಪುಚುಕ್ಕೆ. ಇಲ್ಲಿ ಚರಂಡಿ ಮಾಡಲು ಅವಕಾಶವೇ ಇಲ್ಲದಂತೆ ರಸ್ತೆ ಆವರಿಸಿದೆ. ರಸ್ತೆಯ ಇಕ್ಕೆಲದಲ್ಲಿ ಕಂಪೌಂಡ್ ಗೋಡೆಗಳಿವೆ. ಹಾಗಾಗಿ ಚರಂಡಿ ಕೆಲಸ ಬಾಕಿ
ಆಗಿರಬಹುದು. ಕಾಂಕ್ರೀಟ್ ರಸ್ತೆ ಮಾಡಿದ ಕಾರಣ ಕಾಂಕ್ರಿಟ್ ರಸ್ತೆಯಡಿ ಭಾಗದಲ್ಲಿ ಚರಂಡಿ ಮಾಡಿ ಅದರ ಮೇಲೆ ಗಟ್ಟಿ ಸ್ಲಾéಬ್ ಹಾಕುವ ಮೂಲಕ ನೀರಿನ ಸರಾಗ ಹರಿವಿಗೆ ವ್ಯವಸ್ಥೆ ಮಾಡಬಹುದಿತ್ತು.
ಮಳೆ ಬಂದರೆ ಸಮಸ್ಯೆ
ಚರಂಡಿ ಇಲ್ಲದ್ದರಿಂದ ನೀರು ಆಸುಪಾಸಿನ ಮನೆಗಳಿಗೆ ಬಾರದಂತೆ ತಡೆ ಇಲ್ಲ. ಮಳೆ ನೀರು ತಡೆಯಲು ನಿವಾಸಿಗಳಿಗೆ ಪ್ರಾರ್ಥನೆಯೊಂದಷ್ಟೇ ಇದೆ. ಇಲ್ಲಿ ಘನ ವಾಹನ ಸಂಚರಿಸುವುದಿಲ್ಲ. ಆದ್ದರಿಂದ ಚರಂಡಿಗೆ ಪರ್ಯಾಯ ವ್ಯವಸ್ಥೆ ಮಾಡಬಹುದಿತ್ತು ಎನ್ನುತ್ತಾರೆ ಸ್ಥಳೀಯರು. ಇದೇ ರಸ್ತೆಯಲ್ಲಿ ಮುಂದೆ ಸಾಗಿದಂತೆ ಆದಿಶಕ್ತಿ ಕಾಳಿ ದೇವಸ್ಥಾನವಿದೆ. ಅಲ್ಲಿಗೂ ಭಕ್ತರು ಆಗಮಿಸುತ್ತಾರೆ. ಆದರೆ ಮಳೆ ಬಂದರೆ ಇದೇ ತೊಂದರೆಯಾಗಿದೆ. ಇಲ್ಲಿನ ಆಡಳಿತ ಚರಂಡಿ ವ್ಯವಸ್ಥೆಗೆ ಅನುದಾನ ಬಿಡುಗಡೆ ಮಾಡುವ ಮೂಲಕ ಈ ಪ್ರದೇಶದ ಜನರ ಗೋಳು ನಿವಾರಿಸಬೇಕಿದೆ.
ಜಾಗದ ಸಮಸ್ಯೆ
ನಾನು ಸುಮಾರು 20 ಮನೆಗಳಿಗೆ ತೊಂದರೆಯಾಗದಂತೆ ಕ್ರಮ ತೆಗೆದು ಕೊಂಡಿದ್ದೇನೆ. ಚರಂಡಿ ರಚನೆಗೆ ಅತಿಕ್ರಮಣವಾದ ಜಾಗದ ಸಮಸ್ಯೆ ಇದ್ದು ಜನರ ಸಹಕಾರವಿದ್ದರೆ ಕಾಮಗಾರಿ ನಡೆಸಲಾಗುವುದು.
– ನಾಗರಾಜ್ ಕಾಮಧೇನು, ವಾರ್ಡ್ ಸದಸ್ಯರು
ಚರಂಡಿ ಇಲ್ಲ
ರಸ್ತೆಯ ಎರಡೂ ಬದಿ ಚರಂಡಿ ಇಲ್ಲ. ಹಾಗಾಗಿ ಮಳೆ ನೀರು ಮನೆಯಂಗಳಕ್ಕೆ ಬರುತ್ತದೆ ಅಥವಾ ರಸ್ತೆಯಲ್ಲಿಯೇ ಹರಿದು ನಡೆದಾಡಲೂ ತ್ರಾಸ ಪಡುವಂತಾಗುತ್ತದೆ. ಸ್ವಲ್ಪ ಗಮನ ನೀಡಿದರೆ ಒಳಿತು.
– ಜಯಂತಿ, ಸ್ಥಳೀಯರು
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್