Udupi ಸರಕಾರ ಯಾರನ್ನೂ ಓಲೈಸಬಾರದು: ಪೇಜಾವರ ಶ್ರೀ
Team Udayavani, Dec 5, 2023, 11:55 PM IST
ಉಡುಪಿ: ಸಂವಿಧಾನ ಬದ್ಧವಾದ ಸರಕಾರಗಳು ಜಾತ್ಯತೀತ ವಾಗಿ ಎಲ್ಲರನ್ನು ಸಮಭಾವದಿಂದ ಕಾಣಬೇಕು. ಪ್ರಜೆಗಳಿಗೆ ಅನುಕೂಲ ಮಾಡಿಕೊಡಬೇಕು. ಯಾರೊಬ್ಬರಿಗೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಹಾಗಿದ್ದಾಗ ಮಾತ್ರ ಸಮಾಜದ ಎಲ್ಲ ನಾಗರಿಕರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮುಂಬಯಿಂದ ವೀಡಿಯೋ ಸಂದೇಶ ನೀಡಿದ ಶ್ರೀಪಾದರು, ಯಾವುದೋ ಒಂದು ಸಂಘಟನೆ, ಸಮಾಜವನ್ನು ಉಲ್ಲೇಖೀಸಿ ನಿಮ್ಮ ಹಿಂದೆ ನಾವಿದ್ದೇವೆ, ನಿಮಗಿಷ್ಟು ಪಾಲಿದೆ, ನಿಮ್ಮ ಪಾಲು ಕೊಟ್ಟೆ ಕೊಡುತ್ತೇವೆ ಎಂಬ ಮಾತುಗಳು ಸರಿಯಲ್ಲ. ಇದರಿಂದ ಇನ್ನೊಂದು ವರ್ಗಕ್ಕೆ ನೋವಾಗುವ ಸಂಭವ ಇರುತ್ತದೆ. ಸಮಾಜದ ಬಹುದೊಡ್ಡ ಅಂಗವಾದ ಹಿಂದೂ ಸಮಾಜವನ್ನು ಯಾರೂ
ಕೇಳುವವರಿಲ್ಲ ಎಂಬ ಭಾವ ಬರ ಬಾರದು. ಹೀಗಾಗಿ ಅಧಿಕಾರ ನಡೆಸುವವರು ಎಲ್ಲರನ್ನು ಹೊಂದಿಸಿಕೊಂಡು ಹೋಗಬೇಕು ಎಂದು ಹೇಳಿದರು.