ಹಫ್ತಾ ಬೆದರಿಕೆ: ಬನ್ನಂಜೆ ರಾಜಾ ಸಹಚರರ ಸೆರೆ
Team Udayavani, Mar 23, 2019, 12:30 AM IST
ಉಡುಪಿ: ಭೂಗತ ಪಾತಕಿ, ಸದ್ಯ ಕಾರಾಗೃಹದಲ್ಲಿರುವ ಬನ್ನಂಜೆ ರಾಜಾನ ಐವರು ಸಹಚರರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.
ಮಾ.13ರಂದು ಹಫ್ತಾ ಹಣಕ್ಕಾಗಿ ಬೆದರಿಕೆ ಹಾಕಿದ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗುರುವಾರ ಉಡುಪಿ ಡಿಸಿಐಬಿ ತಂಡವು ಆರೋಪಿಗಳಾದ ಮೂಲ್ಕಿ ಕೊಲಾ°ಡು ಕೆ.ಎಸ್.ರಾವ್ ನಗರದ ಶಶಿ ಪೂಜಾರಿ ಅಲಿಯಾಸ್ ಶಾಡೋ(28), ರವಿಚಂದ್ರ ಪೂಜಾರಿ ಅಲಿಯಾಸ್ ವಿಕ್ಕಿ ಪೂಜಾರಿ (30), ಮೂಲತಃ ಮಂಗಳೂರು ಉಳಾಯಿಬೆಟ್ಟಿನವನಾಗಿದ್ದು, ಪ್ರಸ್ತುತ ಕಟಪಾಡಿ ಏಣಗುಡ್ಡೆ ಫಾರೆಸ್ಟ್ ಗೇಟ್ ಬಳಿ ವಾಸವಿದ್ದ ಧನರಾಜ್ ಪೂಜಾರಿ ಅಲಿಯಾಸ್ ಧನರಾಜ್ ಅಲಿಯಾಸ್ ರಾಕಿ (26), ಮಲ್ಪೆ ಕೊಳದ ಧನರಾಜ್ ಸಾಲ್ಯಾನ್ ಅಲಿಯಾಸ್ ಧನು ಕೊಳ (30) ಮತ್ತು ಮಲ್ಪೆ ಸರಕಾರಿ ಪಿ.ಯು ಕಾಲೇಜು ಬಳಿಯ ಉಲ್ಲಾಸ್ ಶೆಣೈ(27)ಯನ್ನು ಬಂಧಿಸಿದೆ.
ಬೆಂಗಳೂರಿನಲ್ಲಿ ಮೂವರ ಬಂಧನ
ಮಾ.21ರಂದು ರಾತ್ರಿ ಬೆಂಗಳೂರು ಜೆ.ಪಿ.ನಗರದ ಬ್ರಿಗೇಡ್ ಅಡ್ಡರಸ್ತೆಯ ಬಾರೊಂದರ ಬಳಿ ಶಶಿ ಪೂಜಾರಿ, ರವಿಚಂದ್ರ ಪೂಜಾರಿ ಮತ್ತು ಧನರಾಜ್ ಪೂಜಾರಿಯನ್ನು ಬಂಧಿಸಿದ್ದರು. ಬಂಧಿ ತ ರು ನೀಡಿದ ಮಾಹಿತಿ ಆಧ ರಿಸಿ ಮಾ.22ರಂದು ಬೆಳಗ್ಗೆ ಮಲ್ಪೆಯಲ್ಲಿ ಧನರಾಜ್ ಸಾಲ್ಯಾನ್ನನ್ನು ಬಂಧಿಸಲಾಯಿತು.ಬಳಿಕ ಸಂಜೆ ಉಡುಪಿ ಕೋರ್ಟ್ ರಸ್ತೆಯ ಬದಿಯಲ್ಲಿ ಬ್ರಹ್ಮಾವರ ಪೊಲೀಸರು ಉಲ್ಲಾಸ ಶೆಣೈಯನ್ನು ಬಂಧಿಸಿದರು.ಇವರ ವಿರುದ್ಧ ಮಂಗಳೂರಿನ ಬಂದರು, ಕದ್ರಿ, ಬರ್ಕೆ, ಉರ್ವ, ಉಳ್ಳಾಲ, ಮಣಿಪಾಲ, ಮಲ್ಪೆ ಮೊದಲಾದ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಕರೆ ಬಂದರೆ ದೂರು ನೀಡಿ: ಹಫ್ತಾ ಕರೆ ಬಂದರೆ ಹತ್ತಿರದ ಠಾಣೆ, ಪೊಲೀಸ್ ಕಂಟ್ರೋಲ್ ರೂಂ (0820- 2526444) ಅಥವಾ udupipolice.org ಗೆ ದೂರು ನೀಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ