ಮಣಿಪಾಲದಲ್ಲಿ ಮೈದಳೆದ ಕರಕುಶಲ ಕಲೆ
Team Udayavani, Feb 22, 2017, 4:52 PM IST
ಉಡುಪಿ: ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಶನ್ನಲ್ಲಿ ನಮ್ಮ ಅಂಗಡಿಯ ಪ್ರದರ್ಶನದ ಪೂರ್ವಭಾವಿಯಾಗಿ ಕರಕುಶಲ ಕಲೆಗಳ ತರಬೇತಿ ಶಿಬಿರ ನಡೆಯಿತು. ವಿದ್ಯಾರ್ಥಿಗಳು ತುಂಬು ಆಸಕ್ತಿಯಿಂದ ಶಿಬಿರದಲ್ಲಿ ಪಾಲ್ಗೊಂಡರು. ಮಡಕೆ ಮಾಡುವುದು, ಮರದ ಕೆಲಸ, ತೆಂಗಿನಗರಿಯ ಕಸೂತಿ ಕಲೆ ಮೊದಲಾದವನ್ನು ಕಲಿಸಲಾಯಿತು.
ಮಣಿಪಾಲ ವಿ.ವಿ. ಉಪಕುಲಸಚಿವ (ತಾಂತ್ರಿಕ) ಡಾ| ಚಂದ್ರಶೇಖರ ಎಸ್. ಅಡಿಗ ಮತ್ತು ಎಸ್ಒಸಿ ನಿರ್ದೇಶಕಿ ಡಾ|ನಂದಿನಿ ಲಕ್ಷ್ಮೀಕಾಂತ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ವಿವಿಧ ರೀತಿಯ ಕಲೆಗಳಲ್ಲಿ ತೊಡಗಿಕೊಂಡಾಗ ಕ್ರಿಯಾಶೀಲ, ಚಿಂತನಶೀಲ ಬದುಕು ರೂಪುಗೊಳ್ಳುತ್ತದೆ ಎಂದು ಡಾ| ಅಡಿಗ ತಿಳಿಸಿದರು. ನಮ್ಮ ಭೂಮಿಯ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರವನ್ನು ನಡೆಸಿ ಕೊಟ್ಟರು. ಸುಬ್ರಾಯ ಆಚಾರ್ಯರು ಮರದ ಕೆತ್ತನೆ, ಉದ್ಯಮಿ ಜಗದೀಶ, ಕುಂಭಕಲಾವಿದ ರಘುರಾಮ ಕುಲಾಲ್ ಕುಂಭಕಲೆ ಕುರಿತು, ಕೃಷ್ಣ ಪೂಜಾರಿಯವರು ಕೃಷಿ ಕುರಿತು ಮಾಹಿತಿ ನೀಡಿದರು.
ದಿನವಿಡೀ ಎಸ್ಒಸಿ ಕ್ಯಾಂಪಸ್ನಲ್ಲಿ ಕರಕುಶಲ ಕಲೆಯ ಚಟುವಟಿಕೆ ನಡೆಯಿತು. ಒಂದು ಸಂಪನ್ಮೂಲದ ಕಚ್ಚಾ ಸಾಮಗ್ರಿಯಿಂದ ಕ್ರಿಯಾಶೀಲ ಚಿಂತನೆಯೊಂದಿಗೆ ಇನ್ನೊಂದು ವಸ್ತುವನ್ನು ತಯಾರಿಸಬಹುದು ಎಂಬುದನ್ನು ತರಬೇತಿದಾರರು ತಿಳಿಸಿ ಕೊಟ್ಟರು. ಐದು ವರ್ಷದಿಂದ 65 ವರ್ಷದವರೆಗಿನ ವಿವಿಧ ವಯೋಮಾನದ ಪ್ರತಿನಿಧಿಗಳು ಪಾಲ್ಗೊಂಡರು. ಮರದ ಕೆತ್ತನೆಯಿಂದ ವಿಮಾನ, ಕೀ ಗೊಂಚಲು, ಕೀ ಹೋಲ್ಡರ್, ಪೆಟ್ಟಿಗೆ, ಕತ್ತಿ, ಶೀಲ್ಡ್ಗಳನ್ನು ತಯಾರಿಸಲಾಯಿತು. ತೆಂಗಿನ ಓಲಿಗಳಿಂದ ಹಕ್ಕಿ, ಮೀನು, ಹೊಲಿದ ಬುಟ್ಟಿ ಮೊದಲಾದವನ್ನು ತಯಾರಿಸಲಾಯಿತು. ಕುಂಭಕಲೆಯಲ್ಲಿ ಗಣೇಶ, ಶಿವಲಿಂಗ ಆಕೃತಿಗಳು, ವಿವಿಧ ರೀತಿಯ ಮಡಕೆಗಳು ರೂಪುಗೊಂಡವು. ಭಾರತೀಯ ಕರಕುಶಲಕಲೆಗಳ ಬಗೆಗೆ ಇರುವ ಆಸಕ್ತಿ ತರಬೇತಿಯಲ್ಲಿ ಅನಾವರಣಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!