ಉಡುಪಿ: ಧೂಳು ಸಹಿತ ಮಳೆ ?!
Team Udayavani, Aug 4, 2018, 12:01 PM IST
ಉಡುಪಿ: ಉಡುಪಿ ಮತ್ತು ಸುತ್ತಲಿನ ಕೆಲವೆಡೆ ಶುಕ್ರವಾರ ಧೂಳು ಸಹಿತ ಮಳೆ ಬಿದ್ದಿರುವ ಬಗ್ಗೆ ಮಾಹಿತಿ ದೊರೆತಿದೆ. ಮಧ್ಯಾಹ್ನ 3 ಗಂಟೆಗೆ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿದ ಅನಂತರ ಹಲವರಿಗೆ ಕಂದು, ಹಳದಿ, ಬಿಳಿ ಬಣ್ಣದ ಕೆಸರಿನ ನೀರು ಬೈಕ್, ಕಾರು ಹಾಗೂ ಇತರ ವಸ್ತುಗಳ ಮೇಲೆ ಬಿದ್ದ ಅನುಭವವಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು “ಉದಯವಾಣಿ’ಗೆ ಹಲವು ಮಂದಿ ಮಾಹಿತಿ ನೀಡಿದ್ದಾರೆ. “ಮಧ್ಯಾಹ್ನ 3 ಗಂಟೆ ವೇಳೆಗೆ ನಿಲ್ಲಿಸಿದ ಕಾರು, ಬೈಕ್ಗಳ ಮೇಲೆ ಕೆಸರು ನೀರು ಬಿದ್ದಿದೆ. ಅಂಗಳದಲ್ಲಿ ಪಾತ್ರೆ ಇಟ್ಟಾಗ ಅದಕ್ಕೂ ಕೆಸರು ನೀರು ಬಿದ್ದಿದೆ’ ಎಂದು ನಿಟ್ಟೂರಿನ ವೀಡಿಯೋಗ್ರಾಫರ್ ಸುಂದರ್ ತಿಳಿಸಿದ್ದಾರೆ. ಹಿರಿಯಡಕದ ಕೆಲವರೂ ಈ ಕುರಿತು ತಿಳಿಸಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಪ್ರಸ್ಕ್ಲಬ್ ಎದುರು ನಿಲ್ಲಿಸಿದ್ದ ವಾಹನಗಳ ಮೇಲೆ ಮಳೆದ ಬಂದ ಅನಂತರ ಹಳದಿ, ಬಿಳಿ ಮಿಶ್ರಿತ ಬಣ್ಣದ ಧೂಳು ಇತ್ತು. ಇದನ್ನು ಬಿಳಿ ಮಳೆ ಎಂದು ಕರೆಯಬಹುದು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಧೂಳು ಸಹಿತ ಮಳೆಯಾಗಿರುವ ಬಗ್ಗೆ ಕೆಲವು ಗೆಳೆಯರು ಮಾಹಿತಿ ನೀಡಿದ್ದಾರೆ ಎಂದು ಉಡುಪಿಯ ಸುದರ್ಶನ್ ಬೇಕರಿ ಮಾಲಕ ಸಂದೀಪ್ ಪ್ರತಿಕ್ರಿಯಿಸಿದ್ದಾರೆ.
ಹೆಲ್ಮೆಟ್ ಮೇಲೆ ಬಿಳಿ ಕಲೆ
ಸ್ಕೂಟಿಯಲ್ಲಿ ಸಂಜೆ ಕಾಲೇಜಿನಿಂದ ಬಂದ ಅನಂತರ ಹೆಲ್ಮೆಟ್ ಗಮನಿಸಿದಾಗ ಅದರ ಮೇಲೆ ಕೂಡ ಬಿಳಿ ಬಣ್ಣದ ಚುಕ್ಕೆಗಳು ಮಸುಕಾಗಿ ಇರುವುದು ಗಮನಿಸಿದೆ. ಒಂದು ಬಾರಿ ಮಾತ್ರ ನನಗೆ ಮಳೆ ಸಿಕ್ಕಿತ್ತು ಎಂದು ಉಪನ್ಯಾಸಕಿಯೊಬ್ಬರು ತಿಳಿಸಿದ್ದಾರೆ.
ದ.ಕ.-ಉಡುಪಿ: ಸಾಧಾರಣ ಮಳೆ
ಕುಂದಾಪುರ, ಸಿದ್ದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ಪಡುಬಿದ್ರಿ, ಶಿರ್ವ, ಕಾಪು ಪರಿಸರದಲ್ಲಿ ಸಾಧಾರಣ, ಪಡುಕೋಣೆ, ಮರವಂತೆ ಯಲ್ಲಿ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸಂಜೆ ವೇಳೆ ಮೋಡ ಮುಸುಕಿತ್ತು. ವೇಣೂರು, ಮಚ್ಚಿನ, ಮದ್ದಡ್ಕ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳದಲ್ಲಿ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು