ಉದಯವಾಣಿ ವಿದ್ಯಾರ್ಥಿ ಪತ್ರಕರ್ತ ಯೋಜನೆಗೆ ಅರ್ಜಿ ಆಹ್ವಾನ
Team Udayavani, Apr 6, 2017, 12:02 PM IST
ಮಣಿಪಾಲ: ಯುವಜನಾಂಗವನ್ನು ಪತ್ರಿಕೋದ್ಯಮದತ್ತ ತೊಡಗಿಸುವ ಮತ್ತು ಉತ್ತಮ ವೃತ್ತಿ ನಿರತ ಪತ್ರಕರ್ತರಾಗಿ ರೂಪಿಸುವ ಉದ್ದೇಶದಿಂದ ಉದಯವಾಣಿ “ವಿದ್ಯಾರ್ಥಿ ಪತ್ರಕರ್ತ ಯೋಜನೆ’ (ಉದಯವಾಣಿ ಸ್ಟೂಡೆಂಟ್ ಜರ್ನಲಿಸ್ಟ್ ಪ್ರೋಗ್ರಾಂ) ಯನ್ನು ಆರಂಭಿಸಿದೆ.
ಎಂಎಂಎನ್ಎಲ್ (ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್) ನ ಮಹತ್ವದ ಯೋಜನೆ ಇದಾಗಿದೆ. ಆರಂಭದಲ್ಲಿ ಸುಳ್ಯ-ಪುತ್ತೂರು ವ್ಯಾಪ್ತಿಯಲ್ಲಿ ಇದನ್ನು ಪರಿಚಯಿಸಲಾಗುತ್ತಿದ್ದು, ಶೀಘ್ರವೇ ಉಳಿದ ಭಾಗಗಳಿಗೂ ವಿಸ್ತರಿಸುವ ಯೋಜನೆಯನ್ನು ಹೊಂದಲಾಗಿದೆ. ಆಸಕ್ತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಆರಂಭಿಕ ತರಬೇತಿ ನೀಡಲಾಗುವುದು. ಬಳಿಕ ಪುನರ್ ಮನನ ಶಿಬಿರ ನೀಡಿ ವೃತ್ತಿಪರ ಪತ್ರಕರ್ತರನ್ನಾಗಿ ರೂಪಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಸಾಮಾಜಿಕ ಅಭಿವೃದ್ಧಿ ಯೋಜನೆಯಡಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಪಿಯುಸಿ ಮತ್ತು ಪದವಿಯ ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಪತ್ರಿಕೋದ್ಯಮ ಓದುತ್ತಿರುವವರೇ ಆಗಿರಬೇಕೆಂಬ ನಿರ್ಬಂಧವೇನೂ ಇಲ್ಲ. ಆಸಕ್ತಿ ಇರುವ ಇತರೆ ವಿಷಯಗಳ ವಿದ್ಯಾರ್ಥಿಗಳೂ ಈ ವಿಶಿಷ್ಟ ಯೋಜನೆಯಲ್ಲಿ ಪಾಲ್ಗೊಳ್ಳಬಹುದು. ತರಬೇತಿಯ ಬಳಿಕ ಪತ್ರಿಕೆಯ ವಿದ್ಯಾರ್ಥಿ ಪತ್ರಕರ್ತರಾಗಿ ಕೆಲಸ ಮಾಡಲು ಅವಕಾಶವಿರಲಿದ್ದು, ಪ್ರಮಾಣಪತ್ರವೂ ಲಭ್ಯವಾಗಲಿದೆ.
ಆಸಕ್ತರು ತಮ್ಮ ಹೆಸರು, ಓದುತ್ತಿರುವ ಕಾಲೇಜು ಮತ್ತು ವಾಸಿಸುತ್ತಿರುವ ಊರಿನ ಹೆಸರು, ಅಧ್ಯಯನ ಮಾಡುತ್ತಿರುವ ಕೋರ್ಸ್ ಮತ್ತು ವರ್ಷ, ಇಮೇಲ್ ಐಡಿ ಹಾಗೂ ಸಂಪರ್ಕ ಸಂಖ್ಯೆ (ಮೊಬೈಲ್) [email protected] ಯನ್ನು ಅಥವಾ ವಾಟ್ಸಪ್ ನಂಬರ್ 99862 88392 ಗೆ ಎ. 15ರೊಳಗೆ ಕಳಿಸಿ ನೋಂದಾಯಿಸಬಹುದು. ಆನಂತರ ಉಳಿದ ಪ್ರಕ್ರಿಯೆ ಕುರಿತು ವಿವರವಾದ ಮಾಹಿತಿಯನ್ನು ಸಂಸ್ಥೆ ರವಾನಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ