ಹುಡುಗೋಡು ಚಂದ್ರಹಾಸ ರಂಗದಲ್ಲಿ ಲೀನ
Team Udayavani, Mar 12, 2019, 1:00 AM IST
ಕುಂದಾಪುರ/ಬೈಂದೂರು: ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ಹೊನ್ನಾವರದ ಹಡಿನ ಬಾಳದ ಹುಡುಗೋಡು ಚಂದ್ರಹಾಸ ನಾಯ್ಕ (51) ರವಿವಾರ ರಾತ್ರಿ ರಂಗಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾರೆ. ಅವರು
ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಬೈಂದೂರಿನ ಎಳಜಿತ್ ಗ್ರಾಮದ ಜೋಗಿಜೆಡ್ಡುವಿನಲ್ಲಿ ಕಲಾಧರ ಬಳಗ ಜಲವಳ್ಳಿ ಮೇಳದ ಪ್ರದರ್ಶನದಲ್ಲಿ “ಭೀಷ್ಮ
ವಿಜಯ’ದ ಸಾಲ್ವನ ಪಾತ್ರದಲ್ಲಿ ಅತಿಥಿ ಕಲಾವಿದರಾಗಿ ಅವರು ಭಾಗವಹಿಸಿದ್ದರು. ಪ್ರಸಂಗದ ಸಂಭಾಷಣೆ ನಡೆಯುತ್ತಿರುವಾಗ ಏಕಾಏಕಿ ಕುಸಿದು ಬಿದ್ದರು. ಸಹಕಲಾವಿದರು ಅವರನ್ನು ತತ್ಕ್ಷಣ ಆಸ್ಪತ್ರೆ ಸಾಗಿಸಿದರೂ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. “ಅಭಿನವ ಸಾಲ್ವ’ ಎಂದೇ ಖ್ಯಾತರಾಗಿದ್ದ ಅವರು ಅದೇ ಪಾತ್ರದಲ್ಲಿ, ಇದಿರು ಪಾತ್ರ ಭೀಷ್ಮನೆದುರು ಸಂಭಾಷಿಸುತ್ತಲೇ ಅಂತ್ಯ ಕಂಡಿದ್ದಾರೆ.
ಚಂದ್ರಹಾಸ ಅವರು ಬಚ್ಚಗಾರು, ಸಾಲಿಗ್ರಾಮ, ಪೆರ್ಡೂರು ಮೇಳಗಳಲ್ಲಿ ಕಲಾವಿದರಾಗಿ ಸ್ವರ ಗಾಂಭೀರ್ಯ ವೇಷ ಹಾಗೂ ಮಾತುಗಾರಿಕೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ನಾಯಕ ಹಾಗೂ ಪ್ರತಿನಾಯಕ ಪಾತ್ರಗಳಲ್ಲಿ ಮಿಂಚುತ್ತ ತಮ್ಮದೇ ಛಾಪು ಮೂಡಿಸಿದ್ದರು. 1986ರಿಂದ ಯಕ್ಷತಿರುಗಾಟ ಆರಂಭಿಸಿ, ಈಚೆಗೆ 4 ವರ್ಷಗಳಿಂದ ತಿರುಗಾಟ ಬಿಟ್ಟು ಅತಿಥಿ ಕಲಾವಿದರಾಗಿ ತೆರಳುವ ಜತೆಗೆ ತಮ್ಮದೇ ಆದ ತಂಡ ಕಟ್ಟಿ ಪ್ರದರ್ಶನ ನೀಡುತ್ತಿದ್ದರು. ಹಡಿನಬಾಳು ಗ್ರಾ.ಪಂ. ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು.
ಫೇಸ್ಬುಕ್ ಲೈವ್
ಎಳಜಿತ್ ಯಕ್ಷಗಾನಕ್ಕೆ ತಮ್ಮ ಪುತ್ರನ ಜತೆ ಬಂದಿದ್ದರು. ಚಂದ್ರಹಾಸ ಅವರ ಫೇಸ್ಬುಕ್ ಖಾತೆಯ ಮೂಲಕ ಪ್ರದರ್ಶನದ ನೇರಪ್ರಸಾರ ನೀಡಲಾಗುತ್ತಿತ್ತು. ಅದರಲ್ಲಿ ಅವರ ಜೀವನದ ಅಂತಿಮ ದೃಶ್ಯವೂ ಪ್ರಸಾರವಾಗಿದೆ.
ಕಲಾವಿದರ ದುರಂತ ಅಂತ್ಯ
ಈ ವರ್ಷ ಯಕ್ಷಗಾನ ಕಲೆಯ ಪಾಲಿಗೆ ದುಃಖಕರ. ಬಳ್ಕೂರಿನಲ್ಲಿ ನಡೆದ ದ್ವಿಚಕ್ರವಾಹನ ಅಪಘಾತದಲ್ಲಿ ಭಾಗವತ ರವಿರಾಜ ಜನ್ಸಾಲೆ, ಗುಣವಂತೆಯಲ್ಲಿ ನಡೆದ ಅಪಘಾತದಲ್ಲಿ ಕಲಾವಿದರಾದ ಹೆನ್ನಾಬೈಲು ದಿನೇಶ್ ಮಡಿವಾಳ, ಪ್ರಸನ್ನಆಚಾರ್ ಮೃತಪಟ್ಟಿದ್ದರು. ಅಸೌಖ್ಯದಿಂದ ತೆಂಕಿನ ಚೆಂಡೆವಾದಕ ಅಡೂರು ಗಣೇಶ್ ರಾವ್, ವಯೋಸಹಜವಾಗಿ ಅಗರಿ ರಘುರಾಮ ಭಾಗವತ, ಜಲವಳ್ಳಿ ವೆಂಕಟೇಶ ರಾವ್, ಚೆಂಡೆವಾದಕ ಶಾಂತಾರಾಮ ಭಂಡಾರಿ ನಿಧನರಾಗಿದ್ದರು.
ಅಂತ್ಯಕ್ರಿಯೆ
ಹೊನ್ನಾವರ: ಚಂದ್ರಹಾಸ ನಾಯ್ಕ ಅವರ ಅಂತ್ಯಕ್ರಿಯೆ ಸೋಮವಾರ ಹೊನ್ನಾವರ ತಾಲೂಕು ಹಡಿನಬಾಳ ಪಂಚಾಯತ್ ವ್ಯಾಪ್ತಿಯ ಹುಡುಗೋಡಿನಲ್ಲಿ ನಡೆಯಿತು. ಅವರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗಣ್ಯರು ಚಂದ್ರಹಾಸರ ಕಲಾ ಪ್ರತಿಭೆಯ ಕುರಿತು ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ