ಬಜೆಯಲ್ಲಿದೆ ಲಕ್ಷ ಲೋಡು ಹೂಳು: ತೆಗೆದರೆ ನೀರು,ತೆಗೆಯದಿರೆ ಕಣ್ಣೀರು!


Team Udayavani, May 7, 2017, 3:56 PM IST

Baje-dam-maniapl.jpg

ಉಡುಪಿ: ನಗರದಲ್ಲಿ ಮಾತ್ರವಲ್ಲದೆ ಎಲ್ಲೆಡೆಯೂ ನೀರಿಗೆ  ಹಾಹಾಕಾರ ಎದ್ದಿದೆ. ಕಳೆದ ವರ್ಷ ಮಳೆ ಪ್ರಮಾಣ ಕಡಿಮೆಯಾದ್ದು, ಮಳೆಗಾಲ ಬೇಗನೆ ಕೊನೆಗೊಂಡದ್ದು ಕಾರಣವಾದರೂ ಬಜೆಯಲ್ಲಿ ಹೂಳು ತೆಗೆಯದೆ ಇದ್ದುದೂ ಇನ್ನೊಂದು ಪ್ರಮುಖ ಕಾರಣಗಳಲ್ಲಿ ಒಂದು ಎಂಬ ವಾದವಿದೆ. ಒಂದು ಅಂದಾಜಿನ ಪ್ರಕಾರ ಸ್ಥಳೀಯರು ಹೇಳುವಂತೆ ಒಂದು ಲಕ್ಷ ಲೋಡು ಹೂಳು ಅಲ್ಲಿ ತುಂಬಿಕೊಂಡಿದೆ. ಇಷ್ಟೊಂದು ಹೂಳು ತುಂಬಿದರೆ ನೀರು ನಿಲ್ಲುವುದಾದರೂ ಎಲ್ಲಿ?

ಸುಮಾರು ಹತ್ತು ವರ್ಷಗಳ ಹಿಂದೆ ಮರಳುಗಾರಿಕೆ ನಿಷೇಧವಾದಾಗ ಬಜೆ ಅಣೆಕಟ್ಟು ಪ್ರದೇಶದಲ್ಲಿ ಹೂಳು ತೆಗೆಯಲೂ ಇದನ್ನು ಥಳುಕು ಹಾಕಲಾಯಿತು. ಹೂಳು ತೆಗೆಯುವುದೆಂದರೆ ಅದು ಮರಳು ತೆಗೆಯುವುದು ಎಂಬ ವ್ಯಾಖ್ಯಾನ ನೀಡಿದರು. ಆದರೆ ಆಯಾ ವರ್ಷ ಜಿಲ್ಲಾಧಿಕಾರಿಯವರು ವಿಶೇಷ ಮುತುವರ್ಜಿಯಿಂದ ಹೂಳು ತೆಗೆಸುತ್ತಿದ್ದರು. ಇದು ನಡೆಯದೆ ನಾಲ್ಕೈದು ವರ್ಷಗಳೇ ಆಗಿವೆ.

ಮಳೆಗಾಲ ಆರಂಭವಾದಾಗ ಘಟ್ಟದ ಮೇಲಿನ ಮಣ್ಣು ನೀರಿನ ಜತೆ ಹರಿದುಬರುತ್ತದೆ. ನದಿ ಯಲ್ಲಿ ನೀರಿನ ಹರಿಯುವಿಕೆ ಸುಮಾರು ಜನವರಿವರೆಗೆ ಇರುತ್ತದೆ. ಈ ಅವಧಿಯಲ್ಲಿ ಸಂಗ್ರಹವಾದ ಹೂಳನ್ನು ತೆಗೆದರೆ ನೀರಿನ ಶೇಖರಣೆ ಸಾಧ್ಯವಾಗುತ್ತದೆ. ಇಲ್ಲವಾದರೆ ಶೇಖರಣೆಯಾದ ಹೂಳಿನ ಮೇಲಿನಿಂದ ನೀರು ಹರಿದು ಸಮುದ್ರ ಸೇರುತ್ತದೆ. ಈಗ ಆದದ್ದೂ ಅಷ್ಟೆ ಎನ್ನಲಾಗುತ್ತಿದೆ.

ನೀರೂ ಲಭ್ಯ; ಮರಳೂ ಲಭ್ಯ
ಒಂದು ಕಡೆ ಮರಳುಗಾರಿಕೆಗೆ ನಿಷೇಧ, ಇನ್ನೊಂದು ಕಡೆ ಮರಳಿಗೆ ಹಾಹಾಕಾರ ಇವೆರಡು ಮುಖಗಳು ಕಂಡುಬರುತ್ತಿದ್ದರೆ ಇಲ್ಲಿ ಕಾನೂನು ಪರಿಪಾಲಿಸಿ ಹೂಳು ತೆಗೆಯದೆ ಇದ್ದದ್ದು ನೀರಿನ ಹಾಹಾಕಾರಕ್ಕೆ ಕಾರಣವಾಗಿದೆ. ಕಾನೂನು ಪಾಲನೆ ಮುಖ್ಯವೋ? ಜನರಿಗೆ ಕುಡಿಯುವ ನೀರು ಮುಖ್ಯವೋ? ಬಜೆ ಅಣೆಕಟ್ಟು ಪ್ರದೇಶದಲ್ಲಿ ತುಂಬಿದ ಹೂಳನ್ನು ಬಡಜನರಿಗೆ ಕಡಿಮೆ ದರದಲ್ಲಿ ಮರಳು ಆಗಿ ನೀಡಬಹುದು. ಆಗ ಒಂದಿಷ್ಟು ಮರಳು ಹಾಹಾಕಾರ ನೀಗೀತು, ಜತೆಗೆ ಮುಖ್ಯವಾಗಿ ನೀರಿನ ಬವಣೆ ಬಗೆಹರಿದೀತು. ಈ ಸಮಸ್ಯೆಯನ್ನು ಬಗೆ ಹರಿಸದೆ ಎಷ್ಟು ಅಣೆಕಟ್ಟು ಕಟ್ಟಿದರೂ ಜನರಿ ಗೇನೂ ಲಾಭವಾಗದು, ಜತೆಗೆ ಜನರ ತೆರಿಗೆ ಹಣ ಪೋಲು ಆಗುತ್ತದೆಯಲ್ಲವೆ? ಹಾಗೆಂದ ಮಾತ್ರಕ್ಕೆ ಈಗಲೇ ಹೂಳೆತ್ತಿದರೆ ತತ್‌ಕ್ಷಣ ನೀರಿನ ಸಂಗ್ರಹವಾಗುವುದಿಲ್ಲ. ಆದರೆ ಮುಂದಿನ ಮಳೆಗಾಲದ ಕೊನೆಯಲ್ಲಿ ಹೂಳೆತ್ತಿದರೆ ಆ ಸ್ಥಳದಲ್ಲಿ ನೀರು ಸಂಗ್ರಹವಾಗಲು ಅನುಕೂಲವಾದೀತು. ಈಗ ತತ್‌ಕ್ಷಣಕ್ಕೆ ಮರಳು ಬೇಕಾದವರಿಗೆ ಸರಕಾರವೇ ಕಡಿಮೆ ದರದಲ್ಲಿ ನೀಡಬಹುದು.

ವಿ-ಭಿನ್ನಾಭಿಪ್ರಾಯಗಳು
ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ತಾಂತ್ರಿಕವಾಗಿ ಹೂಳೆತ್ತುವುದರಿಂದ ಬಹಳ ಉಪಕಾರವಾಗುತ್ತದೆಂದು ಕಂಡುಬರುವುದಿಲ್ಲ ಎನ್ನುತ್ತಾರೆ. ಹೂಳೆತ್ತಲು ಜಿಲ್ಲಾಧಿಕಾರಿಯವರಿಗೆ ಹೇಳುತ್ತಲೇ ಇದ್ದೇನೆ. ಇದರಿಂದ ಸ್ವಲ್ಪವಾದರೂ ಉಪಕಾರವಾದೀತು ಎಂದು ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹೇಳುತ್ತಾರೆ. ಕಾನೂನಿನ ಅಡಚಣೆ ಇದ್ದರೂ ಜಿಲ್ಲಾಧಿಕಾರಿಯವರ ಮೇಲೆ ಒತ್ತಡ ತಂದು ಹೂಳು ಎತ್ತಿದ್ದೆವು ಎನ್ನುತ್ತಾರೆ ಮಾಜಿ ಶಾಸಕ ಕೆ. ರಘುಪತಿ ಭಟ್‌. ಪರವಿರೋಧವಾದ ವಿಚಾರಗಳಿರುವಾಗ ತಜ್ಞರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗುತ್ತದೆ. ಮಣಿಪಾಲದ ಎಂಐಟಿ, ಸುರತ್ಕಲ್‌ ಎನ್‌ಐಟಿಕೆ ಜಾಗತಿಕ ಮಟ್ಟದ ಸಂಸ್ಥೆಗಳು. ಇಲ್ಲಿ ತಜ್ಞ ತಂತ್ರಜ್ಞಾನಿಗಳಿದ್ದಾರೆ.

ತಂತ್ರಜ್ಞಾನಿಗಳ ತಂಡವನ್ನು ನೇಮಿಸಿ ಅವರ ಅಭಿಪ್ರಾಯ ಪಡೆದು ಸೂಕ್ತ ಕ್ರಮಕ್ಕೆ ಮುಂದಾದರೆ ನೀರಿನ ಬವಣೆ ಬಗೆಹರಿಯಲು ಅನುಕೂಲವಾದೀತು. ಹೂಳೆತ್ತುವುದರಿಂದ ಉಪಕಾರವಾಗುವುದಿಲ್ಲವೆಂದರೆ ಪರ್ಯಾಯ ಮಾರ್ಗಕ್ಕಾದರೂ ತಜ್ಞರ ಸಲಹೆ ಪಡೆಯಬೇಕು. ಈ ಸಲಹೆ ಕಾನೂನು ಸಂದಿಗ್ಧತೆ ಉಂಟಾದಾಗಲೂ ಉಪಕಾರವಾಗುತ್ತದೆ.

ಉಪಕಾರವಾಗದು
ಬಜೆ ಅಣೆಕಟ್ಟಿನಲ್ಲಿ ಪಂಪಿಂಗ್‌ ಮಾಡುವ ಜಾಕ್‌ವೆಲ್‌ ನೀರಿನ ಮಟ್ಟ 1.38 ಮೀ. ಇರುತ್ತದೆ. ಇದಕ್ಕಿಂತ ಕೆಳಗೆ ನೀರಿದ್ದರೆ ನೀರನ್ನು ಪಂಪು ಮಾಡಲು ಆಗುವುದಿಲ್ಲ. ಮಳೆಗಾಲದ ಅವಧಿಯಲ್ಲಿಯಾಗಲೀ ಮಳೆಗಾಲದ ಕೊನೆಯಲ್ಲಾಗಲೀ ಹೂಳೆತ್ತಿದರೆ ಕೆಸರು ಆಗುತ್ತದೆ. ವರ್ಷದ 365 ದಿನವೂ ನೀರನ್ನು ಪಂಪು ಮಾಡುವುದರಿಂದ ಹೀಗಾದರೆ ತೊಂದರೆ ಆಗುತ್ತದೆ. ಹೂಳೆತ್ತುವುದರಿಂದ ಉಪಕಾರವಾಗುತ್ತದೆ ಎಂದು ನನಗೆ ಯಾರೂ ಮನವರಿಕೆ ಮಾಡಿಲ್ಲ.
– ಪ್ರಮೋದ್‌ ಮಧ್ವರಾಜ್‌,
 ಉಸ್ತುವಾರಿ ಸಚಿವರು, ಉಡುಪಿ ಜಿಲ್ಲೆ

ಒತ್ತಾಯಿಸುತ್ತಿದ್ದೇನೆ
ನಾನು ಹೋದ ವರ್ಷದಿಂದ ಹೇಳುತ್ತಲೇ ಇದ್ದೇನೆ. ನಾನು ಇತ್ತೀಚೆಗೆ ಹೋಗಿ ನೋಡಿದಾಗ ನದಿ ಮಧ್ಯೆ, ಬದಿಗಳಲ್ಲಿ ಗುಡ್ಡ ಬೆಟ್ಟದಂತೆ ಹೂಳು ತುಂಬಿ ಗಿಡಗಳು ಬೆಳೆದಿರುವುದನ್ನು ಕಂಡಿದ್ದೇನೆ. ಮುಂದೆ ಇದು ಮರವಾಗಿ ಬೆಳೆದೀತು. ನಾನು ಜಿಲ್ಲಾಧಿಕಾರಿಯವರಲ್ಲಿ ಹೂಳೆತ್ತುವ ಕೆಲಸ ಮಾಡಿಸಿ ಎಂದಾಗ ಮರಳುಗಾರಿಕೆ ನಿಷೇಧದಿಂದ ಆಗುತ್ತಿಲ್ಲ ಎಂದು ಹೇಳುತ್ತಾರೆ. ಈಗಲಾದರೂ ತೆಗೆದರೆ ಮುಂದಿನ ವರ್ಷದ ನೀರಿನ ಸಮಸ್ಯೆ ಸ್ವಲ್ಪವಾದರೂ ಬಗೆಹರಿದೀತು. ಏನು ಮಾಡಬೇಕೆಂದು ಗೊತ್ತಾಗ್ತಿಲ್ಲ.
– ಮೀನಾಕ್ಷಿ ಮಾಧವ ಬನ್ನಂಜೆ,
 ನಗರಸಭಾಧ್ಯಕ್ಷೆ, ಉಡುಪಿ

ಹಿಂದೆ ಮಾಡಿದ್ದೆವು
ಬಜೆ ಅಣೆಕಟ್ಟು ಪ್ರದೇಶದಲ್ಲಿಯೇ ಮರಳುಗಾರಿಕೆ ನಿಷೇಧ ಎಂದಿಲ್ಲ. ಎಲ್ಲ ಕಡೆಯ ಮರಳುಗಾರಿಕೆ ನಿಷೇಧದಂತೆ ಬಜೆಗೂ ಅನ್ವಯವಾಗುತ್ತದೆ. 2012ರ ವರೆಗೂ ಪ್ರತಿವರ್ಷ ಜಿಲ್ಲಾಧಿಕಾರಿಯವರ ಮೇಲೆ ಒತ್ತಡ ಹೇರಿ ಹೂಳು ಎತ್ತಿದ್ದೆವು. ನಮಗೆ ಕುಡಿಯುವ ನೀರು ಮುಖ್ಯ.
– ಕೆ. ರಘುಪತಿ ಭಟ್‌, 
ಮಾಜಿ ಶಾಸಕರು, ಉಡುಪಿ

ಇದೇ ತಂತ್ರ ಅದಕ್ಕೂ…
ಈಗ ಡ್ರೆಜ್ಜಿಂಗ್‌ ಮಾಡಿ ನೀರನ್ನು ಬಜೆ ಕಡೆಗೆ ರಿದುಬಿಡುತ್ತಿದ್ದಾರೆ. ಹೂಳೆತ್ತಿ ನೀರು ಸಂಗ್ರಹವಾದಾಗಲೂ ಇದೇ ತಂತ್ರವನ್ನು ಅನ್ವಯಿಸಿ ನೀರು ಸಂಗ್ರಹಾಗಾರಕ್ಕೆ ಬಿಡಬಹುದು.
– ಆನಂದ್‌, ನಿವೃತ್ತ ಎಂಜಿನಿಯರ್‌, ಉಡುಪಿ ನಗರಸಭೆ. 

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.