ಮಟ್ಟುವಿನಲ್ಲಿ ಮನೆಗೆ ಬೆಂಕಿ, ಸುಟ್ಟು ಕರಕಲಾದ ಮನೆಯ ಮೇಲ್ಛಾವಣಿ -50 ಸಾವಿರಕ್ಕೂ ಅಧಿಕ ನಷ್ಟ
Team Udayavani, Aug 25, 2021, 8:54 AM IST
ಕಟಪಾಡಿ: ಮಟ್ಟು ಕಾಲೋನಿ ಸಮೀಪದ ಶ್ರೀ ಬ್ರಹ್ಮಮುಗ್ಗೇರ್ಕಳ ದೈವಸ್ಥಾನದ ಬಳಿ ಗುಲಾಬಿ ಜಯ ಬಂಗೇರ ಎಂಬವರ ಗುಡಿಸಲೊಂದಕ್ಕೆ ಆ.24ರಂದು ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 50 ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿದೆ.
ದೇವರಿಗೆ ಹಚ್ಚಿಟ್ಟ ದೀಪದ ಮೂಲಕ ಆಕಸ್ಮಿಕವಾಗಿ ಬೆಂಕಿಯು ಮನೆಯೊಳಗೆ ವ್ಯಾಪಿಸಿದ್ದಾಗಿ ಮನೆಮಂದಿ ಪರಿತಪಿಸುತ್ತಿದ್ದು, ಗುಡಿಸಲಿನ ಮಾಡಿಗೆ ಹೊದಿಸಿದ್ದ ಟರ್ಪಲ್ ಸುಟ್ಟು ಕರಕಲಾಗಿರುತ್ತದೆ. ಮನೆಯೊಳಗಿದ್ದ ಪೀಠೋಪಕರಣ, ಔಷಧಿ, ಧವಸ ಧಾನ್ಯ, ಮೀನುಗಾರಿಕೆಗೆ ಉಪಯೋಗಿಸುವ ಬಲೆ ಸಹಿತ ಗೃಹೋಪಯೋಗಿ ಸೊತ್ತುಗಳು ಸುಟ್ಟು ಕರಕಲಾಗಿರುತ್ತದೆ.
ದಿನಗೂಲಿ ನೌಕರರಾಗಿರುವ ಗುಲಾಬಿ ಜಯ ಬಂಗೇರ ಅವರು ಪುತ್ರರನ್ನು ಮನೆಯ ಬಳಿ ಬಿಟ್ಟು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ನಿತ್ಯದ ದಿನಗೂಲಿಗೆ ತೆರಳಿದ್ದರು. ಮಕ್ಕಳು ನೆರೆ ಮನೆಯ ಬಳಿ ಆಟವಾಡುತ್ತಿದ್ದರು. ಆ ಸಂದರ್ಭ ಮನೆಯ ಮಾಡಿನಿಂದ ದಟ್ಟವಾಗಿ ಬೆಂಕಿ ಸಹಿತ ಹೊಗೆಯು ಕಂಡು ಬಂದಿದ್ದರಿಂದ ನೆರೆ ಹೊರೆಯವರು ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದು, ಅದಾಗಲೇ ಸಾಕಷ್ಟು ಹಾನಿ ಸಂಭವಿಸಿತ್ತು. ಬೆಂಕಿ ಹತ್ತಿ ಉರಿಯುವ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಂಭಾವ್ಯ ಪ್ರಾಣಾಪಾಯದಂತಹ ಹೆಚ್ಚಿನ ದುರಂತವು ತಪ್ಪಿತ್ತು ಎಂದು ಸ್ಥಳೀಯರು ನಿಟ್ಟುಸಿರು ಬಿಡುತ್ತಿರುವುದು ಕಂಡು ಬಂದಿತ್ತು.
ಇದನ್ನೂ ಓದಿ:ತಾಲಿಬಾನ್ಗೆ ಚೀನ ನೆರವು ಘೋಷಣೆ!
ಬಡಕುಟುಂಬವು ಮನೆಯ ನಿತ್ಯೋಪಯೋಗಿ ಧವಸ ಧಾನ್ಯ ಸಹಿತ ಬೀಡಿ ಕಟ್ಟುವ ಎಲೆ, ಹೊಗೆಸೊಪ್ಪು, ದಿನಗೂಲಿ ನೌಕರಿಯಿಂದ ದುಡಿದು ತಂದ ತಿಂಡಿ ತಿನಿಸು ಸಹಿತ ಆಹಾರ ಸಾಮಾಗ್ರಿಯನ್ನೂ ಕಳೆದುಕೊಂಡ ತಮ್ಮ ಅಸಹಾಯಕತೆ, ಸಂಕಟವನ್ನು ನೆನೆದು ಕಣ್ಣೀರಿಡುತ್ತಿರುವುದು ಕಂಡು ಬಂದಿದ್ದು, ನೆರೆ ಹೊರೆಯವರು ಸುಟ್ಟು ಕರಕಲಾದ ಸಾಮಾಗ್ರಿಗಳ ಸಹಿತ ಅಳಿದುಳಿದ ಪರಿಕರಗಳನ್ನು, ಬಟ್ಟೆ ಬರೆಗಳನ್ನು ತೆರವುಗೊಳಿಸುವಲ್ಲಿ ಕೈ ಜೋಡಿಸುತ್ತಿದ್ದರು.
ಘಟನಾ ಸ್ಥಳಕ್ಕೆ ಕೋಟೆ ಗ್ರಾ.ಪಂ. ಅಧ್ಯಕ್ಷ ಕಿಶೋರ್ ಅಂಬಾಡಿ, ಸದಸ್ಯರಾದ ದಯಾನಂದ ಬಂಗೇರ, ಯೋಗೀಶ್ ಮಟ್ಟು, ನಾಗರಾಜ್ ಮಟ್ಟು, ರಮೇಶ್ ಪೂಜಾರಿ, ಪ್ರೇಮಾ, ಪಿಡಿಒ ಶ್ರುತಿ ಕಾಂಚನ್, ಗ್ರಾಮ ಲೆಕ್ಕಿಗ ಲೋಕನಾಥ್ ಲಮ್ಹಾಣಿ, ಗ್ರಾಮ ಸಹಾಯಕ ಕೃಷ್ಣ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ