ಶಂಕರಪುರ ಮಲ್ಲಿಗೆ ದರದಲ್ಲಿ ಏರಿಕೆ; ಅಟ್ಟೆಗೆ 1,250 ರೂ.
Team Udayavani, Sep 11, 2019, 7:30 PM IST
ಸಾಂದರ್ಭಿಕ ಚಿತ್ರ
ಶಿರ್ವ: ಮಳೆಗಾಲದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಮಲ್ಲಿಗೆ ದರದಲ್ಲಿ ಭಾರೀ ಏರಿಕೆ ಕಂಡಿದ್ದು ಕಳೆದೆರಡು ದಿನಗಳಿಂದ ಅಟ್ಟೆಗೆ ಕಟ್ಟೆಯಲ್ಲಿ ಗರಿಷ್ಠ ದರ 1,250ರೂ.ಗೆ ತಲುಪಿದೆ. ಸೆ.8-9ರಂದು 950-850 ರೂ. ಇದ್ದ ಮಲ್ಲಿಗೆ ದರ ಸೆ.10-11ರಂದು 1,250 ರೂ. ತಲುಪಿದೆ.
ಮಳೆ ಬಿಸಿಲಿನ ನಡುವೆ ಈ ಬಾರಿಯ ಮಳೆಗಾಲದಲ್ಲಿ ಶಂಕರಪುರ ಮಲ್ಲಿಗೆ ದರದಲ್ಲಿ ಹೆಚ್ಚಿನ ಏರುಪೇರು ಕಾಣದೆ ಸ್ಥಿರತೆ ಕಾಯ್ದುಕೊಂಡಿತ್ತು. ಸಾಧಾರಣ ಬೇಡಿಕೆಯಿಂದಾಗಿ ಜೂ.18 ರಂದು ಮಾತ್ರ ಕನಿಷ್ಠ ದರ 90 ರೂ.ಗೆ ತಲುಪಿತ್ತು.
ಮಲ್ಲಿಗೆಯೊಂದಿಗೆ ಜಾಜಿಗೆ ಪ್ರತ್ಯೇಕ ದರ ನಿಗದಿಯಾಗುತ್ತಿದ್ದು ಜಾಜಿಯ ಅಧಿಕ ಇಳುವರಿಯಿಂದಾಗಿ ಕಟ್ಟೆಗೆ ಬರುವ ಹೂವಿನ ಪ್ರಮಾಣ ಹೆಚ್ಚಾಗಿ ಮಂಗಳವಾರ 220 ರೂ. ಇದ್ದ ಜಾಜಿ ದರ ಬುಧವಾರ ಇಳಿಕೆ ಕಂಡು 150 ರೂ. ತಲುಪಿದೆ.
ಶುಭ ಸಮಾರಂಭಗಳು ಪ್ರಾರಂಭಗೊಂಡಿದ್ದು ಇಳುವರಿ ಕಡಿಮೆಯಾಗಿ ಮಲ್ಲಿಗೆಗೆ ಬೇಡಿಕೆ ಕುದುರಲು ಕಾರಣವಾಗಿದೆ. ದರ ಏರುಗತಿಯಿಂದಾಗಿ ಮಲ್ಲಿಗೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.
ಮಳೆಗೆ ಹಾಳಾಗುವ ಮೊಗ್ಗು
ನಿರಂತರ ಮಳೆ ಸುರಿದರೆ ಹೂವಿನ ಮೊಗ್ಗು ಹಾಳಾಗಿ ಇಳುವರಿ ಕಡಿಮೆಯಾಗುತ್ತದೆ. ಈ ಬಾರಿಯ ಮಳೆಗಾಲದ ಪ್ರಾರಂಭದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಳೆ ಕಡಿಮೆಯಾಗಿ ಹೆಚ್ಚಿನ ರೋಗಬಾಧೆ ಕಂಡು ಬರಲಿಲ್ಲ. ಗಿಡಗಳು ಹಾಳಾಗದೆ ಇಳುವರಿಯೂ ಉತ್ತಮವಾಗಿದ್ದು ಬೆಳೆಗಾರರಿಗೆ ಆಶಾದಾಯಕವಾಗಿತ್ತು. ಆದರೆ ಕಳೆದೊಂದು ತಿಂಗಳಿನಿಂದ ವಿಪರೀತ ಮಳೆಬಂದು ಗಿಡಗಳ ಮೊಗ್ಗು ಹಾಳಾಗಿ ಇಳುವರಿ ಕಡಿಮೆಯಾಗಿ ಕಟ್ಟೆಗೆ ಬರುವ ಹೂವಿನ ಪ್ರಮಾಣ ಕಡಿಮೆಯಾಗಿದ್ದು ದರದಲ್ಲಿ ಏರಿಕೆ ಕಂಡಿದೆ.
ಬೆಳೆ ಕಡಿಮೆ, ಬೇಡಿಕೆ ಹೆಚ್ಚು
ಕಳೆದೊಂದು ತಿಂಗಳಿನಿಂದ ವಿಪರೀತ ಮಳೆಬಂದು ಗಿಡಗಳು ಹಾಳಾಗಿಮಲ್ಲಿಗೆ ಬೆಳೆ ಕಡಿಮೆಯಾಗಿದೆ. ಶುಭ ಸಮಾರಂಭಗಳಿದ್ದು ಮಲ್ಲಿಗೆಗೆ ಬೇಡಿಕೆ ಕುದುರಿದ್ದು ಹೂವಿನ ಅಭಾವವಿರುವುದರಿಂದ ಅಟ್ಟೆಗೆ ಗರಿಷ್ಠ 1,250 ರೂ.ತಲುಪಿದೆ.
-ವಿಲಿಯಂ ಮಚಾದೋ, ಮಲ್ಲಿಗೆ ವ್ಯಾಪಾರಿ, ಶಿರ್ವ
ತುಸು ಆಶಾದಾಯಕ
ಹವಾಮಾನ ಪೂರಕವಾಗಿಲ್ಲದ ಕಾರಣ ಗಿಡಗಳು ಹಾಳಾಗಿ ಮಲ್ಲಿಗೆ ಇಳುವರಿ ಕಡಿಮೆಯಾಗಿದೆ. ಬೇಡಿಕೆಗನುಗುಣವಾಗಿ ದರದಲ್ಲಿ ಏರಿಕೆ ಕಂಡಿದ್ದು ಮಲ್ಲಿಗೆ ಬೆಳೆಗಾರರಿಗೆ ಆಶಾದಾಯಕವಾಗಿದೆ.
-ವೈಲೆಟ್ ಕ್ಯಾಸ್ತಲಿನೊ, ಮಲ್ಲಿಗೆ ಬೆಳೆಗಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…