ಸಮವಸ್ತ್ರ ಧರಿಸಿಯೇ ತಪಾಸಣೆ: ಪೊಲೀಸರ ಹೇಳಿಕೆ
ಪೊಲೀಸ್ ಕರ್ತವ್ಯಕ್ಕೆ ಅಡ್ಡಿ; ಓರ್ವನ ವಿರುದ್ಧ ಪ್ರಕರಣ
Team Udayavani, Sep 14, 2019, 5:10 AM IST
ಉಡುಪಿ: ಗುರುವಾರ ಉಡುಪಿ ಮೀನು ಮಾರುಕಟ್ಟೆ ರಸ್ತೆಯಲ್ಲಿ ಸಂಚಾರ ಠಾಣಾ ಪೊಲೀಸರು ಸಮವಸ್ತ್ರ ಧರಿಸಿಯೇ ವಾಹನ ತಪಾಸಣೆ ನಡೆಸಿ ನಿಯಮ ಉಲ್ಲಂಸಿದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ ಸಂಚಾರ ಪೊಲೀಸರ ಜೀಪು ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮಹಮ್ಮದ್ ಹಾರೀಸ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂಚಾರ ಪೊಲೀಸ್ ಎಸ್ಐ ಮತ್ತು ಸಿಬಂದಿ ಸಮವಸ್ತ್ರದಲ್ಲಿದ್ದುಕೊಂಡೇ ವಾಹನಗಳನ್ನು ತಪಾಸಣೆ ನಡೆಸಿ ಪ್ರಕರಣ ದಾಖಲಿಸಿ ದಂಡ ಸಂಗ್ರಹಿಸುತ್ತಿದ್ದರು. ಅಲ್ಲಿ 11 ಪ್ರಕರಣಗಳನ್ನು ದಾಖಲಾಗಿದ್ದವು. ಇದೇ ವೇಳೆ ಹೆಲ್ಮೆಟ್ ಧರಿಸದೆ ಬಂದ ಬೈಕ್ ಸವಾರನನ್ನು ತಡೆದು ನಿಲ್ಲಿಸಲಾಯಿತು. ಆಗ ಆತ ಮೊಬೈಲ್ನಲ್ಲಿ ಯಾರಿಗೋ ಕರೆ ಮಾಡಿದ. ಸ್ವಲ್ಪ ಹೊತ್ತಿನಲ್ಲಿ ಇನ್ನೋರ್ವ ವ್ಯಕ್ತಿ(ಮಹಮ್ಮದ್ ಹಾರಿಸ್) ಸ್ಥಳಕ್ಕೆ ಬಂದು ಎಸ್ಐ ಇದ್ದ ಜೀಪಿನ ಎದುರು ನಿಂತು “ಇಲ್ಲಿ ಯಾಕೆ ಕೇಸು ಹಾಕುವುದು? ನೀವು ಕೆಳಗಿಳಿಯಿರಿ’ ಎಂದು ಉಪ ನಿರೀಕ್ಷಕರಿಗೆ ಕೈ ತಾಗಿಸಿ ಕೂಗಾಡಲು ಆರಂಭಿಸಿದ.
ಆಗ ಸ್ಥಳದಲ್ಲಿ ಜನ ಸೇರಿದರು. ಇದನ್ನು ಗಮನಿಸಿದ ಉಪ ನಿರೀಕ್ಷಕರು ನಗರ ಠಾಣೆಗೆ ಮಾಹಿತಿ ನೀಡಿದರು. ನಗರ ಠಾಣೆಯ ಇಬ್ಬರು ಪೊಲೀಸರು ಸಂಚಾರ ಪೊಲೀಸರ ನೆರವಿಗಾಗಿ ಬಂದಿದ್ದರು. ಅದರಲ್ಲಿ ಓರ್ವ ಸಿಬಂದಿ ಹಿಂದಿನ ದಿನ ರಾತ್ರಿ ಕರ್ತವ್ಯ ನಿರ್ವಹಿಸಿದವರಾಗಿದ್ದು, ಗುರುವಾರವೂ ರಾತ್ರಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಅವರು ಸಾದಾ ಉಡುಪಿನಲ್ಲಿದ್ದರು. ಅವರು ಕೂಡ ಸ್ಥಳಕ್ಕೆ ಬಂದು ಕೂಗಾಡುತ್ತಿದ್ದ ವ್ಯಕ್ತಿಯನ್ನು ಸಮಾಧಾನಪಡಿಸಲು ಯತ್ನಿಸಿದರು. ಅವರಿಗೂ ಆ ವ್ಯಕ್ತಿ ಗದರಿದ್ದಾನೆ. ಅನಂತರ ಆತನು ಮೊದಲು ಸವಾರಿ ಮಾಡುತ್ತಿದ್ದ ವ್ಯಕ್ತಿಯನ್ನು ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಅಲ್ಲಿಂದ ಬೈಕಿನಲ್ಲಿ ಹೊರಟು ಹೋಗಿದ್ದಾನೆ. ಪೊಲೀಸರ ಕರ್ತವ್ಯದಲ್ಲಿ ಯಾವುದೇ ಲೋಪವಾಗಿಲ್ಲ’ ಎಂದು ಎಸ್ಪಿ ಕಚೇರಿ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕರ್ತವ್ಯಕ್ಕೆ ಅಡ್ಡಿ
ಇಲಾಖೆಯ ಜೀಪಿಗೆ ಅಡ್ಡ ಬಂದು “ನೀವು ಇಲ್ಲಿ ಯಾಕೆ ಕೇಸು ಹಾಕುವುದು? ಕೆಳಗೆ ಇಳಿಯಿರಿ’ ಎಂದು ಹೇಳಿ ಉಪನಿರೀಕ್ಷಕರನ್ನು ಹೆದರಿಸುವಂತೆ ಜೀಪಿನ ಒಳಗೆ ಕೈ ಹಾಕಿ ಕೂಗಾಡಿದಾತನನ್ನು ಮಹಮ್ಮದ್ ಹಾರಿಸ್ ಎಂದು ಗುರುತಿಸಲಾಗಿದೆ. ಆತ ಬೈಕಿನ ದಾಖಲೆಪತ್ರಗಳನ್ನು ಪರಿಶೀಲಿಸಲು ಅಡ್ಡಿಪಡಿಸಿದ್ದಾನೆ. ಪೊಲೀಸರ ಜೀಪು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಆತನ ವಿರುದ್ಧ ನಗರ ಠಾಣೆಯಲ್ಲಿ ಕಲಂ 353 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ