ಅಪಾಯದ ಅಂಚಿನಲ್ಲಿ ಜಾಂಬೂರು ಹೊಸ ಸೇತುವೆ


Team Udayavani, Aug 1, 2019, 6:23 AM IST

jamboor

ಕುಂದಾಪುರ: ಇನ್ನೇನು ಈ ಗ್ರಾಮದ ಜನರ ಕನಸು ನನಸಾಗುವ ಭರವಸೆಯ ಕಂಗಳು ನೋಡ ನೋಡುತ್ತಿರುವಾಗಲೇ ಆ ಬೆಳಕು ಆರಿಸುವ ದಿನಗಳು ಬಾರದಿರಲಿ ಎಂದು ಜನ ಪ್ರಾರ್ಥಿಸುತ್ತಿದ್ದಾರೆ. ಏಕೆಂದರೆ ಹೊಸದಾಗಿ ಸೇತುವೆ ರಚನೆಯಾಗಿದ್ದರೂ ಅದರ ಸಮೀಪದ ಅಡ್ಡಿ ನಿವಾರಿಸದ ಕಾರಣ ಹೊಳೆ ಮಧ್ಯೆ ಎದ್ದುನಿಂತ ಹೊಚ್ಚ ಹೊಸ ಸೇತುವೆ ಅಪಾಯದಲ್ಲಿದೆ.

ಇಂತಹ ಪರಿಸ್ಥಿತಿ ಇರುವುದು 74ನೇ ಉಳ್ಳೂರು ಗ್ರಾಮದ ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶ ಜಾಂಬೂರು ಎಂಬಲ್ಲಿ. ಇಲ್ಲಿ ಹೊಸದಾಗಿ ನಿರ್ಮಾಣ ಮಾಡಿದ ಸೇತುವೆ, ಅದರ ಪಕ್ಕದಲ್ಲೇ ಹಳೆಯ ವೆಂಟೆಡ್‌ ಡ್ಯಾಂ ಅಥವಾ ಕಿರು ಸೇತುವೆ ಒಡೆಯದೆ ಇರುವುದರಿಂದ, ಹೊಸ ಸೇತುವೆಯಡಿ ನೀರು ಸಲೀಸಾಗಿ ಹೋಗದೆ ಹೊಸ ಸೇತುವೆ ಮೇಲೆ ಹತ್ತಿ ಹೋಗುತ್ತದೆ. ಸೇತುವೆಯ ಎರಡು ಕಡೆ ಇರುವ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡದ ಸಂಬಂಧ ಪಟ್ಟವರು ಹಳೆಯ ವೆಂಟೆಡ್‌ ಡ್ಯಾಂ ಒಡೆಯದೆ ಇದ್ದರೆ, ಹೊಸ ಸೇತುವೆಗೆ ಅಪಾಯ ತಪ್ಪಿದ್ದಲ್ಲ ಎಂಬ ಆತಂಕದಲ್ಲಿ ಸ್ಥಳೀಯರಿದ್ದಾರೆ.

ಜನರ ಆಸೆ ಈಡೇರಿತು

74ನೇ ಉಳ್ಳೂರು ಗ್ರಾಮದ ಹಲವು ಕುಗ್ರಾಮಗಳಿಗೆ ಸಂಪರ್ಕ ಸುಲಭವಾಗಿದೆ. ಕೋಟೆ ಎಂಬ ಸ್ಥಳದ ಮಹಾಲಿಂಗೇಶ್ವರ ದೇಗುಲ ಸಹಿತ ತೆಂಕೂರು, ಜಾಂಬೂರು, ಗುಂಡ್ರಿ, ಅಬ್ಬಿ ಬೇರುಗಳ ಸುತ್ತ ವಾರಾಹಿ ಮತ್ತು ಸಣ್ಣ ಹೊಳೆ ಹರಿಯುತ್ತಿದ್ದು, ಉಳ್ಳೂರು ತಲುಪಲು ಮೆಟ್ಕಲ್ ಗುಡ್ಡೆ ದಾಟಿ 15 ಕಿ.ಮೀ. ಕ್ರಮಿಸಬೇಕಿತ್ತು. ಈಗ ಸೇತುವೆ ನಿರ್ಮಾಣವಾಗಿದ್ದು ಕೇವಲ 1.5 ಕಿ.ಮೀ. ಕ್ರಮಿಸಿದರೆ ಉಳ್ಳೂರು ತಲುಪುತ್ತದೆ.

ಇನ್ನು ಹತ್ತಿರ ಹತ್ತಿರ…

ಇಲ್ಲಿ ಸುಮಾರು 20ರಿಂದ 30 ಕುಟುಂಬಗಳ ಸುಮಾರು 150 ನಿವಾಸಿಗಳು ವಾಸಿಸುತ್ತಿದ್ದು, ಸೇತುವೆ ಭಾಗ್ಯದಿಂದಾಗಿ ಬಸ್ಸು ಸೇವೆಯೂ ಆರಂಭವಾದರೆ ಅಂಚೆ-ಕಚೇರಿ, ಬ್ಯಾಂಕ್‌, ಗ್ರಾ.ಪಂ. ಕಚೇರಿ, ಗ್ರಾ. ಕರಣಿಕರ ಕಚೇರಿಗೆ ಕಡಿಮೆ ಸಮಯದಲ್ಲಿ ತೆರಳಬಹುದಾಗಿದೆ. ನದಿಗೆ ಕೀಳುಮನೆ ಹೊಂಡ ಅಥವಾ ಅಂಸಾಡಿ ಎಂಬಲ್ಲಿ ಸೇತುವೆ ನಿರ್ಮಿಸಿ ಕೊಡಿ ಎಂಬ ಬೇಡಿಕೆಯಿತ್ತು. ಈ ಕುರಿತು ಉದಯವಾಣಿ 2017ರ ಅ.15ರಂದು ‘ದ್ವೀಪ ಸದೃಶ ಪ್ರದೇಶ: ಕೋಟೆ ಮಹಾಲಿಂಗೇಶ್ವರ ದೇಗುಲಕ್ಕೆ ಸಂಪರ್ಕ ವ್ಯವಸ್ಥೆಯ ಕೊರತೆ’ ಎಂದು ವರದಿ ಮಾಡಿತ್ತು. ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅಧಿಕಾರಿಗಳ ಮೂಲಕ ಸ್ಥಳ ಪರಿಶೀಲನೆ ವರದಿ ತರಿಸಿ ಜಾಂಬೂರುಗೆ ವಾರಾಹಿ ಬಲದಂಡೆ ಕಾಲುವೆಯ 5ನೇ ಕಿ.ಮೀ.ನ ಅಂಸಾಡಿ ಎಂಬಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಸುಮಾರು 32 ಲಕ್ಷ ರೂ. ಅಂದಾಜು ವೆಚ್ಚದಲ್ಲಿ 5.5 ಮೀ ಅಗಲದ ಸೇತುವೆಗೆ ಅನುದಾನ ದೊರಕಿಸಿಕೊಟ್ಟರು.

ಸಮಸ್ಯೆಯಿದೆ

ಆದರೆ ಈಗ ಸಮಸ್ಯೆ ತಲೆದೋರಿದೆ. ಮಳೆ ಬರುವ ಮುನ್ನ ಇಂತಹ ಸಮಸ್ಯೆ ಇದೆ ಎಂದು ಸಂಬಂಧಪಟ್ಟವರ ಗಮನಕ್ಕೆ ಬಂದಿಲ್ವೋ ಅಥವಾ ಬಂದಿದ್ದರೂ ನಿರ್ಲಕ್ಷ್ಯ ಮಾಡಿದರೋ ಗೊತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಹೊಸ ಸೇತುವೆ ಪಕ್ಕದಲ್ಲೇ ಹಳೆಯ ವೆಂಟೆಡ್‌ ಡ್ಯಾಂ ಅಥವಾ ಕಿರು ಸೇತುವೆ ಇದೆ. ಇದನ್ನು ಒಡೆಯದೆ ಬಾಕಿಯಿಟ್ಟ ಕಾರಣ ಹೊಸ ಸೇತುವೆಯ ಅಡಿ ಭಾಗದಲ್ಲಿ ಮಳೆ ನೀರು ಸಲೀಸಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಜೋರು ಮಳೆ ಬಂದಾಗ ನದಿ ನೀರು ಹೊಸ ಸೇತುವೆಯ ಮೇಲೆ ಹತ್ತಿ ಹೋಗುತ್ತದೆ. ಕಿಂಡಿ ಅಣೆಕಟ್ಟಿನ ಮೂಲಕ ನೀರು ಸಂಗ್ರಹವಾಗಿ ಸೇತುವೆ ಮೂಲಕ ಹಾದು ಹೋಗುವ ಕಾರಣ ನೀರಿನ ಪ್ರಮಾಣ ಹೆಚ್ಚಿರುತ್ತದೆ. ಇದು ಒಂದಲ್ಲ ಒಂದು ದಿನ ಅಪಾಯಕ್ಕೆ ದಾರಿ. ಸಂಪರ್ಕ ರಸ್ತೆ ಕೂಡ ಹೊಂಡಗಳಿಂದ ಆವೃತವಾಗಿ ನಾದುರಸ್ತಿಯಲ್ಲಿದೆ.

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.