ಸಾಹಸ ಸಂಗತಿ : ಕಾಂಚನಜುಂಗಾ ಶಿಖರವೇರಿದ ಹರ್ಷದ್‌ ರಾವ್‌


Team Udayavani, Jun 15, 2018, 4:30 AM IST

ಕುಂದಾಪುರ: ಪರ್ವತಾಹರೋಹಣ ಮಾಡುವುದು ಕೆಲವರಿಗೊಂದು ಹವ್ಯಾಸ. ಅದರಲ್ಲೂ ಹಿಮಪ್ರದೇಶಗಳಲ್ಲಿ ಶಿಖರವೇರುವುದು ಅಸಾಮಾನ್ಯ ಸಾಧನೆಯೇ ಸರಿ. ಕುಂದಾಪುರದ ಆರ್ಡಿ ಮೂಲದವರಾದ ಹರ್ಷದ್‌ ರಾವ್‌ ಅವರು ಅಂತಹುದೇ ಒಂದು ಸಾಧನೆಯನ್ನು ಈಗ 28,169 ಅಡಿ ಎತ್ತರದ ಕಾಂಚನಜುಂಗಾ (ಕಾಂಚನಗಂಗಾ- ಕೆ-2) ಪರ್ವತವೇರುವ ಮೂಲಕ ಮಾಡಿದ್ದಾರೆ.

2016ರಲ್ಲಿ ವಿಶ್ವದ ಅತೀ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರವೇರಿದ್ದ 29ರ ಹರೆಯದ ಹರ್ಷದ್‌ ರಾವ್‌ ಅವರು ಈ ವರ್ಷದ ಮೇ 20ಕ್ಕೆ ಭಾರತದ ಅತೀ ಎತ್ತರದ ಪರ್ವತವಾಗಿರುವ ಸಿಕ್ಕಿ ರಾಜ್ಯ ಹಾಗೂ ನೇಪಾಳ ದೇಶದ ಮಧ್ಯೆ ಬರುವ ಕಾಂಚನಜುಂಗಾವನ್ನು ಏರುವ ಮೂಲಕ ಭಾರತದ ಶ್ರೇಷ್ಠ ಪರ್ವತಾರೋಹಿತಗಳ ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಹರ್ಷದ್‌ ರಾವ್‌ ಅವರು ಸದ್ಯ ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿದ್ದು, ಆರ್ಡಿಯ ಕಮಲಾಕ್ಷ ರಾವ್‌ ಹಾಗೂ ಹೇಮಲತಾ ರಾವ್‌ ದಂಪತಿಯ ಪುತ್ರ.

2014ರ ಅನಂತರ ಮೊದಲಿಗರು
2014ರ ಅನಂತರ ಕಾಂಚನ ಜುಂಗಾ ಶಿಖರವೇರುತ್ತಿರುವವರ ಪೈಕಿ ಹರ್ಷದ್‌ ಮೊದಲಿಗರು. ಕಾರಣ ಕಾಂಚನಜುಂಗಾ ಶಿಖರವೇರಲು ಹಲವು ಮಂದಿ ಪ್ರಯತ್ನಪಟ್ಟರೂ ಕೂಡ ಯಾರೂ ಅದರಲ್ಲಿ ಸಫಲತೆ ಕಂಡಿರಲಿಲ್ಲ. 2016ರಲ್ಲಿಯೂ ಅನೇಕ ಮಂದಿ ಪರ್ವತಾವೇರಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ.


ಎವರೆಸ್ಟ್‌ಗಿಂತ ಯಾಕೆ ಕೆ-2 ಕಷ್ಟ?

ಪರ್ವತಾರೋಹಣದಲ್ಲಿ ಯಾವಾಗಲೂ ಸವಾಲು ಹವಾಮಾನ. ಮಂಜುಗಡ್ಡೆ ಯಾವಾಗ ಕರಗುತ್ತದೋ ಗೊತ್ತಾಗುವುದಿಲ್ಲ. ಎವರೆಸ್ಟ್‌ಗೆ ಏರಿದಾಗಲೂ ಆಕ್ಸಿಜನ್‌ ರೆಗ್ಯುಲೇಟರ್‌ ಕೈ ಕೊಟ್ಟಿತ್ತು. ಆದರೂ ಬೇರೆಯವರ ಸಹಾಯದಿಂದ ಶಿಖರವೇರಿದ್ದರು. ಕೆ-2 ನಲ್ಲೂ ಅದೇ ರೀತಿ ಆಕ್ಸಿಜನ್‌ ಸಮಸ್ಯೆ ಕಾಡಿತ್ತು. ಶಿಖರವೇರುವಾಗ 4 ಹಂತಗಳಿದ್ದು, ಅದರಲ್ಲಿ ಕೊನೆಯ ಸಮ್ಮಿಟ್‌ (ಮುಕ್ತಾಯ) ಎನ್ನುವ ಹಂತದಿಂದ ಕೆ-2ನ ತುತ್ತತುದಿಗೆ 1,200 ಮೀ. ಎತ್ತರವಿದ್ದರೆ, ಅದೇ ಎವರೆಸ್ಟ್‌ನಲ್ಲಿ ಇದು ಸುಮಾರು 300 ಮೀ. ಎತ್ತರದ ಕಡಿಮೆ ಇರುತ್ತದೆ. ಆ ಕಾರಣದಿಂದ ಕೆ-2 ಶಿಖರವೇರುವುದು ತ್ರಾಸದಾಯಕ ಎಂದು ಹರ್ಷದ್‌ ತಮ್ಮ ಪರ್ವತಾರೋಹಣದ ಅನುಭವವನ್ನು ಬಿಚ್ಚಿಡುತ್ತಾರೆ. ಹರ್ಷದ್‌ ರಾವ್‌ ಅವರು ವಿಶ್ವದ ಎರಡು ಶ್ರೇಷ್ಠ ಶಿಖರಗಳನ್ನು ಏರಿ, ಅಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದು, ಕರಾವಳಿಗರಿಗೆ ಮಾತ್ರವಲ್ಲದೆ, ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ.

ಎವರೆಸ್ಟ್‌ಗಿಂತ ಕೆ-2ಗೇರುವುದು ಕಷ್ಟ
12 ಗಂಟೆ ಶಿಖರವೇರಿ, 13 ಗಂಟೆ ಅವರೋಹಣ ಮಾಡುವುದು ತ್ರಾಸದಾಯಕವಾದ ಕೆಲಸ. ನಾನು ಒಂದು ಹಂತದಲ್ಲಿ ಸಂಪೂರ್ಣ ಬಸವಳಿದು ಹೋಗಿದ್ದೆ. ಆದರೂ ಗುರಿ ತಲುಪಿ ತ್ರಿವರ್ಣ ಧ್ವಜವನ್ನು ಕಾಂಚನಜುಂಗಾದ (ಕೆ-2) ತುತ್ತತುದಿಯಲ್ಲಿ ಹಾರಿಸಿದ್ದು, ಆ ಎಲ್ಲ ಆಯಾಸ, ಬಳಲಿಕೆಯನ್ನು ತಿಳಿಗೊಳಿಸಿತು. ಮೌಂಟ್‌ ಎವರೆಸ್ಟ್‌ ವಿಶ್ವದ ಎತ್ತರದ ಶಿಖರವಾಗಿದ್ದರೂ, ಕಾಂಚನಜುಂಗಾವನ್ನು ಹತ್ತುವುದು ಅಷ್ಟು ಸುಲಭವಲ್ಲ.
– ಹರ್ಷದ್‌ ರಾವ್‌

— ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.