ಮೌಲ್ಯ ಸಹಿತ ಬದುಕೂ ಸಾಹಿತ್ಯ: ಮುದ್ದು ಮೂಡುಬೆಳ್ಳೆ
Team Udayavani, Dec 21, 2018, 2:15 AM IST
ಶಿರ್ವ: ಓದು-ಬರೆಹ- ಕಥೆ-ಕಾವ್ಯ ಮಾತ್ರ ಸಾಹಿತ್ಯವಲ್ಲ. ಮೌಲ್ಯ ಸಹಿತ ಬದುಕೂ ಸಾಹಿತ್ಯವಾಗಿದೆ. ಸ್ವತಂತ್ರವಾಗಿ ಬಾಳುವುದು ಸಾಹಿತ್ಯದ ಆಶಯವಾಗಿದೆ. ತುಳು ಸಂಸ್ಕೃತಿಯನ್ನು ನಾಡ ನುಡಿಯಾದ ಕನ್ನಡದ ಮೂಲಕ ಪ್ರಬಲವಾಗಿಯೇ ಪ್ರತಿಪಾದಿಸಿದ ಹೆಗ್ಗಳಿಗೆ ನಮ್ಮದಾಗಿದೆ. ತುಳು-ಕನ್ನಡ-ಕೊಂಕಣಿ ಭಾಷೆಗಳು ಪರಸ್ಪರ ಬೆಸೆದಿರುವ ತುಳುನಾಡಿನಲ್ಲಿ ಬಾಂಧವ್ಯಗಳೂ ಭದ್ರವಾಗಿ ಬೆಸೆದಿವೆ. ಕೆಲವು ಕಿಡಿಗೇಡಿಗಳು ಈ ಬಾಂಧವ್ಯವನ್ನು ಕೆಡಿಸುವ ಫಲ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದನ್ನೆಲ್ಲ ಮೀರಿ ನಾವೆಲ್ಲರೂ ಒಂದಾಗಿಯೇ ಇದ್ದೇವೆ ಎಂದು ಕಾಪು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ಹೇಳಿದರು.
ಕನ್ನಡ ಪದವೀಧರರಿಗೆ ಯೋಗ್ಯ ಸ್ಥಾನಮಾನ ಅಗತ್ಯ
ಯುವ ತಲೆಮಾರನ್ನು ಸಾಹಿತ್ಯದ ಕಡೆಗೆ ಸೆಳೆಯುವ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳ, ಯುವಜನರ ಸಹಭಾಗಿತ್ವದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಸಾಹಿತ್ಯ ಸಮ್ಮೇಳನ, ಸಾಹಿತ್ಯ ಗೋಷ್ಠಿ, ವಿಚಾರ ಸಂಕಿರಣಗಳು ನಡೆಯಬೇಕು. ಕನ್ನಡ ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗಾವಕಾಶ ಮತ್ತು ಯೋಗ್ಯ ಸ್ಥಾನಮಾನ ಒದಗಿಸಲು ಸರಕಾರ ಯೋಜನೆ ರೂಪಿಸುವ ಅಗತ್ಯವಿದೆ ಎಂದರು.
ಆಕಾಶವಾಣಿ ನೇರದರ್ಶನ!
ದಶಕಗಳ ಕಾಲ ಆಕಾಶವಾಣಿಯಲ್ಲಿ ‘ಆಕಾಶವಾಣಿ ಮಂಗಳೂರು, ನಾನು ಮುದ್ದು ಮೂಡುಬೆಳ್ಳೆ’ ಎಂದು ಹೇಳುವುದನ್ನು ಮಾತ್ರ ಕೇಳುತ್ತಲೇ ಬಂದಿದ್ದ ಸಾರ್ವಜನಿಕರು ಮೊದಲ ಬಾರಿಗೆ ಮುದ್ದು ಮೂಡುಬೆಳ್ಳೆಯವರನ್ನು ನೇರವಾಗಿ ನೋಡಿ ಅವರ ಕಂಠಸಿರಿ ಆನಂದಿಸಿದರು.
ಮಿಂಚಿದ ಮೂಡುಬೆಳ್ಳೆ
ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಮುದ್ದು ಮೂಡುಬೆಳ್ಳೆ, ಉದ್ಘಾಟಕ ಪ್ರೊ| ಬಿ.ಎಂ. ಹೆಗ್ಡೆ, ಖ್ಯಾತ ಚಿತ್ರ ಕಲಾವಿದರಾದ ಉಪಾಧ್ಯಾಯ ಮೂಡುಬೆಳ್ಳೆ, ಬೆಳ್ಳೆ ಪದ್ಮನಾಭ ನಾಯಕ್ ಅವರು ಪ್ರಮುಖವಾಗಿ ಗುರುತಿಸಿಕೊಂಡಿದ್ದು ಇವರೆಲ್ಲರೂ ಕಾಪು ತಾಲೂಕಿನ ಮೂಡುಬೆಳ್ಳೆಯವರೇ ಆಗಿದ್ದಾರೆ ಎಂದು ಗಣ್ಯರು ಶ್ಲಾಘಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ