ಬಾವಿಗೆ ಬಿದ್ದ ಕಾಳಿಂಗ ಸರ್ಪ ರಕ್ಷಣೆ; ಅರಣ್ಯಕ್ಕೆ ರವಾನೆ
Team Udayavani, Jul 2, 2017, 3:45 AM IST
ಸಿದ್ದಾಪುರ: ಸುಮಾರು 25 ಅಡಿ ಉದ್ದ ಇರುವ ಗಂಡು ಕಾಳಿಂಗ ಸರ್ಪವು ಕಾಡಿನಿಂದ ಆಹಾರ ಅರಸಿ ಬಂದು ಉಳ್ಳೂರು-74 ಗ್ರಾಮದ ದೊಡ್ಮನೆ ರತ್ನಾ ಪೂಜಾರಿ ಅವರ ಮನೆಯ ಬಾವಿಗೆ ಘಟನೆಯು ಜೂ. 30ರಂದು ನಡೆದಿದೆ.
ಉಳ್ಳೂರು-74 ಗ್ರಾಮದ ದೊಡ್ಮನೆ ಹುಲಿಗುಡ್ಡೆ ಮೀಸಲು ಅರಣ್ಯ ತಪ್ಪಲಿನ ಪ್ರದೇಶಕ್ಕೆ ತಾಗಿಕೊಂಡಿದ್ದು, ಆಗಾಗ ಕಾಡು ಪ್ರಾಣಿಗಳು ಹಾಗೂ ಹಾವುಗಳು ಆಹಾರ ಅರಸಿ ನಾಡಿಗೆ ಬರುವ ಘಟನೆಗಳು ಘಟಿಸುತ್ತಿರುತ್ತವೆ. ಕಾಳಿಂಗ ಸರ್ಪವು ಶುಕ್ರವಾರ ಆಹಾರ ಅರಸಿಕೊಂಡು ಬಂದು ದೊಡ್ಮನೆ ರತ್ನಾ ಪೂಜಾರಿ ಅವರ ಮನೆಯ ಆವರಣ ಇಲ್ಲದ ಬಾವಿಗೆ ಬಿದ್ದಿತ್ತು. ಇದನ್ನು ಕಂಡ ಮನೆಯವರು ತತ್ಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಶಂಕರನಾರಾಯಣ ಅರಣ್ಯ ಇಲಾಖೆಯ ಅಧಿಕಾರಿಗಳು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಅಜಯಗಿರಿ ನೇತೃತ್ವದ ತಜ್ಞರ ತಂಡದೊಂದಿಗೆ ಬಂದು ಹಾವನ್ನು ರಕ್ಷಿಸಿ ಸುರಕ್ಷಿತ ಅರಣ್ಯಕ್ಕೆ ರವಾನಿಸಿದರು.
ರಕ್ಷಣೆಯ ಕಾರ್ಯಾಚರಣೆಯಲ್ಲಿ ಶಂಕರನಾರಾಯಣ ವಲಯಾರಣ್ಯಾಧಿಕಾರಿ ಗೋಪಾಲ್, ಸಿಬಂದಿಗಳಾದ ಹರೀಶ್, ವೀರಣ್ಣ, ಮಂಜುನಾಥ ಕಾಂಬ್ಳೆ, ಗುರುರಾಜ್, ಶ್ರೀಕಾಂತ, ಉಳ್ಳೂರು-74 ಗ್ರಾ. ಪಂ. ಸದಸ್ಯರಾದ ಯು. ಸುಧಾಕರ ಶೆಟ್ಟಿ, ಪ್ರಸಾದ ಶೆಟ್ಟಿ ಹಾಗೂ ಸ್ಥಳೀಯ ಯುವಕರು ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ