ನೆಲಗಡಲೆ ಕೊಯ್ಯಲು ಬಂತು ಯಂತ್ರ; ಹೆಚ್ಚು ಕೆಲಸ ಕಡಿಮೆ ಖರ್ಚು


Team Udayavani, Mar 13, 2017, 12:45 PM IST

0903kde2-2.jpg

ಕೃಷಿ ಚಟುವಟಿಕೆಯಲ್ಲಿ ಈಗ ಯಂತ್ರಗಳದ್ದೇ ಕಾರುಬಾರು. ಭತ್ತದ ಸಸಿ ನೆಡಲು ನಾಟಿ ಯಂತ್ರ, ಭತ್ತ ಕೊಯ್ಲು ಮಾಡಲು ಕಟಾವು ಯಂತ್ರವಾದರೆ ನೆಲಗಡಲೆ ಕೊಯ್ಯಲು ಕೂಡ ರೈತ ಯಂತ್ರಗಳ ಮೊರೆ ಹೋಗುವಂತಾಗಿದೆ. ಕೃಷಿ ಕೆಲಸ ಮಾಡಲು ಕೂಲಿ ಆಳುಗಳು ಸಿಗುವುದಿಲ್ಲ ಎಂಬ ಕೂಗಿಗೆ ಯಂತ್ರಗಳು ರೈತನ ಕೈ ಹಿಡಿಯುತ್ತಿರುವುದು ಕೃಷಿ ಕ್ಷೇತ್ರದ ಬೆಳವಣಿಗೆಗೆ ಆಶಾದಾಯಕವಾಗಿ ಪರಿಣಮಿಸುತ್ತಿದೆ.

ಕರಾವಳಿಯ ಮರವಂತೆ ಸಮೀಪದ ಬಿಜೂರು, ಉಪ್ಪುಂದ, ಖಂಬದಕೋಣೆ, ನಾಗೂರು, ಕಿರಿಮಂಜೇಶ್ವರ ಮುಂತಾದ ಭಾಗಗಳಲ್ಲಿ ಈಗ ನೆಲಗಡಲೆ ಬೆಳೆ ಕೊಯ್ಲು ಸಮಯವಾಗಿದ್ದು, ಈ ಹಿಂದಿನಂತೆ ರೈತರು ಗದ್ದೆಗಳಲ್ಲಿ ನೆಲಗಡಲೆ ಗಿಡಗಳನ್ನು ಕಿತ್ತು ದಿನಗಟ್ಟಲೆ ಗದ್ದೆಗಳಲ್ಲಿ ಕುಳಿತು ಕೊಯ್ಯುವ (ಗಿಡದಿಂದ ಬೇರ್ಪಡಿಸುವ) ಕಾರ್ಯದಲ್ಲಿ ನಿರತವಾಗುವ ಅಗತ್ಯವಿಲ್ಲ, ಅನಿವಾರ್ಯವೂ ಅಲ್ಲ.  ಈಗ ಗದ್ದೆಗಳಲ್ಲಿ ನೆಲಗಡಲೆ ಫಸಲನ್ನು ಗಿಡದಿಂದ ಬೇರ್ಪಡಿಸುವ ಯಂತ್ರಗಳ ಸದ್ದು ಜೋರಾಗಿಯೇ ಕೇಳಿಬರುತ್ತಿದೆ.

ಕರಾವಳಿಗೆ ಕಾಲಿಟ್ಟ ನೆಲಗಡಲೆ ಒಕ್ಕರಣೆ ಯಂತ್ರ
ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಗಿಡದಿಂದ ನಲೆಗಡಲೆ ಫಸಲನ್ನು ಬೇರ್ಪಡಿಸುವ ಒಕ್ಕರಣೆ ಯಂತ್ರವನ್ನು ಕೃಷಿಕ ನಾಗರಾಜ ದೇವಾಡಿಗ ಅವರು ಮೊದಲ ಬಾರಿಗೆ ಪರಿಚಯಿಸಿದ್ದು, ಕೃಷಿ ಕೆಲಸದ ಬಗ್ಗೆ ಜನರ ನಿರಾಸಕ್ತಿ, ಕೂಲಿ ಆಳುಗಳ ಕೊರತೆ, ದಿನದಿಂದ ದಿನಕ್ಕೆ ಏರುತ್ತಿರುವ ಸಂಬಳ ಇವುಗಳನ್ನೆಲ್ಲ ಮನಗಂಡ ಇವರು ಹೊರ ಜಿಲ್ಲೆಗಳಲ್ಲಿ ಸುತ್ತಾಡಿ ಯಂತ್ರದ ಕುರಿತು ಸಂಪೂರ್ಣ ತಿಳಿದುಕೊಂಡು ಎರಡು ವರ್ಷಗಳ ಹಿಂದೆ ಯಂತ್ರವನ್ನು ಈ ಭಾಗಕ್ಕೆ ತಂದು ಬಳಕೆ ಮಾಡಿದಾಗ ಇದರಲ್ಲಿ ಯಶಸ್ಸು ದೊರಕಿತು.  ಇತರೆ ರೈತರು ಉಪಯೋಗ ಮಾಡಿದಾಗ ಕೂಲಿಗಳಿಗೆ ತಗುಲುವ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಹಾಕಿದಾಗ ಗಣನೀಯ ವ್ಯತ್ಯಾಸ ಕಂಡುಬಂದಿರುವುದರಿಂದ ರೈತರಿಗೆ ಇದು ಒಂದು ರೀತಿಯಲ್ಲಿ ವರದಾನವಾಗಿ ಕಂಡಿತು.

ಕಡಿಮೆ ಖರ್ಚು ಹೆಚ್ಚು ಕೆಲಸ
ಒಂದು ಕೂಲಿ ಆಳು ದಿನಕ್ಕೆ ಒಂದರಿಂದ ಎರಡು ಚೀಲ ನೆಲಗಡಲೆ ಕೊಯ್ದರೆ ಯಂತ್ರವು ಒಂದು ಗಂಟೆಗೆ ಸುಮಾರು 20 ರಿಂದ 25 ಚೀಲದಷ್ಟು ನೆಲಗಡಲೆಯನ್ನು ಗಿಡದಿಂದ ಬೇರ್ಪಡಿಸುತ್ತದೆ. ಎರಡು ಗಂಟೆಗೆ ಒಂದು ಎಕರೆಯಷ್ಟು ಗಿಡಗಳನ್ನು ಕಟಾವು ಮಾಡುತ್ತದೆ ಎಂದು ಹೇಳುತ್ತಾರೆ. ಒಂದು ದಿನಕ್ಕೆ  ಒಬ್ಬರಿಗೆ (ಮಹಿಳೆಯರಿಗೆ) 300 ರೂ. ವೇತನವಾದರೆ, ಯಂತ್ರದ ಒಂದು ಗಂಟೆ ಬಾಡಿಗೆ 800 ರೂ. ಮಾತ್ರ. ಇದರ ಜತೆಗೆ ಗಿಡಗಳನ್ನು ಸಣ್ಣದಾಗಿ ಕಟಾವು ಮಾಡುವುದರಿಂದ ಜಾನುವಾರುಗಳಿಗೆ ತಿನ್ನಲು ಮಳೆಗಾಲದ ಆಹಾರಕ್ಕಾಗಿ  ಮತ್ತೂಮ್ಮೆ ಸಿದ್ಧಪಡಿಸುವ ಅಗತ್ಯವಿರುವುದಿಲ್ಲ, ಅದಕ್ಕೆ ತಗಲುವ ಇತರೆ ಖರ್ಚು ಉಳಿತಾಯ ಸಾಧ್ಯವಾಗಿದೆ.

ದುಬಾರಿ ಸಂಬಳ ಜತೆಗೆ, ಕೂಲಿ ಆಳುಗಳ ಕೊರತೆಯಿಂದ ರೋಸಿ ಹೋಗಿರುವ ರೈತರಿಗೆ ಯಂತ್ರದ ಆಗಮನದಿಂದಾಗಿ ಕೃಷಿ ಚಟುವಟಿಕೆಗೆ ಮಾಡುವ ವೆಚ್ಚಗಳಲ್ಲಿ ಒಂದಿಷ್ಟು ಕಡಿಮೆಯಾಗಿರುವುದು ರೈತರ ಸಂತೋಷಕ್ಕೆ ಕಾರಣವಾಗಿದೆ. ದಿನದಿಂದ ದಿನಕ್ಕೆ ಕೃಷಿಗಳಲ್ಲಿ ಹೊಸ ಯಂತ್ರಗಳ ಬಳಕೆ ಹೆಚ್ಚುತ್ತಿರುವುದು ಕೃಷಿ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ.

ಕಡಿಮೆ ಹಣ 
ವರ್ಷದಿಂದ ವರ್ಷಕ್ಕೆ ಕೂಲಿ ಆಳುಗಳ ಕೊರತೆ ಏರುತ್ತಿರುವ ಸಂಬಳದಿಂದಾಗಿ ಹೆಚ್ಚು  ಖರ್ಚು ವೆಚ್ಚಗಳಿಂದಾಗಿ ಕೃಷಿಯಲ್ಲಿ ಲಾಭಾಂಶ ಕಾಣಲು ಸಾಧ್ಯವಾಗುತ್ತಿಲ್ಲ. ಇಂದು ಹಣ ಕೊಟ್ಟರೂ ಕೂಲಿ ಆಳುಗಳು ಸಿಗುತ್ತಿಲ್ಲವಾದ್ದರಿಂದ ಯಂತ್ರದ ಬಳಕೆ ಉಪಯುಕ್ತ ವಾಗಿದೆ. ನೆಲಗಡಲೆ ಕೈಯಿಂದ ಕೊಯ್ಯಲು ಕೆಲವು ದಿನಗಳು ಬೇಕಾಗುತ್ತದೆ, ಸಾವಿರಾರು ರೂಪಾಯಿ ಅಗತ್ಯವಿದೆ. ಆದರೆ ಈ ಯಂತ್ರದಿಂದ ಕಡಿಮೆ ಹಣದಲ್ಲಿ 
ಕೆಲಸವು ಒಂದೆರಡು ಗಂಟೆಗಳಲ್ಲಿ ಮುಗಿಯುತ್ತದೆ. 

– ನಾಗರಾಜ ದೇವಾಡಿಗ, ಕೃಷಿಕರು

– ಕೃಷ್ಣ ಬಿಜೂರು

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.