ಕುಂದಾಪುರ: ಮಳೆಕೊಯ್ಲು ಮಾಡಲು ಉದಯವಾಣಿ ಪ್ರೇರಣೆ
Team Udayavani, Aug 11, 2019, 6:09 AM IST
ಕುಂದಾಪುರ: ಮನೆಮನೆಗೆ ಮಳೆಕೊಯ್ಲು ಉದಯವಾಣಿಯ ಯಶಸ್ವೀ ಅಭಿಯಾನ. ಅನೇಕರು ಈಗಾಗಲೇ ಮಳೆಕೊಯ್ಲು ಅಳವಡಿಸಿಕೊಂಡು ಇದನ್ನು ಶ್ಲಾಘಿಸಿದ್ದು ಅಲ್ಲದೇ ಇನ್ನಷ್ಟು ಮಂದಿ ತಾವು ಅಳವಡಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಪ್ರಸಿದ್ಧ ಮೂರುಮುತ್ತು ನಾಟಕ ತಂಡದ ಕಲಾವಿದ ಕುಳ್ಳಪ್ಪು ಖ್ಯಾತಿಯ ಸತೀಶ್ ಪೈ ಅವರು ಶುಕ್ರವಾರ ತಮ್ಮ ಮನೆಗೆ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ.
ಕುಂದಾಪುರ ಪುರಸಭೆ ವ್ಯಾಪ್ತಿಯ ಮದ್ದುಗುಡ್ಡೆಯ ಸರಕಾರಿ ಬಾವಿಕಟ್ಟೆ ಬಳಿಯ ನಿವಾಸಿ ನಾಟಕ ಕಲಾವಿದ ಸತೀಶ್ ಪೈ (ಕುಳ್ಳಪ್ಪು) ಅವರು ತಮ್ಮ 1,500 ಚ.ಅಡಿಯ ತಾರಸಿ ಮನೆ ನೀರು ಹರಿದು ಹೋಗಲು ಪೈಪ್ ಅಳವಡಿಸಿ ಮಳೆಕೊಯ್ಲು ಆರಂಭಿಸಿದ್ದಾರೆ. ಕೋಣಿಯ ಶಶಿಕಾಂತ್ ಅವರು ಮಾರ್ಗದರ್ಶನ ನೀಡಿದ್ದಾರೆ. ಸರಿಸುಮಾರು ಏಳೆಂಟು ಅಡಿ ಆಳದ ಬಾವಿ. ಅದಕ್ಕಿಂತ ಹೆಚ್ಚು ಆಳ ಮಾಡಿದರೆ ಉಪ್ಪುನೀರು. ಎಪ್ರಿಲ್ ವೇಳೆಗೆ ನೀರು ಕಡಿಮೆಯಾಗುತ್ತದೆ.
ಆಳಮಾಡುವಂತಿಲ್ಲ, ನೀರೂ ಇಲ್ಲ ಎಂಬ ಸ್ಥಿತಿ. ಅಂಗಳಕ್ಕೆ ಇಂಟರ್ಲಾಕ್ ಅಳವಡಿಸಿದ ಕಾರಣ ನೀರೆಲ್ಲ ರಸ್ತೆಗೆ ಹರಿದು ಪೋಲಾಗುತ್ತಿತ್ತು. ಮನೆಯ ತ್ಯಾಜ್ಯ ನೀರು ಇಂಗಲು ಕಾಂಕ್ರಿಟ್ ರಿಂಗ್ ಅಳವಡಿಸಿ ಗುಂಡಿ ಮಾಡಿದ್ದಾರೆ. ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂಬ ಚಿಂತನೆಯಲ್ಲಿದ್ದಾಗ ಉದಯವಾಣಿಯಲ್ಲಿ ಪ್ರಕಟವಾಗುತ್ತಿರುವ ಮನೆ ಮನೆಗೆ ಮಳೆಕೊಯ್ಲು ಅಭಿಯಾನ ಸರಣಿ ಗಮನಿಸಿದ್ದಾರೆ. ವಿಳಂಬಿಸದೇ ಡ್ರಮ್ ಪದ್ಧತಿಯಲ್ಲಿ ನೀರಿಂಗಿಸಲು ಮುಂದಾಗಿದ್ದಾರೆ.
ಕಂದಾವರ ಪಂಚಾಯತ್ ಅಧ್ಯಕ್ಷೆ ಸವಿತಾ ಆರ್. ಪೂಜಾರಿ ಅವರು ಮೂಡ್ಲಕಟ್ಟೆ ಸಮೀಪದ ಹಿರೇಬೈಲು ನಿವಾಸಿ. ಮನೆ ಖರ್ಚಿಗೆ, ಗಿಡಗಳಿಗೆ ಬಿಡಲು ಪಂಚಾಯತ್ ನಳ್ಳಿ ನೀರಿನ ಸಂಪರ್ಕ ಹೊಂದಿರದೇ ಬಾವಿಯ ನೀರೇ ಎಲ್ಲಕ್ಕೂ ಆಧಾರ ಎಂದು ನಂಬಿದವರು. ಬೇಸಗೆಯಲ್ಲಿ ಕುಡಿಯಲು ನೀರಿನ ತತ್ವಾರ ಆಗದಿದ್ದರೂ ಗಿಡಗಳಿಗೆ ಹನಿಸಲು ನೀರಿಲ್ಲ ಎಂದಾಯಿತು. ಆದರೆ ಮುಂದಿನ ವರ್ಷಗಳಲ್ಲಿ ನೀರಿನ ಸಮಸ್ಯೆಯಾಗಲಿದೆ ಎನ್ನುವ ಮುನ್ಸೂಚನೆಯರಿತರು. ಪರಿಣಾಮವಾಗಿ ಮೇ ತಿಂಗಳಲ್ಲಿ ಮಳೆನೀರಿನ ಕೊಯ್ಲು ನಡೆಸಿದರು. 900 ಚ.ಅಡಿಯ ತಾರಸಿ ಮನೆಯ ನೀರು 25 ಅಡಿ ಆಳದ ಸುಂದರ ವಿನ್ಯಾಸದ ಬಾವಿಗೆ ಬೀಳುವಂತೆ ಮಾಡಿದರು. ಈಗ ಇವರ ಮನೆಗೆ ಮಳೆನೀರು ಕೊಯ್ಲು ನೋಡಲೆಂದೇ ಜನ ಬರುತ್ತಿದ್ದಾರೆ. ಉಳ್ಳೂರು ಶಾಲೆಯ ವಿದ್ಯಾರ್ಥಿಗಳು ಕೂಡಾ ನೋಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?