ಸಚಿವರು ಆದೇಶಿಸಿದ ಆರು ಗಂಟೆಯೊಳಗೆ ರಸ್ತೆ ದುರಸ್ಥಿ: ಸಾರ್ವಜನಿಕರಿಂದ ಶ್ಲಾಘನೆ
Team Udayavani, Aug 9, 2020, 6:22 PM IST
ಉಡುಪಿ: ಇಲ್ಲಿನ ಕುಂದಾಪುರದ ಫ್ಲೈ ಓವರ್ ಬಳಿಯ ರಸ್ತೆ ದರುಸ್ಥಿಯು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಆದೇಶಿಸಿದ ಕೇವಲ ಆರು ಗಂಟೆಯಲ್ಲಿ ಪೂರ್ಣವಾಗಿದೆ.
ಶನಿವಾರ ಮಧ್ಯಾಹ್ನ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕುಂದಾಪುರದಿಂದ ಮಂಗಳೂರಿಗೆ ತೆರಳುವ ಸಂದರ್ಭದಲ್ಲಿ ಬಸ್ರೂರು ಫ್ಲೈಓವರ್ ಬಳಿ ಪ್ರತಿಭಟನಾಕಾರರು ತಡೆದು ರಸ್ತೆ ಪರಿಸ್ಥಿತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಕೂಡಲೇ ಉಡುಪಿ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದ ಸಚಿವರು ತುರ್ತಾಗಿ ರಸ್ತೆ ಕಾಮಗಾರಿ ಮಾಡುವಂತೆ ಆದೇಶಿಸಿದ್ದರು.
ಸಚಿವರ ಆದೇಶದ ಹಿನ್ನಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ತುರ್ತಾಗಿ ರಸ್ತೆ ರಿಪೇರಿ ಮಾಡಿಸಿದೆ. ಕೆಲ ಸಮಯದಿಂದ ನೆನೆಗುದಿಗೆ ಬಿದ್ದದ್ದ ಕಾಮಗಾರಿಯನ್ನು ಸಚಿವರ ಕೆಲವೇ ಗಂಟೆಯಲ್ಲಿ ಮಾಡಿಸಿದ್ದು, ಸಚಿವರು ಜನರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ