ಕೆವೈಸಿ ದೃಢೀಕರಣ: ಪಡಿತರ ವಿತರಣೆಗೆ ನಾನಾ ಸಮಸ್ಯೆಗಳು
ಮುಗಿಯದ ಸರ್ವರ್ ಗೋಳು ,ದೃಢೀಕರಣಕ್ಕೆ 2 ತಿಂಗಳ ಕಾಲಮಿತಿ
Team Udayavani, Sep 17, 2019, 5:29 AM IST
ಸಾಂದರ್ಭಿಕ ಚಿತ್ರ
ಉಡುಪಿ: ಆಹಾರ ನಾಗರಿಕ ಇಲಾಖೆಯ ಕೆವೈಸಿ ದೃಢೀಕರಣಕ್ಕೆ ಆದೇಶ ನೀಡುತ್ತಿದಂತೆ ಸರ್ವರ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು ಸಾರ್ವ ಜನಿಕರು ಪಡಿತರ ಪಡೆದುಕೊಳ್ಳಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಕಳೆದ ಮೂರು ದಿನದಿಂದ ಸರ್ವರ್ ಪದೇ ಪದೇ ಸಂಪರ್ಕವನ್ನು ಕಡಿದುಕೊಳ್ಳುತ್ತಿದ್ದು, ಇದರಿಂದಾಗಿ ಸಿಬಂದಿ ಗಂಟೆಗೆ ಮೂರು ಜನರಿಗೆ ಪಡಿತರ ವಿತರಿಸುವುದೇ ದೊಡ್ಡ ಸವಾಲಿನ ಕೆಲಸವಾಗಿದೆ.
ಕಾರಣವೇನು?
ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಪದ್ಧತಿ ಅಳವಡಿಸಿ ವರ್ಷ ಕಳೆದಿದೆ. ಅಂದಿನಿಂದ ಇಂದಿನ ವರೆಗೆ ಪಡಿತರ ವಿತರಣೆಯಲ್ಲಿ ಒಂದಲ್ಲ ಒಂದು ಸಮಸ್ಯೆಯಾಗುತ್ತಲೇ ಇದೆ. ಕಳೆದ ಹಲವು ತಿಂಗಳಿನಿಂದ ಕಾಡುತ್ತಿರುವ ಸರ್ವರ್ ಸಮಸ್ಯೆಗೆ ಇನ್ನೂ ಮುಕ್ತಿ ದೊರಕಿಲ್ಲ. ಇದೀಗ ಪಡಿತರ ಸಾಮಗ್ರಿ ವಿತರಣೆಯಾಗುವ ವೆಬ್ಸೈಟ್ನಲ್ಲಿ ಕೆವೈಸಿ ತಂತ್ರಾಂಶ ಅಳವಡಿಸಿದ ಬಳಿಕ ಸರ್ವರ್ ಪದೇ ಪದೇ ತನ್ನ ಸಂಪರ್ಕ ಕಳೆದುಕೊಳ್ಳುತ್ತಿದೆ. ವಿವಿಧ ಭಾಗದಲ್ಲಿ ಕೆವೈಸಿ ದೃಢೀಕರಣವಾಗುತ್ತಿರುವುದರಿಂದ ಪಡಿತರ ವಿತರಣೆ ಸಮಸ್ಯೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅಡಕತ್ತರಿಯಲ್ಲಿ ಸಿಬಂದಿ
ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ದೃಢೀಕರಣ ಪ್ರಾರಂಭವಾಗಿಲ್ಲ. ಕೆವೈಸಿ ದೃಢೀಕರಣ ಪಡಿತರ ಅಂಗಡಿಗಳು ಮಾಡಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ನೆಟವರ್ಕ್ ಸಮಸ್ಯೆಯಿಂದ ಕೆವೈಸಿ ದೃಢೀಕರಣ ತಡವಾದರೂ ಸಿಬಂದಿಗಳು ಸಾರ್ವಜನಿಕರಿಂದ ಬೈಗುಳ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನವೆಂಬರ್ ಅಂತ್ಯಕ್ಕೆ ಇ- ಕೆವೈಸಿ
ಆಹಾರ ಇಲಾಖೆಯ ನೂತನ ನಿರ್ದೇಶನದಂತೆ ಪಡಿತರ ಚೀಟಿಯ ಇ -ಕೆವೈಸಿ ದೃಢೀಕರಣ ಮತ್ತೆ ಪ್ರಾರಂಭಿಸಿದೆ. ಹಿಂದೆ ಜೂನ್ನಲ್ಲಿ ಕೆವೈಸಿ ಧೃಡೀಕರಣಕ್ಕೆ ಆದೇಶ ನೀಡಿದರೂ ವಿವಿಧ ಕಾರಣದಿಂದ ನೋಂದಾವಣಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರು ನವೆಂಬರ್ ತಿಂಗಳಿನ ಒಳಗೆ ನೋಂದಾಯಿಸಲು ಗಡುವು ನೀಡಿದೆ. ಈ ಬಾರಿ ಕೆವೈಸಿ ದೃಢೀಕರಣ ಮಾಡದಿರುವವರ ಪಡಿತರ ಸಾಮಗ್ರಿ ತಡೆಹಿಡಿಯಲಾಗುತ್ತದೆ.
ಸರ್ವರ್ ಸಮಸ್ಯೆಯಿಲ್ಲ!
ಸರ್ವರ್ನಲ್ಲಿ ಯಾವುದೇ ಸಮಸ್ಯೆಯಿಲ್ಲ. ಪಡಿತರ ವಿತರಣೆ ವೆಬ್ಸೈಟ್ನಲ್ಲಿ ಅನುಸರಿಸ ಬೇಕಾದ ನಿಯಮಗಳ ಸಿಬಂದಿಗೆ ಸ್ಪಷ್ಟವಾಗಿ ಮಾಹಿತಿ ನೀಡಲಾಗಿದೆ. ಅವುಗಳನ್ನು ಅನುಸರಿ ಸಿದರೆ ಸರ್ವರ್ ಸಮಸ್ಯೆ ಎದುರಾಗುವುದಿಲ್ಲ.
-ಸುನಂದಾ, ಸಹಾಯಕ ನಿರ್ದೇಶಕಿ ಆಹಾರ, ನಾಗರಿಕ ಪೂರೈಕೆ ಇಲಾಖೆ. ದ.ಕ.
ಕೆವೈಸಿ ದೃಢೀಕರಣ: ಸಮಸ್ಯೆಗಳಿಗೆ ಕಾರಣ
ಕೆವೈಸಿ ದೃಢೀಕರಣ ಹಾಗೂ ಪಡಿತರ ವಿತರಣೆ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು Any desk ಮೂಲಕ ಸರಿಪಡಿಸಲಾಗುತ್ತಿದೆ.
-ಕಿರಣ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಿಬಂದಿ
ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್