ಮಲ್ಪೆ -ಸಿಟಿಜನ್ ರಸ್ತೆ: ಬಾಯ್ದೆರೆದು ನಿಂತ ಭಾರೀ ಹೊಂಡ
Team Udayavani, Aug 15, 2019, 7:16 AM IST
ಮಲ್ಪೆ: ಮಲ್ಪೆಯಿಂದ ಸಿಟಿಜನ್ ಸರ್ಕಲ್ಗೆ ಹೋಗುವ ಪೆಟ್ರೋಲ್ ಬಂಕ್ ಸಮೀಪದ ರಸ್ತೆಯಲ್ಲಿ ಭಾರಿ ಪ್ರಮಾಣದ ಹೊಂಡ ನಿರ್ಮಾಣವಾಗಿದ್ದು ವಾಹನ ಮತ್ತು ಜನಸಂಚಾರಕ್ಕೆ ತೊಂದರೆ ಉಂಟಾಗಿದೆ.
ಮಳೆಗೆ ರಸ್ತೆಯ ಜೆಲ್ಲಿ ಎದ್ದು ಹೋಗಿ ಭೀಮಗಾತ್ರದ ಹೊಂಡ ಬಾಯ್ತೆರೆದು ನಿಂತು ಮೃತ್ಯುವಿಗೆ ಅಹ್ವಾನ ನೀಡುವಂತಿದೆ.
ಇದು ಮಲ್ಪೆ ಬೀಚ್ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಮಳೆಗೆ ಕೆಸರು ನೀರು ತುಂಬಿದ್ದು ಹೊಂಡ ತಪ್ಪಿಸಲು ಹೋಗಿ ವಾಹನ ಸವಾರರು ಅಡ್ಡಾದಿಡ್ಡಿ ಚಲಾಯಿಸಿ, ಅಪಘಾತಗಳು ಸಂಭವಿಸು ವಂತಾಗಿದೆ. ಈಗಾಗಲೇ ದ್ವಿಚಕ್ರ ಸವಾರರು ಹಲವು ಬಾರಿ ವಾಹನ ಸಮೇತ ಬಿದ್ದು ಗಾಯಗೊಂಡ ಘಟನೆ ನಡೆದಿವೆ..
ಮಳೆಗಾಲಕ್ಕೆ ಮೊದಲು ಸ್ಥಳೀಯರು ಒಂದಷ್ಟು ಸಿಮೆಂಟ್ ಜಲ್ಲಿ ಹುಡಿ ಹೊಂಡಕ್ಕೆ ಸುರಿದು ಹೊಂಡ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದರೂ ಮಳೆನೀರು ಹರಿದು ಹೋಗಲು ಇಲ್ಲಿನ ಚರಂಡಿಯಲ್ಲಿದ್ದ ಹೂಳನ್ನು ತೆರವುಗೊಳಿಸದ ಕಾರಣ ನೀರು ರಸ್ತೆಯಲ್ಲಿ ಹರಿದು ಮತ್ತೆ ರಸ್ತೆಯಲ್ಲಿ ಹೊಂಡ ಬಿದ್ದಿದೆ. ಸಾರ್ವಜನಿಕರು ಇದರಿಂದ ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಇಷ್ಟೊಂದು ಬೃಹದಾಕಾರವಾಗಿ ಹೊಂಡ ಬಿದ್ದರೂ ಸಂಬಂಧಪಟ್ಟವರು ಹೊಂಡ ಮುಚ್ಚುವ ಕಾರ್ಯ ಕೈಗೊಂಡಿಲ್ಲ. ನಗರಸಭೆ ಚುನಾವಣೆ ನಡೆದು ವರುಷ ಕಳೆದರೂ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ನಿಗದಿಯಾಗದ ಕಾರಣ ಸಾರ್ವಜನಿಕರು ಚುನಾಯಿತ ಪ್ರತಿನಿಧಿಗಳನ್ನು ಪ್ರಶ್ನಿಸುವಂತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಎಂಬುದು ನಾಗರಿಕರ ಆರೋಪ.
ಹೊಂಡ ಕಾಣದೆ ಅಪಘಾತ
ಸೋಮವಾರ ರಾತ್ರಿ ಬಿದ್ದ ನಿರಂತರ ಮಳೆಯಿಂದಾಗಿ ಮಂಗಳವಾರ ಬೆಳಗ್ಗೆ ಇಲ್ಲಿನ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು ಇಲ್ಲಿರುವ ಹೊಂಡ ಕಾಣದೆ ಕೆಲವರು ಬೈಕ್ ಮೇಲಿಂದ ಬಿದ್ದು ಇನ್ನು ಕೆಲವರು ಮುಂದೆ ಹೋಗಲು ಭಯಪಟ್ಟು ವಾಪಸ್ ತೆರಳಿದ್ದಾರೆ.
ಅಪಘಾತದ ಸಾಧ್ಯತೆ ಹೆಚ್ಚಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ