ಮಲ್ಯಾಡಿ: ದೇವಸ್ಥಾನದಿಂದ ಕಳವು
Team Udayavani, Mar 19, 2019, 1:00 AM IST
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮಲ್ಯಾಡಿ ಶ್ರೀ ಸತ್ಯಗಣಪತಿ ಹಾಗೂ ಶ್ರೀ ಮಹಾದೇವಿ ನಂದಿಕೇಶ್ವರ ದೇವಸ್ಥಾನದಲ್ಲಿ ರವಿವಾರ ತಡರಾತ್ರಿ 1 ಗಂಟೆ ಸುಮಾರಿಗೆ ಕಳವು ನಡೆದಿದೆ.
ಘಟನೆ ವಿವರ
ಉಳೂ¤ರು ಕಡೆಯಿಂದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬಂದ ನಾಲ್ವರು ಮುಸುಕುಧಾರಿಗಳ ತಂಡ ಮೊದಲು ಮಲ್ಯಾಡಿ ಸತ್ಯಗಣಪತಿ ದೇವಸ್ಥಾನದಲ್ಲಿದ್ದ ಕಾಣಿಕೆ ಡಬ್ಬವನ್ನು ಹೊತ್ತೂಯ್ದು, ಬಳಿಕ ಗರ್ಭಗುಡಿಯನ್ನು ಪ್ರವೇಶಿಸಿರುವ ದೃಶ್ಯ ಅಲ್ಲಿದ್ದ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಅನಂತರ ಸಮೀಪದ ಮಹಾದೇವಿ ನಂದಿಕೇಶ್ವರ ದೇವಸ್ಥಾನದ ಕಾಣಿಕೆ ಡಬ್ಬಿಗಳೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾರೆ. ಕಳ್ಳರು ಸುಮಾರು 35 ಸಾವಿರಕ್ಕೂ ಅಧಿಕ ಮೊತ್ತ ಕೊಂಡೊಯ್ದಿದ್ದಾರೆ ಎಂದು ತೆಕ್ಕಟ್ಟೆ ಗ್ರಾ.ಪಂ. ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಮುಸುಕುಧಾರಿಗಳು ಉದ್ದ ತೋಳಿನ ಶರ್ಟ್ ಹಾಗೂ ಗ್ಲೌಸ್ ಧರಿಸಿದ್ದರು. ಇತ್ತೀಚೆಗಷ್ಟೆ ಕುಂದಾಪುರ ತಾಲೂಕಿನ ಗೋಳಿಯಂಗಡಿಯ ಜುವೆಲರಿ ಶಾಪ್ನಲ್ಲಿ ನಡೆದ ಕಳ್ಳತನಕ್ಕೂ ಇಂಥದ್ದೇ ಕಾರನ್ನು ಬಳಸಲಾಗಿತ್ತು.
2ನೇ ಬಾರಿ ಕಳ್ಳತನ
ಮಲ್ಯಾಡಿ ಮಹಾದೇವಿ ದೇವಸ್ಥಾನದ ದೇವರ ಬೆಳ್ಳಿ ಪ್ರಭಾವಳಿಯು 2015ರಲ್ಲಿ ಕಳ್ಳತನವಾಗಿತ್ತು. ಆಗ ಕಾಣಿಕೆ ಡಬ್ಬವನ್ನು ಕೂಡ ಸಮೀಪದ ಕೊಜೆ ಹೊಂಡದ ಬಳಿಯಲ್ಲಿ ಕಳ್ಳರು ಎಸೆದು ಹೋಗಿದ್ದರು.
ಕೋಟ ಠಾಣಾಧಿಕಾರಿ ರಫೀಕ್ ಹಾಗೂ ಸಿಬಂದಿ, ಜಿಲ್ಲಾ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ