“ಆಧುನಿಕತೆ ಸೋಗಿನಲ್ಲಿ ಮರೆಯಾಗುತ್ತಿದೆ ಕುಂದಾಪ್ರ ಭಾಷೆ’

ವಿಶ್ವಾದ್ಯಂತ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

Team Udayavani, Aug 2, 2019, 5:22 AM IST

0108KDLM14PH

ಕುಂದಾಪುರ: ಆಧುನಿಕತೆಯ ಸೋಗಿನಲ್ಲಿ ಕುಂದಾಪ್ರ ಕನ್ನಡದ ಶಬ್ದ ಸಂಪತ್ತು ಮರೆಯಾಗುತ್ತಿದೆ. ಇಂತಹ ಶಬ್ದಗಳನ್ನೆಲ್ಲ ಸಂಗ್ರಹಿಸಿ ಪದಕೋಶ ಮಾಡಿದರೆ ಕುಂದಾಪ್ರ ಕನ್ನಡ ದಿನಾಚರಣೆ ಸಾರ್ಥಕ ವಾಗುತ್ತದೆ ಎಂದು ನ್ಯಾಯವಾದಿ, ಸಾಹಿತಿ ಎ.ಎಸ್‌.ಎನ್‌. ಹೆಬ್ಟಾರ್‌ ಹೇಳಿದರು.

ಅವರು ಗುರುವಾರ ಇಲ್ಲಿನ ರೋಟರಿ ಲಕ್ಷ್ಮೀ ನರಸಿಂಹ ಸಭಾಂಗಣದಲ್ಲಿ ಜೂನಿಯರ್‌ ಕಾಲೇಜು, ಕುಂದಪ್ರಭ ಸಂಸ್ಥೆ ವತಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ನಡೆದ ಕೆರಿ ತುಂಬಾ ಕುರಿ ಹೆಜ್ಜೆ ಕುಂದಾಪ್ರ ಕನ್ನಡದ ಒಗಟು, ಹಾಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಶಿಕ್ಷಣಾಧಿಕಾರಿ ನಾಗೇಶ್‌ ಶ್ಯಾನುಭಾಗ್‌, ಯಾವುದೇ ಶಬ್ದ ಚಲಾವಣೆಯಲ್ಲಿ ಇರಲು ಅದಕ್ಕೆ ಸಂಬಂಧಿಸಿದ ವಸ್ತು ಇರಬೇಕು. ನಾವು ಉಪಯೋಗಿಸುವ ಅನೇಕ ಶಬ್ದಗಳು ಕೃಷಿಮೂಲದಿಂದ ಬಂದಿದ್ದು ಬೇಸಾಯವೇ ಮರೆಯಾಗುತ್ತಿರುವ ಕಾರಣ ಶಬ್ದಗಳ ಬಳಕೆಯೂ ಕಡಿಮೆಯಾಗಿದೆ ಎಂದರು.

ಸಂಶೋಧಕ, ಸಾಹಿತಿ, ನಿವೃತ್ತ ಪ್ರಾಚಾರ್ಯ ಕನರಾಡಿ ವಾದಿರಾಜ ಭಟ್‌, ಜೂನಿಯರ್‌ ಕಾಲೇಜಿನ ಉಪಪ್ರಾಂಶುಪಾಲ ಮಾಧವ ಅಡಿಗ ಉಪಸ್ಥಿತರಿದ್ದರು.ಉದ್ಯಮಿ ದತ್ತಾನಂದ ಗಂಗೊಳ್ಳಿ ವಿಜೇತರಿಗೆ ಬಹುಮಾನ ವಿತರಿಸಿದರು. ನಮ್ಮೂರೆ ಚಂದ, ನಮ್ಮೂರೆ ಅಂದ ಕುಂದಾಪ್ರ ಭಾಷಿಯೆ ಕರ್ಣಾನಂದ ಎಂಬ ಫಲಕವನ್ನು ಹೆಬ್ಟಾರ್‌ ಅನಾವರಣಗೊಳಿಸಿದರು. ಪತ್ರಕರ್ತ ಯು.ಎಸ್‌. ಶೆಣೈ ಸ್ವಾಗತಿಸಿ, ಉಪನ್ಯಾಸಕ ಉದಯ್‌ ಕುಮಾರ್‌ ಶೆಟ್ಟಿ ಕಾಳಾವರ ಅತಿಥಿ ಪರಿಚಯ ಮಾಡಿದರು.

ಉಳಿವು ಅತ್ಯಗತ್ಯ
ಕುಂದಾಪ್ರ ಭಾಷೆಯಷ್ಟು ರಭಸದ, ಚುರುಕಿನ, ವೇಗದ, ಚುಟುಕಾದ, ಶಕ್ತಿಯುತ, ಸತ್ವಭರಿತ ಭಾಷೆ ಬೇರಿಲ್ಲ. ಪಠ್ಯದ ಹೊರತಾಗಿ ಈ ಭಾಷೆಯನ್ನು ಬಳಸುವ ಮೂಲಕ ಉಳಿಸಿ ಬೆಳೆಸಬೇಕಾದವರು ಇಂದಿನ ಪೀಳಿಗೆಯವರು. ಭಾಷೆಯನ್ನು ಬೆಳೆಸುವುದು ಆಡುನುಡಿ. ಕನ್ನಡದಲ್ಲಿ ಹಲವು ಪ್ರಥಮಗಳನ್ನು ಕೊಟ್ಟದ್ದು ಕುಂದಾಪುರ ಎನ್ನುವುದು ಮರೆಯಬಾರದು. ಕನ್ನಡದ ಮೊದಲ ಕಾದಂಬರಿ ಬರೆದ ಗುಲ್ವಾಡಿ ವೆಂಕಟ್ರಾಯರು, ಕನ್ನಡದ ಮೊದಲ ನವ್ಯಕವಿ ಎಂ. ಗೋಪಾಲಕೃಷ್ಣ ಅಡಿಗರು, ಶಾಲೆ ಮೆಟ್ಟಿಲು ಹತ್ತದೆ ಅಕ್ಷರ ಬಾರದೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ದಾಖಲೆ ನಿರ್ಮಿಸಿದ ಮೂಕಜ್ಜಿ ಕುಂದಾಪುರದವರು ಎ.ಎಸ್‌.ಎನ್‌. ಹೆಬ್ಟಾರ್‌ ಹೇಳಿದರು. ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಶುಭಹಾರೈಕೆ
ಕುಂದಾಪುರ: ಆಟಿ ಅಮಾವಾಸ್ಯೆಯ ದಿನ ನಡೆದ‌ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಶುಭ ಕೋರಿದ್ದಾರೆ. ಕಡ್ಲ್ ಬದಿಯಿಂದ ಘಟ್ಟದ್‌ ತಪ್ಲ್ ವರಿಗ್‌, ಕುಂದಾಪ್ರ ಕನ್ನಡ ಕುಂದಾಪ್ರ ಸಂಸ್ಕೃತಿ ಏಗಳಿಕೂ ಭಾರಿ ಚೆಂದ. ಹಣ್ಬ್, ಹೊಸ್ತ್, ನಟ್ಟಿ, ಕೊಯ್ಲಯಿಂದ ಹಿಡ್ದ್ ದೈಯ್ದ್ ಮನಿ ಗೆಂಡದ್‌ ಹಬ್ಬದ್‌ವರಿಗ್‌ ಭಾರತ ದೇಶದ್‌ ಸಂಸ್ಕೃತಿ ಶ್ರೀಮಂತ್ಕಿ ಮಾಡುಕ್‌ ಈ ಬಾಷಿ ದೊಡ್‌ ಕೊಡುಗೆ ಕೊಟ್ಟಿತ್‌. ಈ ಭಾಷಿ ಉಳ್ದ್ ಬೆಳ್ದ್ ಊಂಚಿಗ್‌ ಹ್ವಾಪ್ಕೆ ಸರ್ಕಾದ್‌ರ್ ಕಡಿಯಿಂದ ಏನ್‌ ಬೇಕೋ ಅದ್ಕ್ ನಿಮ್‌ ಒಟ್ಟಿಗ್‌ ನಾ ಇದ್ದಿ, ಯಾಕಂದ್ರ್ ಇದ್‌ ಬರೀ ಭಾಷಿ ಅಲ್ಲ ಬದ್ಕ್ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ.

ಕುಂದಾಪುರ ಕನ್ನಡದ ಬರಹ ಪ್ರದರ್ಶನ
ಕುಂದಾಪುರ: ಸರಕಾರಿ ಪ್ರೌಢಶಾಲೆ ಗೋಳಿಯಂಗಡಿಯಲ್ಲಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ನಡೆಸಲಾಯಿತು.

ಕುಂದಾಪುರ ಕನ್ನಡದ ಬರಹಗಳನ್ನು ಬರೆದು ಗೋಡೆಗಳಲ್ಲಿ ಪ್ರದರ್ಶಿಸಿದರು. ಗ್ರಾಂಥಿಕ ಪದಗಳಿಗೆ ಕುಂದಾಪುರ ಕನ್ನಡ ಪದ ಬರೆಯುವ ಸ್ಪರ್ಧೆ, ಕುಂದಾಪುರ ಕನ್ನಡದ ಗಾದೆಗಳನ್ನು ಬರೆಯುವ ಸ್ಪರ್ಧೆ, ಹಾಗೂ ಕುಂದಾಪುರ ಕನ್ನಡದಲ್ಲಿ ಪದ್ಯ ಬರೆಯುವ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.ಕುಂದಾಪುರೇತರ ಶಿಕ್ಷಕರು ಹಾಗೂ ವಸತಿ ನಿಲಯದಲ್ಲಿರುವ ಅನ್ಯ ಜಿಲ್ಲೆಯ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡರು.

ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಚರಣೆ
ಕುಂದಾಪುರ: ಪ್ರಕೃತಿ ಸಹಜವಾಗಿಯೇ ಗಡಸುತನ – ಚುರುಕುತನವನ್ನು ತನ್ನೊಳಗೆ ಆಲಂಗಿಸಿ ಕೊಂಡಿರುವ ಕುಂದಾಪ್ರ ಕನ್ನಡವು ಆಡಂಬರ ರಹಿತವಾದ ಹೃದಯಾಂತರಾಳದ ಭಾಷೆ ಎಂದು ಬೈಂದೂರು ವಿಧಾನ ಸಭಾ ಕ್ಷೇತದ ಶಾಸಕ ಹಾಗೂ ಕುಂದಾಪುರ ಎಜ್ಯುಕೇಶನ್‌ ಸೊಸೈಟಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.

ಅವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ನಡೆದ ವಿಶ್ವ ಕುಂದಾಪ್ರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜು ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೇಶ್‌ ಶೆಟ್ಟಿ ಶುಭಶಂಸನೆಗೈದರು. ಮುಖ್ಯ ಅತಿಥಿ ಕುಂದಾಪುರದ ಹಿರಿಯ ನ್ಯಾಯವಾದಿ ಎ. ಎಸ್‌. ಎನ್‌ ಹೆಬ್ಟಾರ್‌, ಕುಂದಾಪುರ ಎಜುಕೇಶನ್‌ ಸೊಸೈಟಿಯ ಜತೆ ಕಾರ್ಯದರ್ಶಿ ಸುಧಾಕರ್‌ ಶೆಟ್ಟಿ ಬಾಂಡ್ಯ, ಗವರ್ನಿಂಗ್‌ ಕೌನ್ಸಿಲ್‌ ಸದಸ್ಯರಾದ ಅನಿಲ್‌ ಚಾತ್ರಾ, ವಿಶ್ವಾಸ್‌ ಸೋನ್ಸ್‌, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿ ಪ್ರತಿನಿಧಿಗಳಾದ ದೀಕ್ಷಿತ್‌ ಶೆಟ್ಟಿ ಮತ್ತು ಸುಚಿತ್ರಾ ಉಪಸ್ಥಿತರಿದ್ದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಯೋಜಕ ಸುಕುಮಾರ್‌ ಶೆಟ್ಟಿ ಕಮಲಶಿಲೆ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕ ಯೋಗೀಶ್‌ ಶ್ಯಾನುಭೋಗ್‌ ನಿರೂಪಿಸಿದರು. ಉಪ ಪ್ರಾಂಶುಪಾಲ ಚೇತನ್‌ ಶೆಟ್ಟಿ ಕೋವಾಡಿ ಪ್ರಸ್ತಾವಿಸಿದರು. ಇಂಗ್ಲೀಷ್‌ ಉಪನ್ಯಾಸಕಿ ಅಮೃತಾ ಅತಿಥಿಗಳನ್ನು ಪರಿಚಯಿಸಿ, ಕನ್ನಡ ಉಪನ್ಯಾಸಕಿ ರೇಷ್ಮಾ ಶೆಟ್ಟಿ ವಂದಿಸಿದರು.

ಈ ಸಂದರ್ಭ ಜಾನಪದ ಹಾಡುಗಾರ್ತಿ ರೋಹಿಣಿ ಶೆಡ್ತಿ ಗುಡ್ಡಮ್ಮಾಡಿ ಅವರನ್ನು ಸಮ್ಮಾನಿಸಲಾಯಿತು.

ಗಂಟಿ-ಕರು-ಬೇಸಾಯ-ಸಾಗುವಳಿಯಂತಹ ಕೃಷಿಪರ ಬದುಕಿನ ಔಚಿತ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಾ, ಭತ್ತ ಕುಟ್ಟುವ ಹಾಡುಗಳನ್ನು ಪ್ರಸ್ತುತ ಪಡಿಸಿದರು.
ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿಯರು ಕೂಕಣಿ ನೆಂಟರೆ ಕೂಳಿಗ್‌ ಅಕ್ಕಿಯಿಲ್ಲ., ತವರೂರ ದಾರೀಲಿ ಕಲ್ಲಿಲ್ಲ ಮುಳ್ಳಿಲ್ಲ…” ಮೊದಲಾದ ಭತ್ತ ಕುಟ್ಟುವ ಹಾಡುಗಳ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿದ್ಯಾರ್ಥಿ ಶರತ್‌, ಕನ್ನಡ ಉಪನ್ಯಾಸಕ ಸುಕುಮಾರ ಶೆಟ್ಟಿ ರಚಿಸಿದ “ಅಬ್ಬಿ ಬೈಗುಳಿ’ ಕುಂದಾಪುರ ಕನ್ನಡ ಪದ್ಯವನ್ನು, ಕೊಡಗನ ಕೋಳಿ ನುಂಗಿತ್ತಾ ಜಾನಪದ ಶೆ„ಲಿಯಲ್ಲಿ ಹಾಡಿದರು.

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.