ಬಜಗೋಳಿ ಪೇಟೆ: ಮೋರಿ ಕುಸಿದು ವಾಹನ ಸಂಚಾರಕ್ಕೆ ಅಡಚಣೆ
Team Udayavani, Nov 24, 2019, 5:15 AM IST
ಬಜಗೋಳಿ: ಬಜಗೋಳಿ ಪೇಟೆಯ ಬಳಿಯ ಗುರ್ಗಲ್ ಗುಡ್ಡ ಬಳಿಯ ಮೋರಿ ಕುಸಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಗುರ್ಗಲ್ ಗುಡ್ಡ ಬಳಿಯ ಮೋರಿಯು ಕುಸಿದು ಹೊಂಡ ನಿರ್ಮಾಣವಾಗಿದೆ.
ಈ ರಸ್ತೆಯ ಮೂಲಕ ಧರ್ಮಸ್ಥಳ ಸಂಚರಿಸುವ ಬಹುತೇಕ ವಾಹನಗಳು ಸೇರಿದಂತೆ ದಿನನಿತ್ಯ ನೂರಾರು ವಾಹನಗಳು ಈ ಮೂಲಕವೇ ಸಂಚರಿಸುತ್ತಿವೆ.
ಈ ಮೋರಿ ಅವ್ಯವಸ್ಥೆ ಕುರಿತು ಉದಯವಾಣಿ ಪ್ರತಿಕೆ ಈ ಹಿಂದೆ ಸಚಿತ್ರ ವರದಿ ಪ್ರಕಟಿಸಿ ಇಲಾಖೆಯ ಗಮನ ಸೆಳೆದಿತ್ತು. ಬಳಿಕ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಮೋರಿಯ ಬಳಿ ನಿರ್ಮಾಣವಾದ ಬೃಹತ್ ಗುಂಡಿಗಳನ್ನು ಮುಚ್ಚಿ ಮೋರಿಯ ಎರಡು ಪಾರ್ಶ್ವದಲ್ಲಿ ತಡೆಗೋಡೆ ನಿರ್ಮಿಸಿತ್ತು. ಆದರೆ ಮೋರಿಯ ಬಳಿ ಗುಂಡಿಗೆ ಹಾಕಲಾದ ಜಲ್ಲಿ ಕಲ್ಲುಗಳು ಎದ್ದಿವೆ.
ರಾತ್ರಿ ಸಂಚರಿಸುವ ವಾಹನಗಳು ಮೋರಿ ಕುಸಿದು ಹೊಂಡವನ್ನು ಅರಿಯದೆ ಹಲವು ಅವಘಡ ಸಂಭವಿಸಿವೆ. ಇನ್ನಾದರೂ ಗುರ್ಗಲ್ ಗುಡ್ಡ ಬಳಿಯ ಕುಸಿದ ಮೋರಿ ದುರಸ್ತಿಪಡಿಸಿ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಎರಡು ವರ್ಷಗಳಿಂದ ನಿರಂತರ ಸಮಸ್ಯೆ
ಗುರ್ಗಲ್ ಗುಡ್ಡ ಬಳಿಯ ಮೋರಿಯು ಕುಸಿತದಿಂದ ಎರಡು ವರ್ಷಗಳಿಂದ ನಿರಂತರ ಸಮಸ್ಯೆ ಉಂಟಾಗಿದ್ದು, ವಾಹನ ಸವಾರರಿಗೆ ತೊಂದರೆಯುಂಟಾಗಿದೆ. ಈ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು.
- ಸತೀಶ್ ಪೂಜಾರಿ,
ರಿಕ್ಷಾ ಚಾಲಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…