ಇದು ಬರೀ ಶಾಲೆಯಲ್ಲ ; ಮಾದರಿ ಸರಕಾರಿ ಶಾಲೆ!

ಕಾರ್ಕಳ: 115ಕ್ಕೂ ಅಧಿಕ ಗಿಡಮೂಲಿಕೆ, ಹೂವಿನ ಸಸ್ಯರಾಶಿ ಸೃಷ್ಟಿ

Team Udayavani, Apr 2, 2021, 3:40 AM IST

ಇದು ಬರೀ ಶಾಲೆಯಲ್ಲ ; ಮಾದರಿ ಸರಕಾರಿ ಶಾಲೆ!

ಕಾರ್ಕಳ: ಸರಕಾರಿ ಶಾಲೆ ಎನ್ನುವ ಫ‌ಲಕ ನೋಡಿ ಆವರಣದೊಳಗೆ ದೃಷ್ಟಿ ಹಾಯಿಸಿದರೆ ಇದು ಶಾಲೆಯೋ ಅಥವಾ ಕೃಷಿ ಜಮೀನೋ, ಉದ್ಯಾನವೋ ಎಂಬ ಅನುಮಾನ ಮೂಡುತ್ತದೆ. ಹೂವು, ಔಷಧ ಗಿಡಗಳ ಜಗತ್ತು ಶಾಲೆಯನ್ನು ಪ್ರವೇಶಿಸುತ್ತಿದ್ದಂತೆ ಸ್ವಾಗತಿಸುತ್ತದೆ. ಶಾಲೆಯ ಆವರಣವೇ ಸಸ್ಯ  ತೋಟವಾದಂತೆ ಭಾಸವಾಗುತ್ತದೆ.

ನಲ್ಲೂರಿನಲ್ಲಿ  ಸ.ಹಿ.ಪ್ರಾ. ಶಾಲೆಯೊಂದಿದೆ. ಹಲವು ಚಟುವಟಿಕೆಗಳ ಮೂಲಕ ಅಕ್ಷರ  ಕ್ರಾಂತಿ  ಜತೆಗೆ  ಮಕ್ಕಳ ಚಟುವಟಿಕೆಗೆ ಪೂರಕ ವ್ಯವಸ್ಥೆಗಳು ಇಲ್ಲಿವೆ. ಮುಖ್ಯ ಶಿಕ್ಷಕ, ಸಹಶಿಕ್ಷಕರು, ಎಸ್‌ಡಿಎಂಸಿ, ಶಿಕ್ಷಣಾಭಿಮಾನಿಗಳ ಸಹಕಾರದಿಂದ ಶಾಲೆ ವಿವಿಧ ಚಟುವಟಿಕೆಗಳಿಂದ  ಗಮನ ಸೆಳೆಯುತ್ತಿದೆ.

ಇಲ್ಲಿದೆ 115 ಗಿಡಮೂಲಿಕೆಗಳು :

ಶಾಲಾವರಣದಲ್ಲಿ ಗಿಡಮೂಲಿಕೆಗಳ ಸಸಿಗಳ ಧನ್ವಂತರಿ, ಆಯುರ್ವೇದ ಆರೋಗ್ಯ ವನವಿದ್ದು,  115ಕ್ಕೂ  ಅಧಿಕ  ಸಸಿಗಳನ್ನು  ವನದಲ್ಲಿ ನೆಡಲಾಗಿದೆ. ಗಿಡಗಳಿಗೆ  ಹೆಸರನ್ನು ಬರೆಯ ಲಾಗಿದೆ. ಶಿಕ್ಷಕರು, ಮಕ್ಕಳು ಇದನ್ನು   ಆರೈಕೆ ಮಾಡುತ್ತಾರೆ.

ಶಾಲೆಯಲ್ಲಿವೆ  ಹತ್ತಾರು ವಿಶೇಷತೆಗಳು :

ಶಾಲಾ ಕೈತೋಟದಲ್ಲಿ ಹೂವು, ಬಸಳೆ ಇತ್ಯಾದಿ ತರಕಾರಿಗಳಿವೆ. ಗೋಡೆಗಳ ಮೇಲೆ ಪರಿಸರ ಸಂರಕ್ಷಣೆಯ ಜಾಗೃತಿ ವಾಣಿ, ತುಳುನಾಡ

ವೈಭವ, ಮರ-ಗಿಡಗಳಲ್ಲಿ ಮಹಾತ್ಮರು-ಕವಿಗಳ  ಹೆಸರು, ಸುಸಜ್ಜಿತ ಕಲಿಕಾ ಸಾಮಗ್ರಿ,  ನಲಿಕಲಿ, ಶಿಕ್ಷಣದ ರಥ ಪುಟಾಣಿ ದೇವರ ಮನಯಂಗಳದತ್ತ ವಿದ್ಯಾಗಮ ಶಿಕ್ಷಣ, ಗುಬ್ಬಚ್ಛಿ  ನ್ಪೋಕನ್‌, ನಿತ್ಯ ಸ್ಮರಣೆಗಳಿವೆ. ಬಹುಭಾಷಾ ದಿನಪತ್ರಿಕೆ  ಓದು, ಹಸುರು ಶಾಲೆ, ಉತ್ತಮ ಶಾಲೆ ಪ್ರಶಸ್ತಿ ಲಭಿಸಿದೆ.

ಹುಟ್ಟುಹಬ್ಬಕ್ಕೆ  ಸಿಹಿ ಬದಲಿಗೆ ಪುಸ್ತಕ :

ಓದ್ಕೊಳ್ಳಿ ಗ್ರಂಥಾಲಯವಿದೆ. 30ರಿಂದ 40 ಸಾವಿರ ಪುಸ್ತಕಗಳು ಇಲ್ಲಿವೆ. ಮಕ್ಕಳು, ಪೋಷಕರು, ಶಿಕ್ಷಣ ಅಭಿಮಾನಿಗಳು. ಹಳೇ ವಿದ್ಯಾರ್ಥಿಗಳು ಯಾರೇ ಇರಲಿ  ಹುಟ್ಟುಹಬ್ಬ ಸವಿನೆನಪಿಗೆ   ಸಿಹಿ ತಿಂಡಿ ಪಡೆಯುವ ಬದಲು ಗ್ರಂಥಾಲಯಕ್ಕೆ  ಪುಸ್ತಕಗಳನ್ನು  ಇಲ್ಲಿ  ಪಡೆಯಲಾಗುತ್ತದೆ.

ಮುಂದೆ   ವೃತ್ತಿ ಶಿಕ್ಷಣಕ್ಕೆ ಪ್ರೋತ್ಸಾಹ :

ಹೊಸ ಶಿಕ್ಷಣ ನೀತಿಯ  ಆಶಯದಂತೆ  ವೃತ್ತಿ ಶಿಕ್ಷಣ ಅಧಾರಿತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶ ಶಿಕ್ಷಕರಲ್ಲಿದೆ. ಟೈಲರಿಂಗ್‌, ಭರತನಾಟ್ಯ, ಸಂಗೀತ ಹೀಗೆ ಸ್ವ-ಉದ್ಯೋಗಕ್ಕೆ ಪೂರಕವಾದ   ಯೋಜನೆಗಳನ್ನು ಮುಂದೆ ಹಾಕಿಸಿಕೊಳ್ಳುವ ಚಿಂತನೆ ಶಾಲೆಯಲ್ಲಿದೆ.

“ಸೌಂಡ್‌ ಬಾಡಿ’ ಆಟದ  ಮೈದಾನ :

ಬೌದ್ಧಿಕ ದೃಢತೆಯಷ್ಟೇ  ಶಾರೀರಿಕ ಚಟುವಟಿಕೆಗೆ ಆದ್ಯತೆ ನೀಡುವ ಸಲುವಾಗಿ ಸೌಂಡ್‌ ಬಾಡಿ ಎನ್ನುವ ಆಟದ ಮೈದಾನವನ್ನು 7 ಲಕ್ಷ ರೂ. ವೆಚ್ಚದಲ್ಲಿ  ಇಲ್ಲಿ ಸಿದ್ಧಪಡಿಸಲಾಗಿದೆ.

ಇಲ್ಲಿದೆ ಪರಶುರಾಮ ಕುಟೀರ! :

ಪಠ್ಯದ ಕಲಿಕೆ ಜತೆಗೆ ಜೀವನ ಮೌಲ್ಯ ತಿಳಿಸುವ ಕಾರ್ಯವಾಗಬೇಕೆಂದು  ಹುಟ್ಟಿಕೊಂಡ  ಕುಟೀರ ಶಿಕ್ಷಣಕ್ಕೆ ಪೂರಕವಾಗಿ  ಗುರುಕುಲ ಮಾದರಿಯ ಪರಶುರಾಮ ಕುಟೀರ  ಶಾಲಾವರಣದಲ್ಲಿ  ನಿರ್ಮಿಸಲಾಗಿದೆ.

ಮಕ್ಕಳು, ನೆಮ್ಮದಿ, ಶಾಂತಿ, ತಾಳ್ಮೆ ಮೂಲಕ ಪಾಠ, ಪ್ರವಚನ ಆಲಿಸಿ ಬದುಕು ರೂಪಿಸಲು ನಾಲ್ಕು ಗೋಡೆಗಳಿಂದ ಹೊರಬಂದು ಕುಟೀರದೊಳಗೆ  ತರಗತಿ ನಡೆಸಲಾಗುತ್ತದೆ.

ಡಿಸಿ  ನಮ್ಮ ಶಾಲೆಗೂ ಬರುತ್ತಿದ್ದರೆ…! :

ಮಕ್ಕಳಿಗೆ ಶಾಲೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳು ಪ್ರಯೋಗಶಾಲೆಯಂತಿವೆ.   ಹೆಚ್ಚಿನ ಮಕ್ಕಳ  ಮನೆಯಲ್ಲಿ  ಕೈತೋಟ, ಕೃಷಿ ಭೂಮಿ ಇರುವುದರಿಂದ ಮನೆಯ ತೋಟದ ಕೆಲಸದಂತೆ ಶಾಲೆಯಲ್ಲಿಯೂ ಮಕ್ಕಳು ಎಲ್ಲ  ಕೆಲಸಗಳನ್ನು ಖುಷಿಯಾಗಿಯೇ ಮಾಡುತ್ತಿರುತ್ತಾರೆ. ಉಡುಪಿ ಜಿಲ್ಲೆಯ ಡಿಸಿಯವರು ಮನೆಯಲ್ಲಿ ಕೃಷಿ ಚಟುವಟಿಕೆಯನ್ನು  ಮಾಡುತ್ತಿರುವ  ದೃಶ್ಯವನ್ನು ಕೆಲ ಮಕ್ಕಳು ಮೊಬೈಲ್‌ನಲ್ಲಿ ವೀಕ್ಷಿಸಿದ್ದು,  ಡಿಸಿ  ನಮ್ಮ ಶಾಲೆಗೂ  ಒಮ್ಮೆ ಬರುತ್ತಿದ್ದರೇ … ಎಂದು ಹೇಳಿ ಮಕ್ಕಳು  ಅಚ್ಚರಿ ಮೂಡಿಸಿದರು.

ಮುಖ್ಯ ಶಿಕ್ಷಕರ ಕನಸಿನ ಕೂಸು ಆರೋಗ್ಯ ವನ :

ವೈದ್ಯ ಕ್ಷೇತ್ರವನ್ನೇ  ಕೋವಿಡ್‌ ಸೋಂಕು ಬುಡಮೇಲು ಮಾಡಿತ್ತು.  ಲಸಿಕೆಗಿಂತ ಮುಂಚಿತವಾಗಿ ಎಲ್ಲರೂ ಇದೇ ಆಯುರ್ವೇದ  ಔಷಧ ಪದ್ಧತಿಯನ್ನು ಮೊರೆ ಹೋಗಿದ್ದರು.  ಮುಂದಿನ ತಲೆಮಾರಿಗೆ  ಪರಿಚಯಿಸುವ ದೃಷ್ಟಿಯಿಂದ ಮುಖ್ಯ ಶಿಕ್ಷಕರ ಕನಸಿನ ಕೂಸಾಗಿ  ಧನ್ವಂತರಿ ಆಯುರ್ವೇದ ಆರೋಗ್ಯ ವನ ಮೂಡಿಬಂದಿದೆ.

ಶಾಲೆಯ ಎಲ್ಲ ಚಟುವಟಿಕೆಗೆ ಶಿಕ್ಷಣ  ಇಲಾಖೆ, ಶಾಸಕರು, ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು, ಮಕ್ಕಳು, ಪೋಷಕರು ದಾನಿಗಳು, ಶಿಕ್ಷಣ  ಪ್ರೇಮಿಗಳು ಸಹಕರಿಸುತ್ತ ಬಂದಿದ್ದು, ಎಲ್ಲರ ಸಹಕಾರದಿಂದ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯವಾಗಿದೆ. -ನಾಗೇಶ್‌, ಮುಖ್ಯ ಶಿಕ್ಷಕರು

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.