ನಂದಳಿಕೆ: ಡಾ| ಬಿ. ಜನಾರ್ದನ ಭಟ್ರಿಗೆ ಅಭಿನಂದನೆ
Team Udayavani, Mar 9, 2019, 12:35 AM IST
ಬೆಳ್ಮಣ್: ವಿದ್ಯಾರ್ಥಿಗಳಿಗೆ ಬದುಕುವ ಶಿಕ್ಷಣ ನೀಡುವವ ನಿಜವಾದ ಶಿಕ್ಷಕ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಕುದಿ ವಸಂತ ಶೆಟ್ಟಿ ಹೇಳಿದರು.
ಗುರುವಾರ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇಗುಲದ ಸಭಾಭವನದಲ್ಲಿ ನಂದಳಿಕೆ ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿಯ ನೇತೃತ್ವದಲ್ಲಿ ಸಾಹಿತಿ, ಬೆಳ್ಮಣ್ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ| ಬಿ. ಜನಾರ್ದನ ಭಟ್ರವ ಆಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಿತ್ರ ಮಂಡಳಿಯ ಅಧ್ಯಕ್ಷ ನಂದಳಿಕೆ ಸುಹಾಸ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಅಭಿನಂದನೆ ಸ್ವೀಕರಿಸಿದ ಡಾ| ಬಿ. ಜನಾರ್ದನ ಭಟ್ ಮಾತನಾಡಿ, ಪ್ರಶಸ್ತಿ ಸಮ್ಮಾನಗಳು ಅರ್ಜಿ ಹಾಕಿ ಬರಬಾರದು ಬದಲಾಗಿ ಅನಿರೀಕ್ಷಿತವಾಗಿ ಸಾಧನೆಯನ್ನು ಗುರುತಿಸಿ ಬರಬೇಕು, ಆಗ ಆ ಸಮ್ಮಾನಗಳಿಗೆ ಗೌರವ ಮತ್ತು ಬೆಲೆ ಇರುತ್ತದೆ ಎಂದರು.
ನಿಟ್ಟೆ ಕಾಲೇಜಿನ ಪ್ರಾಚಾರ್ಯ ನಿರಂಜನ ಚಿಪೂÉಣ್ಕರ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ ಕಲೂರ, ನಂದಳಿಕೆ ಶ್ರೀ ಲಕ್ಷ್ಮೀ ಜನಾರ್ದನ ದೇಗುಲದ ಆಡಳಿತ ಮೊಕ್ತೇಸರ ಎನ್.ತುಕಾರಾಮ ಶೆಟ್ಟಿ, ಬೆಳ್ಮಣ್ ಸ.ಪ.ಪೂ.ಕಾಲೇಜಿನ ನಿವೃತ್ತ ಪ್ರಾಚಾರ್ಯ ಜಯಂತ್ ರಾವ್, ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿಯ ಗೌರವ ಸಲಹೆಗಾರ ನಂದಳಿಕೆ ಬಾಲಚಂದ್ರ ರಾವ್, ಕಾರ್ಯದರ್ಶಿ ರವಿರಾಜ್ ಭಟ್, ಉಪಾಧ್ಯಕ್ಷ ವಿನಾಯಕ ಕಾಮತ್, ಸತೀಶ್ ಶೆಟ್ಟಿ, ಸತೀಶ್ ಮಾಡ, ಅರುಣ್ ಕುಮಾರ್ ನಂದಳಿಕೆ, ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು.ವಿ.ಕೆ. ರಾವ್ ಸ್ವಾಗತಿಸಿ, ಸುಧಾಕರ ರಾವ್ ವಂದಿಸಿದರು. ತುಕಾರಾಮ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಶರತ್ ಶೆಟ್ಟಿ ನಿರೂಪಿಸಿದರು. ಡಾ| ಜನಾರ್ದನ ಭಟ್ ದಂಪತಿ ಯನ್ನು ಸಮ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ