ಗಾಂಧಿ ಜಯಂತಿಯಂದು ಗಾಂಧಿ ಅನುಯಾಯಿ ಸ್ವಾಮೀಜಿ ಪುಣ್ಯತಿಥಿ


Team Udayavani, Oct 4, 2019, 5:42 AM IST

0210UDKS5

ಕಣ್ವತೀರ್ಥದಲ್ಲಿ ಶ್ರೀ ವಿಶ್ವಮಾನ್ಯತೀರ್ಥ ಆರಾಧನೆ ಯಂಗವಾಗಿ ಅವರ ವೃಂದಾವನಕ್ಕೆ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು.

ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಗುರುಗಳಾದ ಶ್ರೀವಿಶ್ವಮಾನ್ಯತೀರ್ಥ ಶ್ರೀಪಾದರ ಆರಾಧನೋತ್ಸವ ಬುಧವಾರ ಅವರ ವೃಂದಾವನವಿರುವ ತಲಪಾಡಿ ಸಮೀಪದ ಕಣ್ವತೀರ್ಥ ಮಠದ ಆವರಣದಲ್ಲಿ ಜರುಗಿತು.

ಈ ಬಾರಿಯ ವಿಶೇಷವೆಂದರೆ ಮಹಾತ್ಮಾ ಗಾಂಧಿಯವರಿಂದ ಪ್ರೇರಣೆ ಪಡೆದಿದ್ದ ಶ್ರೀ ವಿಶ್ವಮಾನ್ಯತೀರ್ಥರ ಪುಣ್ಯತಿಥಿ ಗಾಂಧಿ ಜಯಂತಿಯಂದು ಘಟಿಸಿದ್ದು.

ಶ್ರೀ ವಿಶ್ವಮಾನ್ಯತೀರ್ಥರು ಬಲುದೊಡ್ಡ ಗಾಂಧೀವಾದಿಗಳಾಗಿದ್ದರು. ಅವರ ಉಡುಗೆಗಳೂ ಖಾದಿಯಾಗಿದ್ದವು. ಗಾಂಧೀಜಿಯವರು ವಿದೇಶಿ ಬಟ್ಟೆಗಳನ್ನು ಬಹಿಷ್ಕರಿಸುವ ಹೋರಾಟದ ವೇಳೆ ವಿಶ್ವಮಾನ್ಯರು ಬೆಂಬಲ ನೀಡಿ ಉಡುಪಿಯಲ್ಲಿ ವಿದೇಶೀ ಬಟ್ಟೆಗಳನ್ನು ಸುಟ್ಟಿದ್ದರು.

ತಮ್ಮ ಎರಡನೆಯ ಪರ್ಯಾಯದಲ್ಲಿ 1936-37ರ ಅವಧಿಯಲ್ಲಿ ಪೇಜಾವರ ಮಠದಲ್ಲಿ ತಮ್ಮ ಗುರು ಶ್ರೀ ವಿಶ್ವಜ್ಞತೀರ್ಥರ ಸ್ಮರಣಾರ್ಥ ಸ್ಥಾಪಿಸಿದ ವಾಚನಾಲಯವನ್ನು ಆಗಿನ ಕಾಂಗ್ರೆಸ್‌ ಅಧ್ಯಕ್ಷ, ಮುಂದೆ ಪ್ರಥಮ ರಾಷ್ಟ್ರಪತಿಯಾದ ಬಾಬುರಾಜೇಂದ್ರಪ್ರಸಾದರಿಂದ ಉದ್ಘಾಟನೆ ನೆರವೇರಿಸಿದ್ದರು.

1931ರಲ್ಲಿ ಜನಿಸಿದ ಶ್ರೀವಿಶ್ವೇಶತೀರ್ಥರಿಗೆ 1938ರ ಡಿಸೆಂಬರ್‌ 3ರಂದು ಹೊಸಪೇಟೆ ಸಮೀಪದ ಹಂಪಿಯ ಚಕ್ರತೀರ್ಥದಲ್ಲಿರುವ ವ್ಯಾಸರಾಜಪ್ರತಿಷ್ಠಾಪಿತ ಯಂತ್ರೋದ್ಧಾರ ಪ್ರಾಣದೇವರ ಸನ್ನಿಧಿಯಲ್ಲಿ ಶ್ರೀವಿಶ್ವಮಾನ್ಯರು ಸನ್ಯಾಸಾಶ್ರಮವನ್ನು ನೀಡಿದ್ದರು. ಒಂದು ದಿನ ಬಿಟ್ಟು ಏಕಾದಶಿ ಮರುದಿನ ದ್ವಾದಶಿ ಪೂಜೆ ಮುಗಿಸಿ ಹಂಪಿಯ ಪಾಳುಬಿದ್ದ ಸ್ಮಾರಕಗಳನ್ನು ಗುರುಗಳು ಎಂಟು ವರ್ಷದ ಶಿಷ್ಯನಿಗೆ ತೋರಿಸಿದ್ದರು. ವಿಶ್ವಮಾನ್ಯತೀರ್ಥರು ಗಾಂಧೀವಾದಿಗಳಾದ ಕಾರಣ ಗಾಂಧೀಜಿಯವರಿಗೆ ಪತ್ರ ಬರೆದು ತಾವು ಚಳವಳಿಯಲ್ಲಿ ಪಾಲ್ಗೊಳ್ಳುವ ಬಯಕೆ ವ್ಯಕ್ತಪಡಿಸಿ ಮಠದ ಜವಾಬ್ದಾರಿಯನ್ನು ವಿಶ್ವೇಶತೀರ್ಥರಿಗೆ ಆಶ್ರಮವಾದ ತತ್‌ಕ್ಷಣ ನೀಡಿದ್ದರು.

“ಉದಯವಾಣಿ’ ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ಸಂಪರ್ಕಿಸಿದಾಗ “ಗಾಂಧೀಜಿಯವರಿಗೆ ಪತ್ರ ಬರೆದು ಅವರಿಂದ ಒಪ್ಪಿಗೆ ಬಂದ ಬಳಿಕವೇ ಗುರುಗಳು ಮಠದ ಜವಾಬ್ದಾರಿಯನ್ನು ನಮಗೆ ನೀಡಿ ಸಾಬರಮತಿ ಆಶ್ರಮಕ್ಕೆ ಹೋಗಿದ್ದರು. ಅವರಿಗೆ ಗಾಂಧೀಜಿಯವರ ಜತೆ ನಿಕಟ ಸಂಪರ್ಕವಿತ್ತು.

ಅಲ್ಲಿಯೇ ಸಮೀಪದ ಒಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂದು ಅವರಿಗೆ ನಿಕಟ ಸಂಪರ್ಕವಿದ್ದ, ಧಾರವಾಡದ ಸ್ವಾತಂತ್ರ್ಯ ಹೋರಾಟಗಾರ ಬುರ್ಲಿ ಬಿಂದು ಮಾಧವ ರಾಯರು ನಮಗೆ ತಿಳಿಸಿದ್ದರು. ಈಗ 150ನೆಯ ಗಾಂಧೀಜಿ ಜನ್ಮಜಯಂತಿ ದಿನವೇ ಗುರುಗಳ ಆರಾಧನೆ ಬಂದದ್ದು ವಿಶೇಷ.

ಈ ಹಿಂದೆ ಹೀಗೆ ಗಾಂಧಿ ಜಯಂತಿಯಂದು ಆರಾಧನೋತ್ಸವ ನಡೆದದ್ದು ಜ್ಞಾಪಕಕ್ಕೆ ಬರುತ್ತಿಲ್ಲ’ ಎಂದು ತಿಳಿಸಿದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.