ಪಡುಬಿದ್ರಿ ‘ಢಕ್ಕೆಬಲಿ’ಗೆ ವೈಭವದ ಹೊರೆಕಾಣಿಕೆ ಅರ್ಪಣೆ


Team Udayavani, Jan 19, 2023, 6:46 PM IST

ಪಡುಬಿದ್ರಿ `ಢಕ್ಕೆಬಲಿ’ಗೆ ವೈಭವದ ಹೊರೆಕಾಣಿಕೆ ಅರ್ಪಣೆ

ಪಡುಬಿದ್ರಿ : ಇತಿಹಾಸ ಪ್ರಸಿದ್ಧ ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ನಡೆಯುವ ದ್ವೈವಾರ್ಷಿಕ ನಡಾವಳಿ `ಢಕ್ಕೆಬಲಿ’ಗೆ ವಿದ್ಯುಕ್ತ ಚಾಲನೆಯು ಇಂದು ದೊರೆತಿದೆ. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರಿಂದ ಇಂದಿನ ಮಂಡಲ ಹಾಕುವ ಢಕ್ಕೆಬಲಿಗಾಗಿ ವೈಭವದ ಹೊರಕಾಣಿಕೆಯು ಶ್ರೀ ಸನ್ನಿಧಿಯಲ್ಲಿ ಅರ್ಪಿತವಾಗಿದೆ.

ಹೊರೆ ಕಾಣಿಕೆ ಮೆರವಣಿಗೆಯು ಪಡುಬಿದ್ರಿಯ ಮುಖ್ಯ ಪೇಟೆಯಲ್ಲಿ ಸಾಗಿ ಶ್ರೀ ಖಡ್ಗೇಶ್ವರೀ ದೇವಿಯ ಸನ್ನಿಧಿಗೆ ತಲುಪಿದ್ದು ಸ್ಥಾನಿಗಳ, ಮಾನಿಗಳ, ಬ್ರಹ್ಮಸ್ಥಾನದ ಪಾತ್ರಿ ಮತ್ತು ಅರ್ಚಕ ವೃಂದದ ಸಮ್ಮುಖದಲ್ಲಿ ಢಕ್ಕೆಬಲಿ ಸೇವೆಗಳ ಸಾಂಗತಾ ಸಿದ್ಧಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ಬ್ರಹ್ಮಸ್ಥಾನದಲ್ಲಿ ಪುಷ್ಪಾಲಂಕಾರದ ಕಾರ್ಯಗಳು ಸಾಂಗವಾಗಿ ಆರಂಭಗೊಂಡವು.

ಈ ಢಕ್ಕೆಬಲಿ ಸೇವೆಗಳು ಇಂದಿನಿಂದ ಮಾ. ೧೧ರವರೆಗೆ ನಿರ್ದಿಷ್ಟ ದಿನಗಳಲ್ಲಿ ಮುಂದುವರಿಯಲಿದ್ದು ೩೭ ಸೇವೆಗಳು ಶ್ರೀ ಬ್ರಹ್ಮಸ್ಥಾನದಲ್ಲಿ ಸಂಪನ್ನಗೊಳ್ಳಳಿವೆ.

ಶ್ರೀ ದೇವಸ್ಥಾನದಲ್ಲಿ ಸರದಿ ಅರ್ಚಕ ವೈ. ಗುರುರಾಜ ಭಟ್ ಪ್ರಾರ್ಥನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು ಉಪಸ್ಥಿತರಿದ್ದರು. ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ಅರ್ಚಕ ವರ್ಗದ ಕೇಶವ ಆಚಾರ್ಯ, ರಘುಪತಿ ಆಚಾರ್ಯ, ಗುರುರಾಜ ಆಚಾರ್ಯ ನಂದಕುಮಾರ್ ಆಚಾರ್ಯ, ಪಾತ್ರಿಗಳಾದ ಸುರೇಶ್ ರಾವ್, ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಪರ ಆಡಳಿತ ನಿರ್ವಹಣೆಯ ಶ್ರೀ ವನದುರ್ಗಾ ಟ್ರಸ್ಟ್ ಪರ ಒಂದನೇ ಗುರಿಕಾರ ಹಾಗೂ ಅಧ್ಯಕ್ಷರಾಗಿರುವ ಕೊರ್ನಾಯ ಪದ್ಮನಾಭ ರಾವ್, ಪ್ರಧಾನ ಕಾರ್ಯದರ್ಶಿ ವೈ. ಎನ್. ರಾಮಚಂದ್ರ ರಾವ್, ಕೋಶಾಧಿಕಾರಿ ವೈ. ಸುರೇಶ್ ರಾವ್, ಗುರಿಕಾರರಾದ ಬಾಲಪ್ಪ ನಟರಾಜ ಪಿ. ಎಸ್., ಮುರುಡಿ ಜಗದೀಶ ರಾವ್, ಟ್ರಸ್ಟಿಗಳಾದ ಗುಡ್ಡೆ ವಿಠಲ ರಾವ್, ಪಿ. ಶ್ರೀನಿವಾಸ ರಾವ್, ಪಿ. ಎಸ್. ರಾಘವೇಂದ್ರ ರಾವ್, ರಾಘವೇಂದ್ರ ಬೈಲ ಹಾಗೂ ಊರ ಹತ್ತು ಸಮಸ್ತರು, ಸುಮಂಗಲಿಯರು ಈ ಮೆರವಣಿಗೆಯಲ್ಲಿ ಭಾಗವಹಿಸಿದರು.

ಸನ್ನಿಧಾನದ ಪಂಚವಾದ್ಯ, ದಿಡುಂಬು ಸಹಿತ ಚೆಂಡೆ ಮುಂತಾದ ಜನಪದೀಯ, ಸಾಂಪ್ರದಾಯಿಕ ವಾದ್ಯಗಳೊಂದಿಗೆ ಹೊರೆಕಾಣಿಕೆಯ ಮೆರವಣಿಗೆಯು ಬ್ರಹ್ಮಸ್ಥಾನದತ್ತ ಸಾಗಿ ಬಂತು.

ಟಾಪ್ ನ್ಯೂಸ್

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಸಿಗದಂತೆ ಹುನ್ನಾರ: ಕಿಮ್ಮನೆ ಆರೋಪ

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಸಿಗದಂತೆ ಹುನ್ನಾರ: ಕಿಮ್ಮನೆ ಆರೋಪ

ರಬಕವಿ-ಬನಹಟ್ಟಿ: ಸೋಜಿಗ ಮೂಡಿಸುವ ಗೀಜುಗ; ತನ್ನ ಮನೆಗೆ ತಾನೇ ಎಂಜನಿಯರ್‌

ರಬಕವಿ-ಬನಹಟ್ಟಿ: ಸೋಜಿಗ ಮೂಡಿಸುವ ಗೀಜುಗ; ತನ್ನ ಮನೆಗೆ ತಾನೇ ಎಂಜನಿಯರ್‌

ಮಂಗಳೂರು: ಜೂನ್‌ 2ರಿಂದ ಎರಡು ದಿನ ನೀರಿಲ್ಲ…

ಮಂಗಳೂರು: ಜೂನ್‌ 2ರಿಂದ ಎರಡು ದಿನ ನೀರಿಲ್ಲ…

wrestlers

Wrestlers: ಪದಕಗಳನ್ನು ಗಂಗಾ ನದಿಗೆ ಎಸೆಯುತ್ತೇವೆ- ಕೇಂದ್ರಕ್ಕೆ ಕುಸ್ತಿಪಟುಗಳ ಎಚ್ಚರಿಕೆ

web-lips

Beauty Tips: ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು….

ಚಿಕ್ಕಮಗಳೂರು: ನಾಗರಹಾವು ಕಚ್ಚಿ ಉರಗತಜ್ಞ ಸ್ನೇಕ್ ನರೇಶ್ ಸಾವು!

ಚಿಕ್ಕಮಗಳೂರು: ನಾಗರಹಾವು ಕಚ್ಚಿ ಉರಗತಜ್ಞ ಸ್ನೇಕ್ ನರೇಶ್ ಸಾವು!

ನಟಿ Akanksha Dubey Case: ನಟಿಯ ಒಳ ಉಡುಪಿನಲ್ಲಿ ವೀರ್ಯ ಪತ್ತೆ; ತನಿಖೆ ಚುರುಕು

ನಟಿ Akanksha Dubey Case: ನಟಿಯ ಒಳ ಉಡುಪಿನಲ್ಲಿ ವೀರ್ಯ ಪತ್ತೆ; ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-gokarna-news

Kaup: ಅಪರಿಚಿತ ಶವ ಪತ್ತೆ : ಗುರುತು ಪತ್ತೆಗಾಗಿ ಮನವಿ

4-kaup-rain

Kaup: ಮಳೆ ನೀರು ನಿಂತು ಹೆದ್ದಾರಿ ಸಂಚಾರಕ್ಕೆ ಅಡಚಣೆ

3-udupi-rain

ಉಡುಪಿಯಲ್ಲಿ ತಂಪೆರೆದ ಮಳೆರಾಯ

ಜಿಲ್ಲಾಸ್ಪತ್ರೆಯ ಡಯಾಲಿಸಿಸ್‌ ಕೇಂದ್ರ: ಅವ್ಯವಸ್ಥೆಯ ವಿರುದ್ಧ ರೋಗಿಗಳಿಂದ ಪ್ರತಿಭಟನೆ

ಜಿಲ್ಲಾಸ್ಪತ್ರೆಯ ಡಯಾಲಿಸಿಸ್‌ ಕೇಂದ್ರ: ಅವ್ಯವಸ್ಥೆಯ ವಿರುದ್ಧ ರೋಗಿಗಳಿಂದ ಪ್ರತಿಭಟನೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ: 47,390 ಹೆಕ್ಟೇರ್‌ ಭತ್ತ ಉತ್ಪಾದನೆ ಗುರಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ: 47,390 ಹೆಕ್ಟೇರ್‌ ಭತ್ತ ಉತ್ಪಾದನೆ ಗುರಿ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಸಿಗದಂತೆ ಹುನ್ನಾರ: ಕಿಮ್ಮನೆ ಆರೋಪ

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಸಿಗದಂತೆ ಹುನ್ನಾರ: ಕಿಮ್ಮನೆ ಆರೋಪ

ಕಾಣದ ಕೈಗಳು ನನಗೆ ಟಿಕೆಟ್ ತಪ್ಪಿಸಿದ್ದವು: ಮಾಜಿ ಶಾಸಕ ಎಸ್.ರಾಮಪ್ಪ

ಕಾಣದ ಕೈಗಳು ನನಗೆ ಟಿಕೆಟ್ ತಪ್ಪಿಸಿದ್ದವು: ಮಾಜಿ ಶಾಸಕ ಎಸ್.ರಾಮಪ್ಪ

ಬೆಳಗಾವಿ: ಸ್ಮಾರ್ಟ್‌ ಸಿಟಿ ಸುಡಗಾಡದಾಗ ಹೆಣ ಸುಡಾಕೂ ಗತಿ ಇಲ್ಲ!

ಬೆಳಗಾವಿ: ಸ್ಮಾರ್ಟ್‌ ಸಿಟಿ ಸುಡಗಾಡದಾಗ ಹೆಣ ಸುಡಾಕೂ ಗತಿ ಇಲ್ಲ!

ರಬಕವಿ-ಬನಹಟ್ಟಿ: ಸೋಜಿಗ ಮೂಡಿಸುವ ಗೀಜುಗ; ತನ್ನ ಮನೆಗೆ ತಾನೇ ಎಂಜನಿಯರ್‌

ರಬಕವಿ-ಬನಹಟ್ಟಿ: ಸೋಜಿಗ ಮೂಡಿಸುವ ಗೀಜುಗ; ತನ್ನ ಮನೆಗೆ ತಾನೇ ಎಂಜನಿಯರ್‌

eshwar khandre

ಸಿ.ಟಿ.ರವಿ‌ ದುರಹಂಕಾರಕ್ಕೆ‌ ಜನ ತಕ್ಕ ಪಾಠ ಕಲಿಸಿದ್ದಾರೆ: Minister Eshwar Khandre