ಪಾಂಗಾಳ ಶರತ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಭೂಗತ ಲೋಕದ ನಂಟು: ನಾಲ್ವರ ಬಂಧನ

ಪ್ರಮುಖ ಆರೋಪಿಗೆ ಶೋಧ

Team Udayavani, Feb 14, 2023, 9:24 PM IST

ಪಾಂಗಾಳ ಶರತ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಭೂಗತ ಲೋಕದ ನಂಟು: ನಾಲ್ವರ ಬಂಧನ

ಉಡುಪಿ: ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಪಾಂಗಾಳ ಶರತ್‌ ಶೆಟ್ಟಿ ಕೊಲೆ ಪ್ರಕರಣದ ಹಿಂದೆ ಭೂಗತ ಪಾತಕಿಗಳ ನಂಟು ಇದ್ದು, ಈಗಾಗಲೇ ನಾಲ್ವರು ಆರೋಪಿಗಳಾದ ಸುರತ್ಕಲ್‌ನ ಕುಳಾಯಿ ನಿವಾಸಿಗಳಾದ ದಿವೇಶ್‌ ಶೆಟ್ಟಿ(20), ಲಿಖೀತ್‌ ಕುಲಾಲ್‌(21), ಮಂಗಳೂರು ನಿವಾಸಿ ಆಕಾಶ್‌(25), ಪಣಂಬೂರು ನಿವಾಸಿ ಪ್ರಸನ್ನ ಶೆಟ್ಟಿಯನ್ನು(40) ಬಂಧಿಸಲಾಗಿದೆ.

ಪ್ರಮುಖ ಆರೋಪಿ ಯೋಗೀಶ್‌ ಆಚಾರ್ಯ ಸಹಿತ ಕೆಲವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚೀಂದ್ರ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

ಭೂಗತ ನಂಟು
ಭೂಗತ ಪಾತಕಿ ಕಲಿ ಯೋಗೀಶ್‌ ಆರೋಪಿ ದಿವೇಶ್‌ ಶೆಟ್ಟಿಗೆ ಜನವರಿ ಮೊದಲ ವಾರದಲ್ಲಿ ಕರೆ ಮಾಡಿ ಆಕಾಶ ಕರ್ಕೇರ ಮತ್ತು ಮುಖೇಶ್‌ ಎಲ್ಲವನ್ನೂ ಹೇಳಿದ್ದಾರೆ. ಒಬ್ಬನನ್ನು ಕೊಲೆ ಮಾಡಲಿಕ್ಕಿದ್ದು, ಕಾರ್ಯ ಮುಗಿಸಿದರೆ ತುಂಬಾ ಹಣ ನೀಡುವುದಾಗಿ ತಿಳಿಸಿ ಮುಂದಿನದೆಲ್ಲವನ್ನೂ ತಾನು ನೋಡಿಕೊಳ್ಳುವುದಾಗಿ ಹೇಳುತ್ತಾನೆ. ಇದಕ್ಕೆ ಒಪ್ಪಿದ ದಿವೇಶ್‌ ಶೆಟ್ಟಿ ತನ್ನ ಸ್ನೇಹಿತ ಲಿಖೀತ್‌ ಕುಲಾಲ್‌ ಹಾಗೂ ನಾಗರಾಜನ ಜತೆ ಮಾತನಾಡಿ ಕಲಿ ಯೋಗೀಶ ಹೇಳಿದ ವಿಚಾರವನ್ನು ಹೇಳುತ್ತಾನೆ. ಅನಂತರ ಒಂದು ದಿನ ಕಲಿಯೋಗೀಶನು ಆರೋಪಿ ದಿವೇಶ್‌ಗೆ ಫೋನ್‌ಕರೆ ಮಾಡಿ ಕಾಪುವಿಗೆ ಹೋಗುವಂತೆ ತಿಳಿಸಿ ಅಲ್ಲಿ ಯೋಗೀಶ್‌ ಆಚಾರ್ಯ ಎಂಬಾತನನ್ನು ಭೇಟಿ ಮಾಡಿ ಮಾಡುವಂತೆ ತಿಳಿಸುತ್ತಾನೆ. ಅದರಂತೆ ಆರೋಪಿ ಯೋಗೀಶ್‌ ಆಚಾರ್ಯ ಮೃತ ಶರತ್‌ ಶೆಟ್ಟಿಯ ಮನೆ, ಅವನು ಸಂಚರಿಸುವ ಸ್ಥಳಗಳನ್ನು ತೋರಿಸಿಕೊಟ್ಟಿದ್ದಾನೆ. ಅನಂತರ ಯೋಗೀಶ್‌ ಆಚಾರ್ಯ ಸುರತ್ಕಲ್‌ಗೆ ಹೋಗಿ ದಿವೇಶನಿಗೆ ಹಣ ನೀಡಿ ಕೊಲೆ ಮಾಡಲು ಸಿದ್ಧತೆ ಮಾಡುವಂತೆ ತಿಳಿಸುತ್ತಾನೆ.

ವಿಫ‌ಲ ಯತ್ನ
ದಿವೇಶ್‌, ಲಿಖೀತ್‌ ಮತ್ತು ನಾಗರಾಜ ಅವರು ಆಕಾಶ್‌ ಕರ್ಕೇರನಿಂದ ಪಡೆದ ಮಾರಕಾಯುಧಗಳನ್ನು ಹಾಗೂ ಮಂಕಿ ಕ್ಯಾಪ್‌ಗ್ಳನ್ನು ಸ್ಕೂಟರ್‌ನ ಢಿಕ್ಕಿಯಲ್ಲಿ ಇರಿಸಿಕೊಂಡು ಫೆ.3ರಂದು ಕಾಪುವಿಗೆ ಬಂದಿದ್ದು, ಯೋಗೀಶ್‌ ಆಚಾರ್ಯನನ್ನು ಭೇಟಿ ಮಾಡಿದ್ದರು. ಆದರೆ ಆ ದಿನ ಶರತ್‌ ಶೆಟ್ಟಿ ಸಿಗದಿರುವುದರಿಂದ ವಾಪಸು ಸುರತ್ಕಲ್‌ಗೆ ಹೋಗಿದ್ದಾರೆ.

ನೇಮದಂದು ಸಂಚು
ಫೆ.5ರಂದು ಪಾಂಗಾಳ ಪಡ್ಪು ಬಬ್ಬುಸ್ವಾಮಿ ದೈವಸ್ಥಾನದ ನೇಮ ನಡೆಯುವ ಬಗ್ಗೆ ಯೋಗೀಶ್‌ ಆಚಾರ್ಯ ಆರೋಪಿಗಳಿಗೆ ತಿಳಿಸಿದ್ದ. ಅದರಂತೆ ಅಂದು ಆಗಮಿಸಿದ ದಿವೇಶ್‌, ಲಿಖೀತ್‌ ಮತ್ತು ನಾಗರಾಜ ಕಾಪುವಿಗೆ ಬಂದು ಪ್ರಸನ್ನ ಶೆಟ್ಟಿಯ ಕಾರಿನಲ್ಲಿ ಮೊದಲೇ ಬಂದಿರುವ ಯೋಗೀಶ್‌ ಆಚಾರ್ಯನನ್ನು ಭೇಟಿ ಮಾಡಿದ್ದು, ನಾಲ್ವರು ಸಂಜೆ ವೇಳೆ ಪಾಂಗಾಳ ಗ್ರಾಮದ ವಿಶ್ವಕರ್ಮ ವುಡ್‌ ಕಾರ್ವಿಂಗ್‌ ಅಂಗಡಿಯ ಎದುರು ಕಾದು ನಿಂತಿದ್ದು, ಸ್ವಲ್ಲ ಹೊತ್ತಿನಲ್ಲಿಯೇ ನೇಮ ನಡೆಯುವ ಸ್ಥಳದ ಕಡೆಯಿಂದ ಬರುತ್ತಿದ್ದ ಶರತ್‌ ಶೆಟ್ಟಿಯನ್ನು ಯೋಗೀಶ್‌ ಆಚಾರ್ಯ ಹತ್ತಿರ ಕರೆದು ಜಗಳ ಮಾಡಲು ಆರಂಭಿಸಿದ್ದಾನೆ. ಅದೇ ಸಮಯದಲ್ಲಿ ಕಾದು ನಿಂತಿದ್ದ ದಿವೇಶ್‌, ಲಿಖೀತ್‌, ನಾಗರಾಜ ಹಾಗೂ ಯೋಗೀಶ್‌ ಆಚಾರ್ಯನ ಒಟ್ಟು 4 ಜನ ಸೇರಿಕೊಂಡು ಶರತ್‌ ಶೆಟ್ಟಿಯನ್ನು ಮಾರಕಾಯುಧಗಳಿಂದ ಕಡಿದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದರು.

ಸ್ನೇಹಿತರಿಂದಲೇ ಸಂಚು
ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆದ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಯೋಗೀಶ್‌ ಆಚಾರ್ಯನಿಗೆ ಅವಮಾನವಾಗಿದ್ದು, ಅದಕ್ಕೆ ಶರತ್‌ ಶೆಟ್ಟಿಯೇ ಕಾರಣವಾಗಿದ್ದು, ಆತನನ್ನು ಕೊಲೆ ಮಾಡಲು ನಿರ್ಧರಿಸುತ್ತಾನೆ. ಅದಕ್ಕೆ ತನ್ನ ಹಳೆಯ ಕಲಿ ಯೋಗೀಶನ ಮೂಲಕ ಆಕಾಶ ಕರ್ಕೇರ ಎಂಬಾತನ ಸಹಾಯ ಪಡೆದುಕೊಂಡು ಕೊಲೆ ಮಾಡಿದ್ದಾನೆ ಎಂಬುವುದು ತಿಳಿದುಬಂದಿದೆ ಎಂದರು.

ಸುಳಿವು ನೀಡಿದ ಸ್ಕೂಟಿ!
ಘಟನಾ ಸ್ಥಳದಲ್ಲಿದ್ದ ಹತ್ಯೆಗೆ ಬಳಸಿದ್ದೆನ್ನಲಾಗಿರುವ ಚೂರಿ, ಶರತ್‌ಗೆ ಸೇರಿದ ಮೊಬೈಲ್‌, ನಂಬರ್‌ ಪ್ಲೇಟ್‌ ಇಲ್ಲದ ಸ್ಕೂಟಿ ಸಹಿತ ಕೆಲವು ಸೊತ್ತುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಸ್ಕೂಟಿಯ ಮಾಹಿತಿ ಮೂಲಕವೇ ಆರೋಪಿಗಳ ಜಾಡು ಹಿಡಿಯಲು ಸಾಧ್ಯವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

5 ವಿಶೇಷ ತಂಡದ ಕಾರ್ಯಾಚರಣೆ
ಪ್ರಕರಣ ನಡೆದ ಘಟನ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಪ್ರಕರಣದ ತೀವ್ರತೆಯನ್ನು ಅರಿತು ಆರೋಪಿಗಳ ಪತ್ತೆಗೆ ಕಾರ್ಕಳ ಉಪ ವಿಭಾಗದ ಡಿವೈಎಸ್‌ಪಿ ಮತ್ತು ಕಾಪು ವೃತ್ತ ನಿರೀಕ್ಷಕರನ್ನೊಳಗೊಂಡ 5 ವಿಶೇಷ ತಂಡವನ್ನು ರಚಿಸಿದ್ದರು. ಮಹಾರಾಷ್ಟ್ರದ ಪುಣೆ, ಮುಂಬಯಿ, ಕರ್ನಾಟಕದ ಬೆಳಗಾವಿ, ಯಾದಗಿರಿ, ಮಹಾಲಿಂಗಪುರ, ಮುಧೋಳ, ವಿಜಯಪುರ, ಗದಗ, ಮಂಗಳೂರು ಮತ್ತು ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆರೋಪಿಗಳಿಗೆ ಶೋಧ ಕಾರ್ಯ ನಡೆಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಮಂಗಳೂರು ನಗರದ ಉಳ್ಳಾಲದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಇದನ್ನೂ ಓದಿ: ಹುಲಿ ದಾಳಿಗೆ ಸಿಲುಕಿ ಮೃತಪಟ್ಟ ಕೊಳವಿಗೆಯ ರಾಜು, ಚೇತನ್ ಅಂತ್ಯಸಂಸ್ಕಾರ

ಟಾಪ್ ನ್ಯೂಸ್

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.