ವಂದೇ ಭಾರತ್ ಮಿಶನ್: ಜು.12-26: ವಿದೇಶಕ್ಕೆ ಹೋಗಲು ಅನುಮತಿ
Team Udayavani, Jul 11, 2020, 6:45 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕುಂದಾಪುರ/ಮಂಗಳೂರು: ವಂದೇ ಭಾರತ್ ಮಿಶನ್ ಯೋಜನೆಯಡಿ ಅನಿವಾಸಿ ಭಾರತೀಯರಿಗೆ ಜು.12 ರಿಂದ ಜು.26ರ ಅವಧಿಯಲ್ಲಿ ವಿದೇಶಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ.
ಮರಳಿ ಉದ್ಯೋಗ, ಉದ್ಯಮ ಕ್ಷೇತ್ರದ ದೇಶಕ್ಕೆ ಹೋಗಲು ಅನುವು ಮಾಡಿಕೊಡುವಂತೆ ಅನಿವಾಸಿ ಭಾರತೀಯರು ಮನವಿ ಮಾಡಿದ್ದರು. ಈ ಸಂಬಂಧ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ವಿಮಾನಯಾನ ಸಚಿವರನ್ನು ಸಂಪರ್ಕಿಸಿ ವಿದೇಶಕ್ಕೆ ಹೋಗುವವರಿಗೆ ಪ್ರಯಾಣಕ್ಕೆ ಅನುಮತಿ ನೀಡುವಂತೆ ವಿನಂತಿಸಿದ್ದರು.
ಅನುಮತಿ
ಭಾರತೀಯ ವಿಮಾನ ಯಾನ ಸಂಸ್ಥೆಯು ಗುರುವಾರ ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ. ಪ್ರಯಾಣಿಕರು ಭಾರತೀಯ ರಾಯಭಾರ ಅಥವಾ ಅಬುಧಾಬಿಯ ರಾಯಭಾರ ಕಚೇರಿಯ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ನೋಂದಣಿ ಪ್ರಕ್ರಿಯೆ ಪೂರ್ಣವಾದ ಬಳಿಕ ಟಿಕೆಟ್ ಮಾಡಬಹುದು.
ದುಬಾರಿ ಟಿಕೆಟ್
ಸಾಮಾನ್ಯವಾಗಿ 15ರಿಂದ 20 ಸಾವಿರ ರೂ.ಗಳಾಗುವ ಒಂದು ಬಾರಿಯ ಪ್ರಯಾಣಕ್ಕೆ ಈಗ 35ರಿಂದ 50 ಸಾವಿರ ರೂ.ವರೆಗೆ ಟಿಕೆಟ್ ದರ ವಿಧಿಸಲಾಗಿದೆ.
ಕೋವಿಡ್ ಸಂಕಟ
ಪ್ರಯಾಣಿಕರು 96 ಗಂಟೆ ಅವಧಿ ಮೀರದ ಕೋವಿಡ್19 ಪರೀಕ್ಷಾ ವರದಿ ಹೊಂದಿರಬೇಕು. ಉಡುಪಿಯ ಪ್ರಯೋಗಾಲಯದಲ್ಲಿ ಸಾವಿರಾರು ಗಂಟಲ ದ್ರವ ಮಾದರಿಗಳು ಪರೀಕ್ಷಾ ವರದಿಗಾಗಿ ಕಾಯುತ್ತಿದ್ದು ಈಗ ತುರ್ತಾಗಿ ವರದಿ ಬೇಕಾದ ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿ 40 ತಾಸಿನ ಬಳಿಕ ಪರೀಕ್ಷಾ ವರದಿ ಪಡೆಯಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ.
ಮಂಗಳೂರಿಗೆ ಹಲವು ವಿಮಾನ
ಜು.12ರಂದು ಬಹ್ರೈನ್ ಮತ್ತು ಮಸ್ಕತ್ನಿಂದ, ಜು.13ರಂದು ಶಾರ್ಜಾದಿಂದ, ಜು.14ರಂದು ಮಸ್ಕತ್ನಿಂದ ಮಂಗಳೂರಿಗೆ ಆಗಮಿಸಲಿದೆ. ಜು.22ರಂದು ಮಸ್ಕತ್ನಿಂದ ಬೆಂಗಳೂರಿಗೆ ಬರುವ ವಿಮಾನವು ರಾತ್ರಿ 9.10ಕ್ಕೆ, ಜು.28ರಂದು ಶಾರ್ಜಾದಿಂದ, ರಾತ್ರಿ 8.30ಕ್ಕೆ ಯುಎಇಯಿಂದ, ಜು.31ರಂದು ರಾತ್ರಿ 9.10ಕ್ಕೆ ಮಸ್ಕತ್ನಿಂದ ವಿಮಾನ ಮಂಗಳೂರಿಗೆ ಆಗಮಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್