ಮೇ 31ರ ವರೆಗೆ ಜಿಲ್ಲೆಯ ಗಡಿಯಲ್ಲಿ ಶಿಕ್ಷಕರು, ಪಂ.ಸಿಬಂದಿ
ಚೆಕ್ಪೋಸ್ಟ್ಗಳಿಂದ ಪೊಲೀಸ್ ಸಿಬಂದಿ ಬಿಡುಗಡೆ
Team Udayavani, May 22, 2020, 5:43 AM IST
ಬೆಳ್ಮಣ್: ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಭಾಗಗಳ ವಿವಿಧ ಚೆಕ್ಪೋಸ್ಟ್ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬಂದಿಯನ್ನು ಮೇ 21ರಿಂದ ಬಿಡುಗಡೆಗೊಳಿಸಿ ಕ್ವಾರಂಟೈನ್ ಕೇಂದ್ರಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.ಇದೀಗ ಮೇ. 31ರವರೆಗೆ ಈ ಚೆಕ್ಪೋಸ್ಟ್ ಗಳಲ್ಲಿ ಜಿಲ್ಲಾಡಳಿತ ನಿಯೋಜಿಸಲಾದ ಅಧ್ಯಾಪಕರು ಹಾಗೂ ಪಂಚಾಯತ್ ಸಿಬಂದಿ ಮಾತ್ರ ಗಡಿ ಕಾಯಬೇಕಾದ ಸ್ಥಿತಿಯೊದಗಿದೆ.
ಲಾಕ್ಡೌನ್ ಸಂದರ್ಭ ಉಡುಪಿ ಜಿಲ್ಲೆಗಳ ಗಡಿಭಾಗಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಇದ್ದುದರಿಂದ ರಾಜ್ಯದ ಇತರ ಜಿಲ್ಲೆಗಳಿಗಿಂತ ಉಡುಪಿ ಜಿಲ್ಲೆ ಕೋವಿಡ್ 19 ನಿಯಂತ್ರಣದಲ್ಲಿದೆ.ಚೆಕ್ಪೋಸ್ಟ್ ಗಳಲ್ಲಿನ ಪೊಲೀಸ್ ಸಿಬಂದಿಗಳು, ಅಧ್ಯಾಪಕರು ಹಾಗೂ ಪಂಚಾಯತ್ ಸಿಬಂದಿ ಬದ್ಧತೆಯಿಂದ ಈ ನಿಯಂತ್ರಣ ಸಾಧ್ಯವಾಗಿದ್ದು ಇದೀಗ ಲಾಕ್ಡೌನ್ ಸಡಿಲಿಕೆಯಾಗಿದ್ದು ಇದೀಗ ಚೆಕ್ಪೋಸ್ಟ್ ಗಳ ಅನಿವಾರ್ಯವೂ ಇಲ್ಲವಾದಂತಿದೆ.
ಗುರುವಾರದಿಂದ ಪೊಲೀಸರ ಸೇವೆಯೂ ಇಲ್ಲವಾಗಿದ್ದು ಎಲ್ಲ ಚೆಕ್ ಪೋಸ್ಟ್ಗಳ ಚಟುವಟಿಕೆಗಳು ನೀರಸವಾಗಿವೆ. ಇನ್ನು ಕೋವಿಡ್ 19 ನಿಯಂತ್ರಣ ಸ್ವಯಂ ಅವರವರ ಕೈಯಲ್ಲಿ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಇನ್ನು ಚೆಕ್ಪೋಸ್ಟ್ಗಳ ಅಗತ್ಯ ಇಲ್ಲ ಎಂಬಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ