ಪೂರ್ಣಗೊಳ್ಳದ ಕಾಮಗಾರಿಯಿಂದ ಗ್ರಾಮಸ್ಥರ ನಿರೀಕ್ಷೆ ಹುಸಿ
ನಿರುಪಯೋಗಿ ಸನ್ಯಾಸಿ ಬೆಟ್ಟು ನೂತನ ಕಿರು ಸೇತುವೆ
Team Udayavani, Sep 7, 2019, 5:30 AM IST
ಕೊಲ್ಲೂರು: ಚಿತ್ತೂರು ಗ್ರಾ.ಪಂ. ವ್ಯಾಪ್ತಿಯ ಸನ್ಯಾಸಿಬೆಟ್ಟಿನಲ್ಲಿನ ಹೊಳೆ ದಾಟಲು ನಿರ್ಮಾಣ ಗೊಂಡಿರುವ ಕಿರು ಸೇತುವೆ ಬಳಕೆಗೆ ಬಾರದೇ ನಿರುಪಯೋಗಿ ಆಗಿದ್ದು ಗ್ರಾಮಸ್ಥರ ಬಹಳಷ್ಟು ವರ್ಷಗಳ ನಿರೀಕ್ಷೆ ಹುಸಿಯಾಗಿದೆ.
10 ಲಕ್ಷ ರೂ. ವೆಚ್ಚದ ಕಿರುಸೇತುವೆ
ಸುಮಾರು 3 ವರುಷಗಳ ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡ ಕಿರುಸೇತುವೆ ಪೂರ್ಣಗೊಳ್ಳದಿರುವುದು ಆ ಭಾಗದ ನಿವಾಸಿಗಳಿಗೆ ನಿತ್ಯ ಗೋಳಿನ ಕತೆಯಾಗಿದೆ. ಬಹಳಷ್ಟು ನಿರೀಕ್ಷೆ ಹಾಗೂ ಆತಂಕದ ವಾತಾವರಣದಿಂದ ಮುಕ್ತಿ ದೊರಕೀತು ಎಂಬ ಆಶಾಭಾವನೆಯಿಂದ ಜೀವಿಸುತ್ತಿರುವ ಮಂದಿಗೆ ನಿರಾಶೆಯಾಗಿದೆ.
ಜೀವ ಬಲಿತೆಗೆದ ಸನ್ಯಾಸಿ ಬೆಟ್ಟು
ಹೊಳೆಯ ಮರದ ದಿಣ್ಣೆ ಮಾರ್ಗ
ಸನ್ಯಾಸಿಬೆಟ್ಟು ಪರಿಸರದಲ್ಲಿ ವಾಸವಾಗಿರುವ 8,10 ಕುಟುಂಬಗಳಿಗೆ ಚಿತ್ತೂರು ಪೇಟೆಗೆ ಬರಲು ದಾಟಬೇಕಾದ ಹೊಳೆಗೆ ಮರದ ದಿಣ್ಣೆ ಜೋಡಿಸಿ ವ್ಯವಸ್ಥೆ ಗೊಳಿಸಲಾಗಿತ್ತು. ಮಳೆಗಾಲದಲ್ಲಿ ಮರದ ದಿಣ್ಣೆಯ ಮೇಲೆ ಸರ್ಕಸ್ ಮಾಡಿ ಅಪಾಯದ ನಡಿಗೆಯಲ್ಲಿ ಸಾಗಬೇಕಾದ ಪರಿಸ್ಥಿತಿ ಇತ್ತು. 2 ವರುಷಗಳ ಹಿಂದೆ ತಾಯಿಯೊಡನೆ ಆ ಮಾರ್ಗವಾಗಿ ಶಾಲೆಗೆ ಸಾಗುತ್ತಿದ್ದ ಬಾಲಕಿ ಕಾಲು ಜಾರಿ ಹೊಳೆಗೆ ಬಿದ್ದು ನೀರುಪಾಲಾಗಿ ಮೃತಪಟ್ಟಿದ್ದಳು. ತದನಂತರ ವಯೋವೃದ್ಧರು ಸಹಿತ ಅನೇಕ ಮಂದಿ ಕಾಲು ಜಾರಿ ನೀರಿಗೆ ಬಿದ್ದು ಬದುಕುಳಿದ ಘಟನೆ ನಡೆದಿತ್ತು. ಗ್ರಾಮಸ್ಥರ ಮನವಿಯಂತೆ ಮಾಜಿ ಶಾಸಕರು ಕಿರು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಗೊಳಿಸಿದ್ದರು.
ಪೂರ್ಣಗೊಳ್ಳದ ರಿವಿಟ್ಮೆಂಟ್ ಕಾಮಗಾರಿ
ಕಿರು ಸೇತುವೆಯನ್ನು ಪೂರ್ಣ ಗೊಳಿಸಿರುವ ಕರಾವಳಿ ಅಭಿವೃದ್ಧಿ ಪ್ರಾ ಕಾರ ಮುಂದುವರಿದ 2 ಪಾರ್ಶ್ವದಲ್ಲಿನ ತಡೆಬೇಲಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸದೇ ಕೈಚೆಲ್ಲಿ ಕುಳಿತಿರುವುದು ಅಲ್ಲಿನ ನಿವಾಸಿಗಳ ನಿರೀಕ್ಷೆಯನ್ನು ಹುಸಿ ಮಾಡಿದೆ. ಸೇತುವೆಯ 2 ಪಾರ್ಶ್ವದಲ್ಲಿನ ಮಣ್ಣಿನ ತಡೆ ಗೋಡೆ ಭಾರೀ ಮಳೆಗೆ ಕೊಚ್ಚಿ ಹೋಗಿದೆ.
ತಾತ್ಕಾಲಿಕ ನೆಲೆಯಲ್ಲಿ ಪಾದಚಾರಿಗಳಿಗೆ ಸಾಗಲು ನಿರ್ಮಿಸಲಾಗಿರುವ ಮರದ ದಿಣ್ಣೆಗಳು ಕುಸಿದಿದ್ದು ಅಪಾಯದ ಅಂಚಿನಲ್ಲಿವೆ. ಇದಕ್ಕೊಂದು ಪೂರ್ಣ ಪ್ರಮಾಣದ ತಡೆಬೇಲಿ ನಿರ್ಮಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಸಂಪರ್ಕ ಕಡಿಯುವ ಭೀತಿ ಇದೆ.
ಶಾಸಕರಿಗೆ ಮನವಿ
ನಿರುಪಯೋಗಿ ಸೇತುವೆಯನ್ನು ರಿವಿಟ್ಮೆಂಟ್ ಮಾಡಿ ಪೂರ್ಣಗೊಳಿಸಲು ಲಕ್ಷಾಂತರ ರೂ. ವೆಚ್ಚ ತಗಲುವುದು. ಪಂ.ನಿಂದ ಅಷ್ಟೊಂದು ಸಂಪನ್ಮೂಲ ಕ್ರೋಡೀಕರಣ ಅಸಾಧ್ಯ. ಬೈಂದೂರು ಶಾಸಕರಿಗೆ ಮನವಿ ಸಲ್ಲಿಸಲಾಗುವುದು.
– ಸಂತೋಷ ಮಡಿವಾಳ,
ಅಧ್ಯಕ್ಷರು, ಚಿತ್ತೂರು ಗ್ರಾ.ಪಂ.
ಪರ್ಯಾಯ ವ್ಯವಸ್ಥೆ
ಸನ್ಯಾಸಿ ಬೆಟ್ಟುವಿನ ಕಿರು ಸೇತುವೆಯ ಸಮಸ್ಯೆ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅದಕ್ಕೊಂದು ಪರ್ಯಾಯ ವ್ಯವಸ್ಥೆ ಒದಗಿಸುವಲ್ಲಿ ಕ್ರಮ ಕೈಗೊಳ್ಳುತ್ತೇನೆ. ಆ ಭಾಗದ ನಿವಾಸಿಗಳ ಆತಂಕ ಬಗೆ ಹರಿಸಲಾಗುವುದು.
-ಬಿ. ಎಂ. ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು ಕ್ಷೇತ್ರ
ಸಂಪನ್ಮೂಲ ಕೊರತೆ
3 ವರ್ಷಗಳ ಹಿಂದೆ ಕಿರು ಸೇತುವೆ ನಿರ್ಮಾಣಗೊಂಡಿದೆ. ಪೂರ್ಣಗೊಳಿಸಲು ಆ ಸಂಪನ್ಮೂಲ ಕೊರತೆ ಇದೆ. ಶಾಸಕರು ಹಾಗೂ ಜಿ.ಪಂ. ನೆರವಿನೊಂದಿಗೆ ಮಿಕ್ಕುಳಿದ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು.
– ಉದಯ.ಜಿ ಪೂಜಾರಿ,
ತಾ.ಪಂ. ಸದಸ್ಯರು
– ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ