ಕಟಪಾಡಿ: ಅಕಾಲಿಕ ಮಳೆಯಿಂದ ಕಂಗೆಟ್ಟ ರೈತರು
ದೇಶದ ಬೆನ್ನೆಲುಬು ರೈತರ ಸಂಕಷ್ಟದ ರೋಧನ ಸರಕಾರಕ್ಕೆ ಕೇಳೀತೆ
Team Udayavani, Nov 17, 2021, 11:45 AM IST
ಕಟಪಾಡಿ: ಭತ್ತದ ಬೆಳೆಯು ಕಟಾವಿಗೆ ಸಿದ್ಧಗೊಂಡು ನಿಂತಂತಹ ಸಂದರ್ಭದಲ್ಲಿ ಈ ಬಾರಿ ಪ್ರಾಕೃತಿಕ ವಿಕೋಪದಿಂದಾದ ಸುರಿದ ಭಾರೀ ಮಳೆಯ ಕಾರಣದಿಂದ ಭತ್ತದ ಇಳುವರಿಯೂ ಕುಂಠಿತಗೊಂಡಿದ್ದು ಬೇಸಾಯದಲ್ಲಿ ಕೈ ಸುಟ್ಟುಕೊಳ್ಳುವಂತಾಗಿದೆ ಎಂದು ರೈತರು ಪರಿತಪಿಸುತ್ತಿದ್ದಾರೆ.
ಕೆಲವೆಡೆ ಬೆಳೆದು ನಿಂತ ಭತ್ತವು ಗದ್ದೆಗೆ ಉದುರಿದ್ದು, ಭತ್ತದ ಫಸಲು ಕಡಿಮೆಯಾಗಿ ರೈತರು ಕಂಗಾಲಾಗಿರುತ್ತಾರೆ.ಕಟಾವು ಪೂರೈಸಿದ ಬಳಿಕ ತಮ್ಮ ಜಾನುವಾರಗಳ ಮೇವಿಗೆ ಬೇಕಾದ ಬೈಹುಲ್ಲು ಕೂಡಾ ಗದ್ದೆಯಲ್ಲಿಯೇ ಕೊಳೆಯುವಂತಾಗಿದ್ದು, ಚಿಂತಾಕ್ರಾಂತರಾಗಿರುವ ರೈತರು ತಮ್ಮ ಕುಟುಂಬದ ಪೋಷಣೆಗೂ ಆಲೋಚಿಸಬೇಕಾದ ದುಸ್ಥಿತಿಯಲ್ಲಿದ್ದೇವೆ ಎಂದು ರೈತ ಮಣಿಪುರ ರಾಮೇರ್ ತೋಟದ ಹರೀಶ್ ಪರಿತಪಿಸುತ್ತಿದ್ದಾರೆ.
7 ಎಕರೆ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತಿದೆ. ಈ ಬಾರಿ 2 ಲಕ್ಷ ರೂ.ಗೂ ಅಕ ನಷ್ಟವಾಗಿದೆ. ಟ್ರ್ಯಾಕ್ಟರ್ ಸಾಲ ಕಟ್ಟಲೂ ಸಾಧ್ಯವಾಗುತ್ತಿಲ್ಲ. ಅಕಾಲಿಕ ಮಳೆಯಿಂದಾಗಿ ರೈತರ ಸಂಕಷ್ಟ ಹೇಳದಂತಾಗಿದೆ. ಪರಿಸ್ಥಿತಿ ಹಾಳಾಗಿದೆ ಎನ್ನುವ ಮಣಿಪುರದ ರೈತ ದಯಾನಂದ ಬಿ. ಸುವರ್ಣರು ಕಂಗಾಲಾಗಿದ್ದಾರೆ.
ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆಂಪೇ ಗೌಡ ಪ್ರತಿಕ್ರಿಯಿಸಿದ್ದು, ಅವರು ಅಕಾಲಿಕ ಮಳೆಯಿಂದಾಗಿ ಕೃಷಿ ಬಾತವಾಗಿದ್ದು, ಸರಕಾರದ ಗಮನಕ್ಕೂ ಇದೆ. ಪ್ರತ್ಯೇಕವಾಗಿ ಸರಕಾರದ ಗಮನಕ್ಕೆ ವರದಿ ಸಲ್ಲಿಸುವ ಪ್ರಮೇಯ ಇಲ್ಲ. ಎನ್ ಡಿ ಆರ್ ಎಫ್ ಮಾನದಂಡದಂತೆ ಅರ್ಜಿ ಸಲ್ಲಿಸಿದ ರೈತರಿಗೆ ಸಹಾಯಧನವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ
ಸರಕಾರ ಎಚ್ಚೆತ್ತು ದೇಶದ ಬೆನ್ನೆಲುಬಾದ ಈ ರೈತರಿಗೆ ಬೆನ್ನೆಲುಬಾಗಿ ನಿಂತು ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಮುಂದಾಗುವಂತೆ ರೈತರು ಆಗ್ರಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ