ಬೆಳ್ಳೆ: ಕೆಂಪುಕಲ್ಲು ಕೋರೆಗೆ ದಾಳಿ
Team Udayavani, Jun 6, 2019, 9:33 AM IST
ಶಿರ್ವ: ಬೆಳ್ಳೆ ಗ್ರಾಮದ ಕುಂತಳನಗರ ಬಳಿಯ 213/5 ಮತ್ತು 214/1 ಸರ್ವೇ ನಂಬರಿನ ಪಟ್ಟಾ ಜಾಗದಲ್ಲಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಬಗ್ಗೆ ಲಿಖೀತವಾಗಿ ದೂರು ಬಂದ ಹಿನ್ನೆಲೆಯಲ್ಲಿ ಗಣಿ-ಭೂ ವಿಜ್ಞಾನ, ಕಂದಾಯ ಇಲಾಖೆಯ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.
ಸ್ಥಳದಲ್ಲಿದ್ದ ಕೆಂಪುಕಲ್ಲುಗಳು, ಕಲ್ಲುಗಳನ್ನು ತುಂಬಿದ್ದ ಲಾರಿ, 2 ಟ್ರಿಲ್ಲರ್ ಮತ್ತು 2 ಟ್ರಾಲಿಗಳನ್ನು ವಶಕ್ಕೆ ಪಡೆದುಕೊಂಡು ಶಿರ್ವ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ದಾಳಿ ಸಂದರ್ಭ ಸ್ಥಳದಲ್ಲಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ. 213/5ರ 0.50 ಎಕ್ರೆ ಜಾಗದಲ್ಲಿ 9,49,000 ರೂ. ರಾಜಸ್ವದಷ್ಟು, ಹಾಗೂ 214/1ರ 0.28 ಎಕ್ರೆ ಜಾಗದಲ್ಲಿ ಅನುಮತಿ ಪಡೆಯದೆ 6500 ಎಂಟಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿರುವುದನ್ನು ದಾಖಲಿಸಲಾಗಿದೆ.
ಬುಧವಾರ ನ್ಯಾಯಾಲಯಕ್ಕೆ ರಜೆಯಿದ್ದ ಕಾರಣ ಗುರುವಾರ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುವುದಾಗಿ ಗಣಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇಲಾಖೆಯ ವಿಜ್ಞಾನಿಗಳಾದ ರಾಣಿ ನಾಯ್ಕ, ಮಹೇಶ್, ಕಂದಾಯ ಪರಿವೀಕ್ಷಕ ರವಿಶಂಕರ್, ಬೆಳ್ಳೆ ಗ್ರಾಮ ಕರಣಿಕ ಪ್ರದೀಪ್, ಸಹಾಯಕ ಸ್ಟಾನಿ ಮೊದಲಾದವರು ಕಾರ್ಯಾಚರಣೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ