ಬಡಗುಪೇಟೆ ಬಳಿ ಒಳಚರಂಡಿ ಪೈಪ್ಲೈನ್ಗಾಗಿ ರಸ್ತೆ ಅಗೆತ
ಸೂಚನಾ ಫಲಕಗಳಿಲ್ಲದೆ ವಾಹನ ಸವಾರರಿಗೆ ಅಪಾಯ
Team Udayavani, Feb 21, 2020, 5:42 AM IST
ಉಡುಪಿ: ಡ್ರೈನೇಜ್ ಪೈಪ್ ಅಳವಡಿಕೆಯ ಕಾರಣ ಬಡಗುಪೇಟೆಯ ಕೃಷ್ಣ ಮಠದ ಪ್ರವೇಶ ದ್ವಾರದ ಮುಂಭಾಗದಲ್ಲಿ ಫೆ.16ರಂದು ಕಾಮಗಾರಿಯನ್ನು ನಗರಸಭೆಯಿಂದ ಕೈಗೊಳ್ಳಲಾಗಿತ್ತು. ಮಣ್ಣು ಗಟ್ಟಿಯಾಗುವ ದೃಷ್ಟಿಯಿಂದ ಅಗೆದು ರಸ್ತೆಯನ್ನು ಹಾಗೆ ಬಿಡಲಾಗಿದೆ. ಆದರೆ ಕಾಮಗಾರಿ ಪ್ರಗತಿಯ ಬಗ್ಗೆ ಸೂಚನ ಫಲಕಗಳಿಲ್ಲದೆ ವಾಹನಗಳು ಈ ಮಣ್ಣಿನಲ್ಲಿ ಹೂತು ತೊಂದರೆಗೆ ಸಿಲುಕುವಂತಾಗಿದೆ.
ಮಣ್ಣಿನಲ್ಲಿ ಹೂತ ಲಾರಿ
ಬುಧವಾರ ಮುಂಜಾನೆ ಸ್ಥಳೀಯ ಅಂಗಡಿಗೆ ದಿನಸಿಗೆ ಹೊತ್ತು ಈ ಮಾರ್ಗದಲ್ಲಿ ಬಂದ ಲಾರಿ ಮಣ್ಣಿನಲ್ಲಿ ಹುದುಗಿ ಮಧ್ಯಾಹ್ನದವರೆಗೂ ಪರದಾಡಬೇಕಾಗಿ ಬಂತು. ಬಳಿಕ ಒಂದು ಬೈಕ್ ಒಂದು ಕಾರು ಕೂಡ ಈ ಕೆಸರ ರಸ್ತೆಗೆ ಸಿಲುಕಿತು.
ಸೂಚನೆ ಫಲಕ
ರಸ್ತೆ ದುರಸ್ತಿ ಪ್ರಗತಿಯ ಬಗ್ಗೆ ಸೂಚನೆ ಫಲಕಗಳಿಲ್ಲದಿರುವುದರಿಂದ ವಾಹನ ಸವಾರರು ಅಂದಾಜು ಸಿಗದೆ ಈ ಅಗೆದ ಗುಂಡಿಗಳಿಗೆ ಬಿದ್ದೇಳುವಂತಾಗಿದೆ. ಪರ ಊರಿನಿಂದ ಬರುವವರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಈಗಾಗಲೇ ಹಲವು ದ್ವಿಚಕ್ರ, ಕಾರುಗಳು ಅಪಘಾತಕ್ಕೆ ಒಳಗಾಗುತ್ತಿವೆೆ ಎನ್ನುತ್ತಾರೆ ಸ್ಥಳೀಯರು.
ವಾರದೊಳಗೆ ಕೆಲಸ
ತತ್ಕ್ಷಣ ಡಾಮರು ಕಾಮಗಾರಿ ಕೈಗೊಂಡಲ್ಲಿ ಒಳಗಿಂದೊಳಗೆ ಮಣ್ಣು ಕುಸಿದು ಹೊಂಡ ಬಿದ್ದು ಮತ್ತೆ ಹಿಂದಿನಂತೆಯೆ ಈ ಡ್ರೈನೇಜ್ ಕೊಳವೆಗೆ ಹಾನಿಯಾಗಲಿದೆ. ಸದ್ಯ ನೀರು ಹಾಕಿ ಮಣ್ಣನ್ನು ಸರಿಯಾಗಿ ಹುದುಗುವಂತೆ ಮಾಡಿ ಬಳಿಕ ಅದರ ಮೇಲೆ ಮಣ್ಣು ತುಂಬಿ ವಾರದೊಳಗೆ ಡಾಮರು ಕೆಲಸ ನಡೆಸಲಾಗುತ್ತದೆ. ಸದ್ಯ ಸೂಚನೆ ಫಲಕ ಅಳವಡಿಕೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು. ಸಾರ್ವಜನಿಕರ ಸಹಕಾರ ಬೇಕಿದೆ.
-ಮಾನಸಾ ಪೈ,
ತೆಂಕಪೇಟೆ ನಗರಸಭೆ ಸದಸ್ಯರು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್