ಸಾಮಾಜಿಕ ಅರಣ್ಯ ಪೋಷಣೆ ಮೂಲಕ ಸಮಾಜಕ್ಕೆ ಮಾದರಿ
Team Udayavani, Nov 28, 2020, 9:54 AM IST
ಕಟಪಾಡಿ, ನ. 27: ರಸ್ತೆ ಬದಿಯಲ್ಲಿ ಸುಂದರವಾಗಿ ಬೆಳೆದು ನಿಂತ ಗಿಡಗಳು, ಅವುಗಳ ಸುತ್ತ ಮಣ್ಣಿನ ಕಟ್ಟೆ, ಸುತ್ತಮುತ್ತಲ ಹುಲ್ಲುಗಳನ್ನು ತೆಗೆದು ಓರಣವಾಗಿ ಇಟ್ಟ ಸ್ಥಳ. ಇದು ಯಾವುದೋ ಪಾರ್ಕ್ನ ದೃಶ್ಯವಲ್ಲ. ಬದಲಾಗಿ ಇದೊಂದು ಮನೆ ಸನಿಹ ದಲ್ಲಿರುವ ಸಾಮಾಜಿಕ ಅರಣ್ಯವನ್ನು ಕಾಳಜಿ ವಹಿಸಿ ಪೋಷಿಸಿದ್ದಕ್ಕೊಂದು ಮಾದರಿ.
ಈ ದೃಶ್ಯ ಕಾಣಸಿಗುವುದು ಕಟಪಾಡಿ- ಶಿರ್ವ ರಸ್ತೆಯ ಸುಭಾಸ್ ನಗರ ಎಂಬಲ್ಲಿ. ಸಮಾಜ ಸೇವಕರಾದ ಮ್ಯಾಕ್ಸಿಂ ಆಲ್ವ ಅವರೇ ಇದರ ಹಿಂದಿನ ವ್ಯಕ್ತಿ. ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ಹೊಣೆಗಾರಿಕೆ ಯಡಿಯಲ್ಲಿ ಗಿಡಗಳನ್ನು ನೆಟ್ಟಿತ್ತು. ಆದರೆ ಇಲ್ಲಿ ಹುಲ್ಲು ಪೊದೆಗಳು ತುಂಬಿ ನಡೆ ದಾಡಲು ಕಷ್ಟವಾಗಿತ್ತು ಅಲ್ಲದೇ ದಾರಿಹೋಕರು, ವಾಹನ ಸವಾರರು ತ್ಯಾಜ್ಯ ಎಸೆಯಲು ಆರಂಭಿಸಿದ್ದರು. ಇದರಿಂದ ಮ್ಯಾಕ್ಸಿಂ ಅವರಿಗೆ ಮನೆಗೆ ನಡೆದಾಡು ವುದೂ ಕಷ್ಟ ಎಂಬ ಸ್ಥಿತಿ ಬಂದಿತ್ತು.
ಇದಕ್ಕೆಲ್ಲ ಮ್ಯಾಕ್ಸಿಂ ಅವರು ಅಂತ್ಯ ಹಾಡಿ ಇಡೀ ಪ್ರದೇಶವನ್ನು ಪರಿವರ್ತನೆಗೊಳಿಸಲು ಉದ್ದೇಶಿಸಿದರು. ಅದರಂತೆ ಕಸ ಗಳನ್ನು ತೆಗೆದು, ಗಿಡಗಂಟಿಗಳನ್ನು ಸ್ವತ್ಛ ಗೊಳಿಸಿದ್ದಾರೆ. ಗಿಡಗಳಿಗೆ ಕಟ್ಟೆ ಕಟ್ಟಿ ನೀರೆರೆದು ಪೋಷಿಸಿದ್ದಾರೆ. ಬಾನಾಡಿಗಳಿಗೆ ಉಪಯುಕ್ತವಾಗುವಂತೆ ನಡುವೆ ಹಣ್ಣುಗಳ ಗಿಡಗಳನ್ನೂ ನೆಟ್ಟು ಗೊಬ್ಬರ ಹಾಕಿದ್ದಾರೆ. ಇದರಿಂದ ರಸ್ತೆ ಬದಿ ಕಣ್ಸೆಳೆಯುವ ಸುಂದರ ಪ್ರದೇಶವೊಂದು ನಿರ್ಮಾಣಗೊಂಡಿದೆ. ರಸ್ತೆ ಪಕ್ಕದ ಈ ಭಾಗದಲ್ಲಿನ ಸ್ವತ್ಛತೆ ಗಮನ ಸೆಳೆಯುತ್ತಿದೆ. ಇಲ್ಲಿ ಬೆಳಗ್ಗಿನ ವಾಕಿಂಗ್ ಮನಮೋಹಕ ಎನಿಸುತ್ತದೆ ಎನ್ನುತ್ತಾರೆ ಸ್ಥಳೀಯರಾದ ಕುರ್ಕಾಲು ಸದಾಶಿವ ಬಂಗೇರ ಅವರು.
ಪ್ರಕೃತಿಗೆ ಉತ್ತಮ ಕೊಡುಗೆ : ಮನೆಯ ಮುಂಭಾಗದಲ್ಲಿ ತ್ಯಾಜ್ಯ ಎಸೆಯುವವರು ಇದೀಗ ಎಸೆಯುತ್ತಿಲ್ಲ. ಪರಿಸರದ ಸ್ವತ್ಛತೆಯ ಜತೆಗೆ ಪ್ರಕೃತಿಗೆ ಉತ್ತಮ ಕೊಡುಗೆ ನೀಡಿರುವ ಹೆಮ್ಮೆ ಇದೆ. –ಮ್ಯಾಕ್ಸಿಂ ಆಲ್ವ , ಸಮಾಜ ಸೇವಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ