ಸೋಮೇಶ್ವರ-ಹೆಬ್ರಿ ರಸ್ತೆ: ದುರಸ್ತಿಗೆ ಮುಂದಾದ ಇಲಾಖೆ
Team Udayavani, Aug 30, 2019, 5:46 AM IST
ಹೆಬ್ರಿ: ಸೋಮೇಶ್ವರದಿಂದ ಹೆಬ್ರಿ ಹೋಗುವ ಮಾರ್ಗದ ಸೋಮೇಶ್ವರ ಸರ್ಕಲ್ನಿಂದ ಸ್ವಲ್ಪ ಮುಂದಕ್ಕೆ ಬೈದೆ ಬೆಳಾರ್ ಸಮೀಪ ರಸ್ತೆ ಮಧ್ಯಭಾಗದ ವರೆಗೆ ಒಳಗಿನಿಂದ ಕುಸಿದಿರುವ ಬಗ್ಗೆ ಪತ್ರಿಕೆ ಆ. 29ರಂದು ವರದಿ ಪ್ರಕಟಿಸಿದ ಬೆನ್ನಲ್ಲೇ ಸಂಬಂಧಪಟ್ಟ ಇಲಾಖೆ ದುರಸ್ತಿ ಕಾರ್ಯಕ್ಕೆ ಮುಂದಾಗಿದೆ.
ಉಡುಪಿ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169ಎ ಮುಖ್ಯ ರಸ್ತೆ ಆಗಿರುವುದರಿಂದ ಶೀಘ್ರ ದುರಸ್ತಿ ಆಗದಿದ್ದಲಿ ಅಪಾಯ ಖಂಡಿತ ಎಂಬುದನ್ನು ತಿಳಿದ ಇಲಾಖೆ ಆ. 29ರ ಮುಂಜಾನೆ ಜೇಸಿಬಿ ಮೂಲಕ ಕೊಚ್ಚಿಹೋದ ಪ್ರದೇಶಕ್ಕೆ ಮಣ್ಣನ್ನು ತುಂಬಿ ಸಮತಟ್ಟು ಮಾಡುವ ಕೆಲಸ ಆರಂಭಿಸಿದೆ.
ಸಮಸ್ಯೆ ಬಗ್ಗೆ ಪತ್ರಿಕೆ ನಾಡಾ³ಲು ಪಿಡಿಒ ಪುರಂದರ ಅವರಲ್ಲಿ ವಿಚಾರಿಸಿದ ಬಳಿಕ ಸ್ಥಳಕ್ಕೆ ಸ್ವತಃ ಅವರೇ ಬ್ಯಾರಿಕೇಡ್ಗಳನ್ನು ಅಪಾಯವಿರುವ ಪ್ರದೇಶದಲ್ಲಿ ಅಳವಡಿಸುವುದರ ಮೂಲಕ ತಾತ್ಕಾಲಿಕ ಎಚ್ಚರಿಕೆ ಮಾರ್ಗಸೂಚಿ ಅಳವಡಿಸಿ ರುವುದು ಮೆಚ್ಚುಗೆಗೆ ಪಾತ್ರವಾಗಿದೆ.