ಶ್ರೀ ಪಟ್ಟಾಭಿರಾಮ, ಶ್ರೀ ಮುಖ್ಯಪ್ರಾಣ ದೇವರಿಗೆ ಮಹಾಭಿಷೇಕ
Team Udayavani, Aug 23, 2017, 8:55 AM IST
ಉಡುಪಿ: ಹಿರಿಯಡಕ ಸಮೀಪದ ಶ್ರೀ ಶೀರೂರು ಮೂಲ ಮಠದಲ್ಲಿ ಶ್ರೀ ಪಟ್ಟಾಭಿರಾಮ ದೇವರಿಗೆ ಹಾಗೂ ಜಾಭಾಲೀ ಮುನಿ ಪ್ರತಿಷ್ಠಿತ ಶ್ರೀ ಮುಖ್ಯಪ್ರಾಣ ದೇವರಿಗೆ ಸಲ್ಲುವ ವರ್ಷಾವಧಿ ಮಹಾಭಿಷೇಕವನ್ನು ಊರ ಪರವೂರ ಭಕ್ತರ ಸಮ್ಮುಖದಲ್ಲಿ ಶ್ರೀ ಶೀರೂರು ಮಠದ ಪೀಠಾಧಿಪತಿ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ರವಿವಾರ ನೆರವೇರಿದರು.
ಸಂಪ್ರದಾಯಬದ್ಧ ಮಹಾಭಿಷೇಕ
ಅಂದು ಪ್ರಾತಃಕಾಲದಲ್ಲಿ ಆರಂಭಗೊಂಡ ಮಹಾಭಿಷೇಕದಲ್ಲಿ ಮೊದಲಿಗೆ ಶ್ರೀ ಶೀರೂರು ಮೂಲ ಮಠದ ಪಟ್ಟಾಭಿರಾಮ ದೇವರಿಗೆ ಹಾಲು, ತುಪ್ಪ, ಜೇನು, ಬೆಲ್ಲ, ಬಾಳೆಹಣ್ಣು ಹಾಗೂ 108 ಎಳನೀರುಗಳಿಂದ ಅಭಿಷೇಕ ನಡೆಸಿ ತದನಂತರ ಇದೇ ಮಾದರಿಯಲ್ಲಿ ಶ್ರೀ ಪ್ರಾಣದೇವರಿಗೂ ವೇದೋಕ್ತ ಮಂತ್ರಸಹಿತವಾಗಿ ಅಭಿಷೇಕ ನಡೆಸಿದರು. ಆನಂತರ ಸಂಪ್ರದಾಯದಂತೆ ಸ್ವರ್ಣಾನದಿ ತಟದಲ್ಲಿ ಶ್ರೀ ಮಠದ ಪರಂಪರೆಯಲ್ಲಿ ಪೂಜಿಸಲ್ಪಟ್ಟ ವಿವಿಧ ದೇವರ ಪ್ರತಿಮೆಗಳಿಗೆ ಉದ್ವರ್ತನ ಸೇವೆ ಜರಗಿತು. ಉದ್ವರ್ತನದ ನಂತರ ಮಧ್ಯಾಹ್ನ ಮಹಾಪೂಜೆ, ವಿಶೇಷ ಅನ್ನಸಂತರ್ಪಣೆ ಮತ್ತು ರಾತ್ರಿ ರಂಗಪೂಜೆ ಜರಗಿತು.
ಇದೇ ಸಂದರ್ಭ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪಡುಬಿದ್ರಿಯ ತರಂಗಿಣಿ ಮತ್ತು ಮಾರ್ಪಳ್ಳಿ ಚೆಂಡೆ ಬಳಗದವರನ್ನು ಶೀರೂರು ಮುಖ್ಯಪ್ರಾಣ ಸನ್ನಿಧಿಯಲ್ಲಿ ಶೀರೂರು ಶ್ರೀಪಾದರು ಅಭಿನಂದಿಸಿ ಅನುಗ್ರಹ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಶ್ರೀ ದೇವರ ಲೋಹದ ಪ್ರತಿಮೆಗಳನ್ನು ವಿಶೇಷ ದ್ರವ್ಯಗಳಿಂದ ಉದ್ವರ್ತಿಸುವ ಈ ವಿಶೇಷ ಸೇವೆಯಲ್ಲಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಶೀರೂರು ಶ್ರೀಪಾದರ ಸಹಿತವಾಗಿ ಶ್ರೀ ಮಠದ ಬಳಗ, ಪಡುಬಿದ್ರಿ ತರಂಗಿಣಿ ಮಿತ್ರ ವೃಂದ, ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಚಂಡೆ ಬಳಗದವರು ಹಾಗೂ ಭಕ್ತರನೇಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು