ಸುರತ್ಕಲ್‌, ಹೆಜಮಾಡಿ ಟೋಲ್‌ ಶೀಘ್ರ ವಿಲೀನ : ಪತ್ರಕ್ಕೆ ಸ್ಪಂದಿಸಿದ ಭೂಸಾರಿಗೆ ಸಚಿವ ಗಡ್ಕರಿ


Team Udayavani, Aug 23, 2022, 2:48 PM IST

ಸುರತ್ಕಲ್‌, ಹೆಜಮಾಡಿ ಟೋಲ್‌ ಶೀಘ್ರ ವಿಲೀನ : ಪತ್ರಕ್ಕೆ ಸ್ಪಂದಿಸಿದ ಭೂಸಾರಿಗೆ ಸಚಿವ ಗಡ್ಕರಿ

ಕುಂದಾಪುರ: ಹೆಜಮಾಡಿಯಿಂದ ಕೇವಲ 11 ಕಿ.ಮೀ. ದೂರದಲ್ಲಿರುವ ಸುರತ್ಕಲ್‌ನಲ್ಲಿ ಹೆದ್ದಾರಿ ನಿಯಮಗಳನ್ನು ಮೀರಿ ಟೋಲ್‌ ವಸೂಲಾತಿ ನಡೆಯುತ್ತಿದ್ದು ಟೋಲ್‌ ರದ್ದು ಮಾಡಬೇಕೆಂದು ಕೇಂದ್ರ ಭೂಸಾರಿಗೆ ಖಾತೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಇಲ್ಲಿನ ನಿವಾಸಿ ಸಾಫ್ಟ್ವೇರ್‌ ಉದ್ಯೋಗಿ ವಿಘ್ನೇಶ್‌ ಶೆಣೈ ಪತ್ರ ಬರೆದಿದ್ದಾರೆ. ಇದಕ್ಕೆ ಕೇವಲ 14 ದಿನಗಳಲ್ಲಿ ಸ್ಪಂದನೆ ದೊರೆತಿದೆ.

ಪ್ರಯಾಣ ದುಬಾರಿ
ಕುಂದಾಪುರದಿಂದ ಮಂಗಳೂರಿಗೆ ಹೋಗುವಾಗ ಸಾಸ್ತಾನ, ಹೆಜಮಾಡಿ, ಸುರತ್ಕಲ್‌ನಲ್ಲಿ ಟೋಲ್‌ ಪಾವತಿಸಬೇಕಾಗುತ್ತದೆ. ಸುರತ್ಕಲ್‌ ಟೋಲ್‌ನಲ್ಲಿ ಮಂಗಳೂರು ನೋಂದ ಣಿಯ ಕೆಲವು ವಾಹನಗಳಿಗೆ ಈಗಲೂ ರಿಯಾಯಿತಿ ಇದೆ. ಆದರೆ ಉಡುಪಿ ನೋಂದಣಿ ಯವರು ಕಡ್ಡಾಯ ಪಾವತಿಸಬೇಕು. ಇದರಿಂದ ಕುಂದಾಪುರ -ಉಡುಪಿ -ಮಂಗಳೂರು ನಡುವಿನ ಸವಾರರಿಗೆ ಪ್ರಯಾಣ ತೀರಾ ದುಬಾರಿಯಾಗುತ್ತದೆ.

ಉತ್ತರ 
ಸುರತ್ಕಲ್‌ ಟೋಲ್‌ಗೇಟ್‌ ಆರಂಭಿಸಲು 2008ರ ಡಿ.5ರಂದು ನೋಟಿಫಿಕೇಶನ್‌ ಆಗಿದೆ. ಪಕ್ಕದ ಹೆಜಮಾಡಿಯಲ್ಲಿ ಟೋಲ್‌ ಆರಂಭಿಸಲು ಸೂಕ್ತ ಕಾರಣಗಳಿದ್ದವು. ಹಾಗಿದ್ದರೂ ಸುರತ್ಕಲ್‌ ಟೋಲ್‌ ಅನ್ನು ಹೆಜಮಾಡಿ ಟೋಲ್‌ ಜತೆ ವಿಲೀನ ಮಾಡಲು ಹೆ. ಇಲಾಖೆ ಪ್ರಾದೇಶಿಕ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿ, ಅಲ್ಲಿ ಮಾನ್ಯತೆಗೊಂಡಿದ್ದು ಕಾರ್ಯಹಂತದಲ್ಲಿದೆ ಎಂದು ಉತ್ತರಿಸಲಾಗಿದೆ.

ಹೆದ್ದಾರಿ ಪ್ರಾಧಿಕಾರ ಮಾಹಿತಿ ಸುರತ್ಕಲ್‌ ಟೋಲ್‌ಗೇಟ್‌ ಸಮೀಪದಲ್ಲಿರುವ ಹೆಜಮಾಡಿ ಮತ್ತು ತಲಪಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನ ಮಾಡಲು ಹೆದ್ದಾರಿ ಇಲಾಖೆ ಪ್ರಾಧಿಕಾರ ಮುಂದಾಗಿದೆ ಎಂದು ಆ. 19ರಂದು ಮೂಲಗಳು ತಿಳಿಸಿದ್ದು ವರದಿಯಾಗಿತ್ತು.

ಸಚಿವ ನಿತಿನ್‌ ಗಡ್ಕರಿಗೆ ಪತ್ರ
ಹೆಜಮಾಡಿಯಿಂದ 11 ಕಿ.ಮೀ. ದೂರದಲ್ಲಿ ಸುರತ್ಕಲ್‌ಲ್ಲಿ ಟೋಲ್‌ ಗೇಟ್‌ ಇದೆ. ಇಲ್ಲಿನ ವ್ಯವಸ್ಥೆಗಳೂ ತೀರಾ ಕಳಪೆಯಾಗಿವೆ. ಸುಸಜ್ಜಿತವಿಲ್ಲದೇ, ಮೂಲಭೂತ ಸೌಕರ್ಯವೂ ಇಲ್ಲದೇ, ಉತ್ತರ ಭಾರತದ ಸಿಬಂದಿ ವಾಹನ ಚಾಲಕರ ಜತೆ ಒರಟಾಗಿ ವರ್ತಿಸುತ್ತಾರೆ ಎಂದು ಗಡ್ಕರಿ ಅವರಿಗೆ ಬರೆದ ಪತ್ರದಲ್ಲಿ ವಿವರಿಸಲಾಗಿದೆ. ಇದಕ್ಕೂ ಮೊದಲು ವಿಘ್ನೇಶ್‌ ಶೆಣೈ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆದಿದ್ದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಆ. 4ರಂದು ನಿತಿನ್‌ ಗಡ್ಕರಿ ಅವರಿಗೆ ಪತ್ರವನ್ನು ಮೇಲ್‌ ಮಾಡಿದ್ದರು. ಆ. 6ರಂದು ಅಲ್ಲಿಂದ ಮಂಗಳೂರು ಕಚೇರಿಗೆ ರವಾನೆಯಾಗಿದೆ. ಆ.18ರಂದು ಹೆದ್ದಾರಿ ಇಲಾಖೆ ಮಂಗಳೂರಿನ ಯೋಜನ ನಿರ್ದೇಶಕರಿಂದ ಉತ್ತರ ಕಳುಹಿಸಲಾಗಿದೆ.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.