ತ್ರಿಭುಜ ಬೋಟ್ ಮೇಲೆತ್ತುವ ಚಿಂತನೆ: ಎಸ್ಪಿ
Team Udayavani, Jun 1, 2019, 9:19 AM IST
ಉಡುಪಿ: ಸುವರ್ಣ ತ್ರಿಭುಜ ಬೋಟ್ ನಾಪತ್ತೆಗೆ ಸಂಬಂಧಿಸಿದಂತೆ ತಜ್ಞರ ಮಾಹಿತಿ ಪಡೆಯಲಾಗು ವುದು. ನೌಕಾ ಪಡೆ ಹಾಗೂ ಸರಕಾರದ ಸಹಕಾರದಿಂದ ಬೋಟನ್ನು ಮೇಲಕ್ಕೆತ್ತುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು.
ಎಸ್ಪಿ ಕಚೇರಿಯಲ್ಲಿ ನಡೆದ ಫೋನ್ಇನ್ ಕಾರ್ಯ ಕ್ರಮದಲ್ಲಿ ಅವರು ಈ ಬಗ್ಗೆ ತಿಳಿಸಿದರು.
ಈಗಾಗಲೇ ಗೋವಾ, ಮಹಾರಾಷ್ಟ್ರ, ಕೇರಳ ಭಾಗಗಳಿಗೆ ಉಡುಪಿ ಪೊಲೀಸರ ತಂಡವನ್ನು ಕಳುಹಿಸಲಾಗಿದೆ. ಅಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಇದಕ್ಕೆ ಸಂಬಂಧಿಸಿದ ಯಾವುದಾದರೂ ಪ್ರಕರಣ ದಾಖಲಾಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ. ಆದರೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ತಜ್ಞರ ಮಾಹಿತಿ ಪಡೆದು ಸಮಾಲೋಚಿಸಲಾಗುವುದು ಎಂದರು.