ತಲ್ಲೂರು ಬಿರುಕು ಬಿಟ್ಟ ರಾಷ್ಟ್ರೀಯ ಹೆದ್ದಾರಿ
Team Udayavani, Jun 25, 2019, 5:38 AM IST
ಕುಂದಾಪುರ: ತಲ್ಲೂರಿನಿಂದ ಜಾಲಾಡಿಯವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ಮಾಡದೇ, ಅವೈಜ್ಞಾನಿಕವಾಗಿ ಮಾಡಿರುವ ಕಾರಣ ಈಗ ಹೆದ್ದಾರಿಯೇ ಬಿರುಕು ಬಿಡಲು ಆರಂಭಿಸಿದೆ. ರಸ್ತೆ ಬದಿ ಹಾಕಲಾದ ಮಣ್ಣು ಕೂಡ ಕುಸಿಯುತ್ತಿದೆ.
ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66 ರ ತಲ್ಲೂರಿನಿಂದ ರಾಜಾಡಿ ಸೇತುವೆಯವರೆಗಿನ ಮಧ್ಯದ ರಸ್ತೆಯುದ್ದಕ್ಕೂ ಹಲವೆಡೆಗಳಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಇನ್ನು ಸರಿಯಾಗಿ ಮಳೆಗಾಲವೇ ಆರಂಭವಾಗದಿದ್ದರೂ, ಒಂದೆರಡು ದಿನಗಳ ಮಳೆಗೆ ಈ ಸ್ಥಿತಿಯಾದರೆ, ಇನ್ನು ನಿರಂತರವಾಗಿ ಮಳೆ ಬರುತ್ತಿದ್ದಾಗ ಈ ಹೆದ್ದಾರಿಯ ಸ್ಥಿತಿ ಹೇಗಾಗಬಹುದು ಎನ್ನುವ ಆತಂಕ ಈಗ ಜನರದ್ದಾಗಿದೆ.
ಇಲ್ಲಿನ ಚರಂಡಿ ಸಮಸ್ಯೆಗೆ ಇನ್ನೂ ಸರಿಯಾದ ಪರಿಹಾರ ಸಿಕ್ಕಿಲ್ಲ. ಮೋರಿ ಅಳವಡಿಸಿದ್ದರೂ, ಅದು ಹಳೆಯದ್ದಾಗಿದೆ. ಅದರಲ್ಲಿ ಸರಾಗ ವಾಗಿ ನೀರು ಹರಿದು ಹೋಗುತ್ತಿಲ್ಲ. ತಲ್ಲೂರಿನಿಂದ ಸ್ವಲ್ಪ ಮುಂದಕ್ಕೆ ಹೆದ್ದಾರಿ ಯಲ್ಲಿಯೇ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದನ್ನು ಮನಗಂಡು ಅಲ್ಲಿಗೆ ಮೋರಿ ಅಳವಡಿಸಲಾಗಿತ್ತು. ಆದರೆ ಈಗ ಮತ್ತೂಂದು ಸಮಸ್ಯೆ ಎದುರಾಗಿದ್ದು, ಹೆದ್ದಾರಿಯ ಒಂದು ಬದಿಯಿಂದ ಬಿರುಕು ಬಿಡಲು ಆರಂಭಿಸಿದೆ.
ಮಣ್ಣು ಕುಸಿತ
ತಲ್ಲೂರಿನಿಂದ ಜಾಲಾಡಿಯವರೆಗಿನ ಹೆದ್ದಾರಿ ಬದಿ ಹಾಕಲಾದ ಮಣ್ಣೆಲ್ಲ ಕುಸಿದು ಗದ್ದೆಗಳು, ಇಲ್ಲೇ ಸಮೀಪದ ಚಟ್ಲಿ ಕೆರೆಗಳಿಗೆ ಬಿದ್ದಿದೆ. ಮಳೆ ಮತ್ತಷ್ಟು ಹೆಚ್ಚಾದಷ್ಟು ಈ ಮಣ್ಣಿನ ಕುಸಿತ ಮತ್ತೆ ಹೆಚ್ಚಾಗುವ ಭೀತಿ ಇದೆ.
– ಬಿ.ಎಂ. ಸುಕುಮಾರ್ ಶೆಟ್ಟಿ,ಬೈಂದೂರು ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…