ಪರ್ಯಾಯ “ಉಗ್ರಾಣ’ಕ್ಕೆ ಬರಲಿದೆ ಧವಸ ಧಾನ್ಯ…
Team Udayavani, Jan 6, 2018, 11:50 AM IST
ಉಡುಪಿ: ಪರ್ಯಾಯ ಪೂಜಾ ಉತ್ಸವ ಸಮೀಪಿಸುತ್ತಿದೆ ಎನ್ನುವಾಗ ಹೊರೆಕಾಣಿಕೆ ಆಗಮನವೂ ಆರಂಭವಾಗುತ್ತದೆ. ಇವುಗಳೆಲ್ಲವನ್ನೂ ಸಂಗ್ರಹಿಸಿಟ್ಟುಕೊಳ್ಳುವ ಸ್ಥಳವೇ ಗೋದಾಮು, ಸಾಂಪ್ರದಾಯಿಕ ಹೆಸರು “ಉಗ್ರಾಣ’. ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಪಲಿಮಾರು ಪರ್ಯಾಯದ ಉಗ್ರಾಣವನ್ನು ಸಿದ್ಧಪಡಿಸಲಾಗಿದೆ. ಇದರ ಉದ್ಘಾಟನೆಯನ್ನು ಶುಕ್ರವಾರ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು. ಸ್ವಾಗತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪರ್ಯಾಯಕ್ಕೆ ಹೊರೆಕಾಣಿಕೆ ಆರಂಭವೂ ಸ್ವಾಮೀಜಿಯವರ ಪುರಪ್ರವೇಶದ ಬಳಿಕ ಆರಂಭಗೊಳ್ಳುತ್ತದೆ. ಇದು ಜ. 15-16ರವರೆಗೂ ಮುಂದುವರಿಯುತ್ತದೆ. ಕರಾವಳಿಯಾದ್ಯಂತದಿಂದ ಜನರು ಹೊರೆಕಾಣಿಕೆ ಸಮರ್ಪಿಸಲಿದ್ದಾರೆ. ಇದರಲ್ಲಿ ತೆಂಗಿನ ಕಾಯಿ, ಸಿಂಗಾರದ ಹೂವು, ಬೇಳೇಕಾಳು, ತರಕಾರಿ, ಎಣ್ಣೆ, ತುಪ್ಪ ಹೀಗೆ ತರಹೇವಾರಿಗಳಿರುತ್ತವೆ. ಇವುಗಳು ಪರ್ಯಾಯೋತ್ಸವದಂದು ಆಗಮಿಸುವ ಸಾವಿರಾರು ಭಕ್ತರ ಭೋಜನಕ್ಕಾಗಿ. ಈ ಸಾಮಗ್ರಿಗಳನ್ನು ವಿಂಗಡಿಸಿಡುವುದೂ ಒಂದು ಕಲೆಯೇ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಯುವ ಬ್ರಾಹ್ಮಣ ಪರಿಷತ್ ಕಾರ್ಯಕರ್ತರು ಉಗ್ರಾಣವನ್ನು ನಿರ್ವಹಿಸುತ್ತಾರೆ.
“ಪ್ರಸ್ತುತದ ಉಗ್ರಾಣ 200×40 ಅಡಿ= 8,000 ಚದರಡಿ ವಿಸ್ತೀರ್ಣವಿದೆ. ಇದು ಸಿಪ್ಪೆ ಇರುವ ತೆಂಗಿನ ಕಾಯಿ ದಾಸ್ತಾನಿಗೆ ಸಾಕಾಗುವುದಿಲ್ಲ. ಆದ ಕಾರಣ ಇನ್ನೊಂದು ನಾಲ್ಕೈದು ಸಾವಿರ ಚದರಡಿಯ ಉಗ್ರಾಣವನ್ನು ನಿರ್ಮಿಸಲಿದ್ದೇವೆ’ ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ