ಬ್ರಹ್ಮಾವರ-ಕುಂಜಾಲು ರಸ್ತೆ ವಿಸ್ತರಣೆ ಅನಿವಾರ್ಯ
Team Udayavani, May 17, 2018, 6:15 AM IST
ಬ್ರಹ್ಮಾವರ: ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚುತ್ತಿರುವುದರಿಂದ ಬ್ರಹ್ಮಾವರ-ಕುಂಜಾಲು ರಸ್ತೆ ವಿಸ್ತರಣೆ ಅತಿ ಅವಶ್ಯವಾಗಿದೆ.
ದ್ವಿಪಥ ಅಗತ್ಯ
ಬ್ರಹ್ಮಾವರ-ಹೆಬ್ರಿ-ಸೀತಾನದಿ ಸಂಪರ್ಕಿ ಸುವ ಜಿಲ್ಲಾ ಮುಖ್ಯ ರಸ್ತೆ ಇದಾಗಿದ್ದು, ಕನಿಷ್ಠ ಪಕ್ಷ ಬ್ರಹ್ಮಾವರದಿಂದ ನೀಲಾವರ ಕ್ರಾಸ್ ತನಕ/ ಪೇತ್ರಿವರೆಗೆ ಆದರೂ ರಸ್ತೆ ದ್ವಿಪಥಗೊಳಸಬೇಕೆನ್ನುವ ಬೇಡಿಕೆ ಹೆಚ್ಚುತ್ತಿದೆ.
ಪ್ರಮುಖ ಸಂಪರ್ಕ ರಸ್ತೆ
ಬ್ರಹ್ಮಾವರ-ಹೆಬ್ರಿ ರಸ್ತೆಯು ಮುಖ್ಯ ವಾಗಿ ಕುಂಜಾಲು, ಆರೂರು, ನೀಲಾವರ, ಚೇರ್ಕಾಡಿ, ಕುಕ್ಕೆಹಳ್ಳಿ, ಕೊಕ್ಕರ್ಣೆ, ಸಂತೆಕಟ್ಟೆ ಮೊದಲಾದ ಊರುಗಳನ್ನು ಸಂಪರ್ಕಿಸು ತ್ತದೆ. ಸಹಸ್ರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಬ್ರಹ್ಮಾವರದಿಂದ ಹೆಬ್ರಿ ಆಗುಂಬೆ ಮೂಲಕ ಮಲೆನಾಡು ಜಿಲ್ಲೆಗಳಿಗೂ ಈ ರಸ್ತೆ ಸಂಧಿಸುತ್ತದೆ. ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ, ವಲಯ ಕೃಷಿ ಸಂಶೋಧನಾ ಕೇಂದ್ರ, ಲಿಟ್ಲರಾಕ್ ಸ್ಕೂಲ್, ನೀಲಾವರ ದೇವಸ್ಥಾನ ಮೊದಲಾದ ಸ್ಥಳಗಳನ್ನು ಸಂಪರ್ಕಿಸಲೂ ಇದೇ ರಸ್ತೆ ಬಳಕೆಯಾಗುತ್ತದೆ.
ಅಪಾಯಕಾರಿ ಸ್ಥಳ
ಚಾಂತಾರು ರೈಲ್ವೇ ಟ್ರಾÂಕ್ ಸಮೀಪ ತಿರುವು ಮುರುವು ರಸ್ತೆ ಇರುವುದರಿಂದ ಸಂಚಾರ ಅಪಾಯಕಾರಿಯಾಗಿದೆ. ಇತ್ತೀಚೆಗೆ ಈ ಭಾಗದಲ್ಲಿರುವ ಮೋರಿ ವಿಸ್ತರಿಸಿದ್ದರೂ ಆತಂಕ ತಪ್ಪಿದ್ದಲ್ಲ. ಆದ್ದರಿಂದ ರಸ್ತೆ ವಿಸ್ತರಿಸಿ ನೇರಗೊಳಿಸ ಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನು ನೀಲಾವರ ಕ್ರಾಸ್ನಿಂದ ಸ್ವಲ್ಪ ಮುಂದೆ ರಸ್ತೆ ಬದಿಯಲ್ಲೇ ಬೃಹತ್ ಮರಗಳಿವೆ. ಅಪಾಯಕಾರಿಯಾಗಿರುವ ಇಂತಹ ಮರ ಗುರುತಿಸಿ ತೆರವುಗೊಳಿಸಬೇಕಾಗಿದೆ. ಚರಂಡಿ ಮಾಯ ಕುಂಜಾಲು ತನಕ ಎರಡೂ ಕಡೆಗಳಲ್ಲಿ ಚರಂಡಿ ಮುಚ್ಚಿ ಹೋಗಿದೆ. ಮುಖ್ಯವಾಗಿ ಬ್ರಹ್ಮಾವರ ಪೇಟೆಯಿಂದ ನಂದಿಗುಡ್ಡೆ ಕ್ರಾಸ್ತನಕ, ಚಾಂತಾರು ರೈಲ್ವೇ ಸೇತುವೆ ಹಾಗೂ ಕುಂಜಾಲು ಪರಿಸರದಲ್ಲಿ ಚರಂಡಿಯ ತುರ್ತು ಅವಶ್ಯವಿದೆ.
ಹೆಚ್ಚಿದ ವಾಹನ ದಟ್ಟಣೆ
ಬೆಳಗ್ಗೆ ಹಾಗೂ ಸಂಜೆ ಸಮಯ ಈ ಮಾರ್ಗದಲ್ಲಿ ಅತಿ ವಾಹನ ದಟ್ಟಣೆ ಇರುತ್ತದೆ. ಶಾಲೆಗಳ ನೂರಾರು ಬಸ್, ಖಾಸಗಿ ಬಸ್ಗಳು, ಉದ್ಯೋಗ ನಿಮಿತ್ತ ತೆರಳುವವರು ಹೀಗೆ ವಿಪರೀತ ವಾಹನಗಳ ಓಡಾಟವಿರುತ್ತದೆ. ನೀಲಾವರ ಕೂರಾಡಿ ಸಂಪರ್ಕ ಸೇತುವೆ, ಆರೂರು ಬೆಳಾ¾ರು ಸೇತುವೆಯಿಂದ ಗ್ರಾಮಾಂತರ ಭಾಗಗಳು ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಇದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ.
ಪ್ರಸ್ತಾವನೆ ಇದೆ
ಸ್ಥಳೀಯಾಡಳಿತ ಹಾಗೂ ಲಿಟ್ಲರಾಕ್ನಿಂದ ರಸ್ತೆ ವಿಸ್ತರಣೆಗೆ ಮನವಿ ಬಂದಿದೆ. ಹೆಚ್ಚುವರಿ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.
– ಡಿ.ವಿ. ಹೆಗಡೆ,
ಸಹಾಯಕ ಕಾರ್ಯವಾಹಕ ಎಂಜಿನಿಯರ್, ಪಿಡಬ್ಲ್ಯೂಡಿ
ಪ್ರವೀಣ್ ಮುದ್ದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ