ಶ್ರೀಕೃಷ್ಣ ಮಠದ ಗೋಶಾಲೆಯಲ್ಲಿನ್ನು ಸಂಪೂರ್ಣ ದೇಸಿ ಗೋತಳಿ


Team Udayavani, May 31, 2019, 6:10 AM IST

cow

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಗೋಶಾಲೆ ಇನ್ನು ಸಂಪೂರ್ಣ ದೇಸಿ ತಳಿಯ ಗೋವುಗಳಿರಲಿವೆ. ಗೋಶಾಲೆಯಲ್ಲಿರುವ ವಿದೇಶಿ ತಳಿಗಳನ್ನು ಬೇರೆ ಗೋಶಾಲೆಗಳಿಗೆ ಸಾಗಿಸುವ ಅಥವಾ ಹೈನುಗಾರರಿಗೆ ಮಾರಾಟ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಪ್ರಸ್ತುತ ಗೋಶಾಲೆಯಲ್ಲಿ ಮಲೆನಾಡು ಗಿಡ್ಡ, ಅಮೃತ್‌ ಮಹಲ್‌ ಮೊದಲಾದ ದೇಶಿ ತಳಿಗಳ ಜತೆಗೆ ಜೆರ್ಸಿ, ಎಚ್‌ಎಫ್ ಮೊದಲಾದ ವಿದೇಶಿ ಹಾಗೂ ಕ್ರಾಸ್‌ ತಳಿಗಳು ಕೂಡ ಇದ್ದವು. ಇವುಗಳನ್ನು ಗೋಶಾಲೆಯಿಂದ ಬೇರೆ ಗೋಶಾಲೆಗಳಿಗೆ ಅಥವಾ ಇತರೆ ಹೈನುಗಾರರಿಗೆ ನೀಡಲಾಗುತ್ತಿದೆ. ವಿದೇಶಿ ತಳಿಗಳನ್ನು ಬೇರೆಡೆಗೆ ನೀಡುವ ಪ್ರಕ್ರಿಯೆ ಕಳೆದ ಎ.25ರಂದು ರಾಮನವಮಿ ಸಂದರ್ಭದಲ್ಲಿ ಆರಂಭಗೊಂಡಿತ್ತು. ಮೊದಲು ಹೋರಿಗಳನ್ನು ಬೇರೆಡೆಗೆ ಸಾಗಿಸಲಾಯಿತು.

ಈಗ ಎರಡನೇ ಹಂತದಲ್ಲಿ ದೇಸೀ ಅಲ್ಲದ ತಳಿಗಳನ್ನು ಮಂಗಳೂರಿನ ಗೋಶಾಲೆಗಳಿಗೆ ನೀಡುವ ಅಥವ ಅಗತ್ಯ ಇರುವವರಿಗೆ ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹಲವರು ಖರೀದಿ ಮಾಡುತ್ತಿದ್ದಾರೆ. ಇದು ಒಂದು ತಿಂಗಳು ಮುಂದುವರೆಯಲಿದೆ.

ರಾಜಸ್ಥಾನ ತಳಿಗಳು
ರಾಜಸ್ಥಾನದಿಂದ ರಾಟಿ, ಸಾಯಾÌಳ್‌ ತಳಿಯ 7 ಕರು ಹಾಗೂ ಒಂದು ಹೋರಿಯನ್ನು ಈಗಾಗಲೇ ಶ್ರೀಕೃಷ್ಣಮಠದ ಗೋಶಾಲೆಗೆ ತರಲಾಗಿದೆ. ಇವುಗಳು ಅಪ್ಪಟ ದೇಸೀ ತಳಿಗಳು. ಕರ್ನಾಟಕದ ತಳಿಗಳಿಗಿಂತ ಸ್ವಲ್ಪ ಹೆಚ್ಚು ಹಾಲು ಕೊಡುತ್ತವೆ.

ಗೋಶಾಲೆಗೆ ಗೋ ಉತ್ಪನ್ನದ ಪೈಂಟ್‌
ಗೋ ಶಾಲೆಗೆ ಗೋ ಉತ್ಪನ್ನದಿಂದಲೇ ತಯಾರಾದ ರಾಸಾಯನಿಕ ರಹಿತವಾದ ಪೈಂಟ್‌ ನೀಡುವ ಪ್ರಕ್ರಿಯೆ ಶೀಘ್ರ ಆರಂಭಗೊಳ್ಳಲಿದೆ. ಆರೂರಿನ ಪುಣ್ಯಕೋಟಿ ಗೋಶಾಲೆಯಲ್ಲಿ ಗೋಮೂತ್ರ, ಗೋಮಯ, ಸುಣ್ಣ, ಮಣ್ಣು, ಮಜ್ಜಿಗೆ ಮತ್ತು ಸಸ್ಯಗಳ ಮಿಶ್ರಣದಿಂದ ತಯಾರಿಸಲಾದ ಪೈಂಟ್‌ನ್ನು ತರಿಸಲಾಗಿದೆ. ಇದರಲ್ಲಿ ರಾಸಾಯನಿಕ ತೀರಾ ಕಡಿಮೆ ಎಂದು ಗೋಶಾಲೆಯ ಮೇಲ್ವಿಚಾರಕರು ತಿಳಿಸಿದ್ದಾರೆ.

ಸುವ್ಯವಸ್ಥಿತ ಗೋಶಾಲೆ ಯೋಜನೆ
ಪ್ರಸ್ತುತ ಗೋಶಾಲೆಯ ಒಳಗೆ ಸುಮಾರು 55ರಷ್ಟು ದನಗಳಿವೆ. ಅದಕ್ಕಿಂತ ಹೆಚ್ಚು ದನಗಳನ್ನು ಸಾಕಲು ಸ್ಥಳಾವಕಾಶವಿಲ್ಲ. ಒಂದು ವೇಳೆ ಶ್ರೀಕೃಷ್ಣ ಮಠದ ಪಕ್ಕದ 2 ಕಿ.ಮೀ ದೂರದಲ್ಲಿ ಸುಮಾರು 3 ಎಕರೆಯಷ್ಟು ಜಾಗ ಲಭ್ಯವಾದರೆ ಸುವ್ಯವಸ್ಥಿತವಾದ ಗೋಮಾಳ ಮಾಡಬಹುದು ಎನ್ನುತ್ತಾರೆ ಗೋಶಾಲೆಯ ಮೇಲುಸ್ತುವಾರಿ ಶ್ರೀನಿವಾಸ ಪೆಜತ್ತಾಯ ಅವರು.

ಜೂ.2: ಗೋವುಗಳ ಸಮ್ಮಿಲನ
ಸುವರ್ಣ ಗೋಪುರ ಸಮರ್ಪಣೋತ್ಸವದ ಪ್ರಯುಕ್ತ ಜೂ.2ರಂದು ರಥಬೀದಿಯಲ್ಲಿ 200ಕ್ಕೂ ಅಧಿಕ ದೇಸೀ ಗೋವುಗಳ ಸಮ್ಮಿಲನ ನಡೆಯಲಿದೆ. ಕೊಳಲು ವಾದನದೊಂದಿಗೆ ಗೋವುಗಳ ನಡುವೆ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಉತ್ಸವ ಜರಗಲಿದೆ. ಅಂದು ಗೋವುಗಳ ಕುರಿತಾದ ಸಮಗ್ರ ಮಾಹಿತಿಯನ್ನೊಳಗೊಂಡ ಗೋಷ್ಠಿಗಳು, ಸಂವಾದ, ಗೋ ಉತ್ಪನ್ನಗಳ ಸಮಗ್ರ ಪ್ರದರ್ಶನ ನಡೆಯಲಿದೆ. ಹೈನುಗಾರರು, ಇತರ ರೈತರಿಗೆ ಪೂರಕವಾದ ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ದೇಸೀ ಗೋವುಗಳ ಪ್ರಯೋಜನ, ಗೋ ಉತ್ಪನ್ನದ ಔಷಧೀಯ ಬಳಕೆಯ ಬಗ್ಗೆ ಸಮ್ಮಿಲನ ಬೆಳಕು ಚೆಲ್ಲಲಿದೆ.

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.