ಶಾಂಭವಿಯಲ್ಲಿ ಈ ಮಳೆಗಾಲದ ಮೊದಲ ನೆರೆ
ಪುಷ್ಯಾ ನಕ್ಷತ್ರದಲ್ಲಿ ಉತ್ತಮ ಮಳೆ ನಿರೀಕ್ಷೆ
Team Udayavani, Jul 20, 2019, 5:14 AM IST
ಬೆಳ್ಮಣ್: ಈ ವರ್ಷ ಆರ್ದ್ರಾ ಪುನರ್ವಸು ನಕ್ಷತ್ರಗಳಲ್ಲಿ ಮಳೆ ಕೊರತೆಯಾಗಿದ್ದರೂ, ಶುಕ್ರವಾರ ಪ್ರಾರಂಭಗೊಂಡ ನಕ್ಷತ್ರದ ಮಳೆಗೆ ಶಾಂಭವಿಯಲ್ಲಿ ಮೊದಲ ನೆರೆ ಬಂದಿದೆ.
ಕಳೆದ ವಾರ ಒಂದಿಷ್ಟು ಮಳೆಯಾಗಿದ್ದರಿಂದ ಮುಂಡ್ಕೂರು- ಸಂಕಲಕರಿಯದಲ್ಲಿ ಹರಿವ ಶಾಂಭವಿ ನದಿ ಒಂದಷ್ಟು ತುಂಬಿತ್ತು. ಗುರುವಾರ ರಾತ್ರಿಯಿಂದ ಮಳೆ ಬಿರುಸುಕೊಂಡಿದ್ದು, ಶುಕ್ರವಾರದ ನಿರಂತರ ಮಳೆಯಿಂದಾಗಿ ಹಳ್ಳ ಕೊಳ್ಳಗಳು ಭರ್ತಿಯಾಗಿ ನದಿಯೂ ತುಂಬಿ ಹರಿಯಿತು.
ಸಣ್ಣ ಮಟ್ಟಿನ ನೆರೆಯೂ ಬಂದಿದೆ. ಕಳೆದ ವರ್ಷ ಇದೇ ಸಂದರ್ಭ ಕುಂಭದ್ರೋಣ ಮಳೆಯಿಂದಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆಯಾಗಿತ್ತು.
ಕೃಷಿ ಕಾರ್ಯ ಇನ್ನೂ ಮುಗಿದಿಲ್ಲ
ಕೇವಲ ಮಳೆಯ ನೀರನ್ನೇ ನಂಬಿ ಕೃಷಿ ಚಟುವಟಿಕೆ ನಡೆಸುತ್ತಿರುವ ಕರಾವಳಿಯ ಹಲವಾರು ರೈತರ ಕೃಷಿ ಕೆಲಸಗಳು ಇನ್ನೂ ಮುಗಿದಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯ ಸುರಿಯುತ್ತಿರುವ ಮಳೆ ಭರವಸೆ ಸೃಷ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ